ಶಾಲಾ ಶುಲ್ಕ ಕಡಿತ ಆದೇಶ ಪಾಲಿಸದ ಶಾಲೆಗಳ ವಿರುದ್ದ ದೂರು: 8 ಶಾಲೆಗಳ ದೂರು ಇತ್ಯರ್ಥ
ಬೆಂಗಳೂರು, ಮಾ.6: ಶಾಲಾ ಶುಲ್ಕ ಕಡಿತಕ್ಕೆ ಸಂಬಂಧಿಸಿದಂತೆ ಸರಕಾರಿ ಆದೇಶವನ್ನು ಪಾಲಿಸದ 11 ಶಾಲೆಗಳ ವಿರುದ್ಧ ಪೋಷಕರು ದಾಖಲಿಸಿದ್ದ ದೂರುಗಳ ಪೈಕಿ 8 ಶಾಲೆಗಳ ವಿರುದ್ಧದ ದೂರುಗಳನ್ನು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲ ಅಧ್ಯಕ್ಷತೆಯಲ್ಲಿ ಇತ್ಯರ್ಥ ಪಡಿಸಲಾಗಿದೆ.
11 ಶಾಲೆಗಳು: ಚಿಕ್ಕಬಣಾವರದ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಹೆಬ್ಬಾಳದ ಜೈನ್ ಹೆರಿಟೇಜ್ ಶಾಲೆ, ಚೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಕ್ಲೂನಿ ಕಾನ್ವೆಂಟ್, ವೆಬ್ಗಯಾರ್, ಲಿಟ್ಲ್ ಲಿಸ್ಸಿಸ್ ಇಂಗ್ಲಿಷ್ ಸ್ಕೂಲ್, ಮೌಂಟ್ ಲಿಟೇರಾ ಹೈ ಸ್ಕೂಲ್, ಕ್ರಿಸಾಲೀಸ್ ಶಾಲೆ, ವಿವೇಕಾನಂದ ಶಾಲೆ, ನಾಗಾರ್ಜುನ ಹೈಸ್ಕೂಲ್ಗಳ ವಿರುದ್ಧ ಪೋಷಕರು ದೂರು ದಾಖಲಿಸಿದ್ದರು.
Next Story