ಪ್ರತ್ಯೇಕ ಘಟನೆ: ನೇಣು ಬಿಗಿದು ಇಬ್ಬರು ಆತ್ಮಹತ್ಯೆ
ಕುಂದಾಪುರ, ಮಾ.4: ಜಪ್ತಿ ಗ್ರಾಮದ ಕೆರೆಜೆಡ್ಡು ಕೈಲ್ಕೆರೆ ನಿವಾಸಿ ಮಂಜುನಾಥ ಮಡಿವಾಳ (42) ಎಂಬವರು ಬುಧವಾರ ಜಪ್ತಿ ಗ್ರಾಮದ ಜನತಾ ಕಾಲೋನಿಯ ಲಕ್ಷ್ಮಣ ಮೊಗವೀರ ಎಂಬವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಅಂಬಲಪಾಡಿ ಗ್ರಾಮ ಬನ್ನಂಜೆಯಲ್ಲಿರುವ ಗುಲಾಬಿ ಶೆಡ್ತಿ ಎಂಬವರ ಮಗ, ಮಂಡ್ಯದಲ್ಲಿ ಹೊಟೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ಶೆಟ್ಟಿ, ಬುಧವಾರ ರಾತ್ರಿ ಮನೆಯ ಪಕ್ಕದಲ್ಲಿರುವ ಶೆಡ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮಂಡ್ಯದಿಂದ ಮನೆಗೆ ಬಂದಿದ್ದ ಇವರು ರಾತ್ರಿ ಊಟ ಮಾಡಿ ಮಲಗಿದ್ದು, ನಾಲ್ಕು ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದರು.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story