Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. "ಕೋಮುವಾದವನ್ನು ಪ್ರೋತ್ಸಾಹಿಸಲು ಏನು...

"ಕೋಮುವಾದವನ್ನು ಪ್ರೋತ್ಸಾಹಿಸಲು ಏನು ಮಾಡಲೂ ಸಿದ್ಧವಿರುವ ಅಮಿತ್‌ ಶಾ ನಮಗೆ ಜಾತ್ಯತೀತತೆ ಕಲಿಸಲು ಬಂದಿದ್ದಾರೆ"

ಗೃಹಸಚಿವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಪಿಣರಾಯಿ ವಿಜಯನ್

ವಾರ್ತಾಭಾರತಿವಾರ್ತಾಭಾರತಿ9 March 2021 4:48 PM IST
share
ಕೋಮುವಾದವನ್ನು ಪ್ರೋತ್ಸಾಹಿಸಲು ಏನು ಮಾಡಲೂ ಸಿದ್ಧವಿರುವ ಅಮಿತ್‌ ಶಾ ನಮಗೆ ಜಾತ್ಯತೀತತೆ ಕಲಿಸಲು ಬಂದಿದ್ದಾರೆ

ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ʼಕೋಮುವಾದ ಮೂರ್ತವೆತ್ತಂತಿದ್ದಾರೆ' ಹಾಗೂ ಅಪಹರಣ, ನಕಲಿ ಎನ್‍ಕೌಂಟರ್ ಮುಂತಾದ  ಆರೋಪಗಳನ್ನು ಹೊತ್ತು ಜೈಲು ಶಿಕ್ಷೆ ಅನುಭವಿಸಿದವರು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.

ಚಿನ್ನ ಮತ್ತು ಡಾಲರ್ ಸ್ಮಗ್ಲಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಣರಾಯಿ ಅವರತ್ತ  ಪ್ರಶ್ನೆಗಳ ಸುರಿಮಳೆಯನ್ನು ಅಮಿತ್ ಶಾ ಹರಿಸಿದ ನಂತರ ಸಿಎಂರಿಂದ ಈ ತೀಕ್ಷ್ಣ ವಾಗ್ದಾಳಿ ನಡೆದಿದೆ. ನಕಲಿ ಎನ್‍ ಕೌಂಟರ್ ಮತ್ತು ಅಪಹರಣ ಪ್ರಕರಣಗಳ ಚಾರ್ಜ್ ಶೀಟ್‍ನಲ್ಲಿ ಯಾರ ಹೆಸರು ಉಲ್ಲೇಖಗೊಂಡಿದೆ ಎಂದು ಕೇರಳ ಸಿಎಂ ಕೇಂದ್ರ ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ.

"ಅಮಿತ್ ಶಾ ಅವರು ಕೋಮುವಾದವೇ ಮೂರ್ತವೆತ್ತಂತಿದ್ದಾರೆ. ಕೋಮುವಾದ ಪ್ರೋತ್ಸಾಹಿಸಲು ಅವರು ಏನು ಬೇಕಾದರೂ ಮಾಡುತ್ತಾರೆ. ಅವರು ಕೇಂದ್ರ ಸಚಿವರಾದರೂ ಹೆಚ್ಚು ಬದಲಾಗಿಲ್ಲ. ಕೋಮುವಾದವನ್ನು ಪ್ರೋತ್ಸಾಹಿಸುವ ಆರೆಸ್ಸೆಸ್ ನಾಯಕ ನಮಗೆ ಜಾತ್ಯತೀತತೆ ಬಗ್ಗೆ ಕಲಿಸಲು ಇಲ್ಲಿಗೆ ಬಂದಿದ್ದಾರೆ" ಎಂದು ವಿಜಯನ್ ಹೇಳಿದರು.

"ಅವರು ನಿನ್ನೆ ನನಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ  ಅಪಹರಣಕ್ಕಾಗಿ ಜೈಲುಪಾಲಾದವನು ನಾನಲ್ಲ ಎಂದು ನಾನು ಅವರಿಗೆ ನೆನಪಿಸಬಯಸುತ್ತೇನೆ.  ನಕಲಿ ಎನ್‍ಕೌಂಟರ್ ಪ್ರಕರಣವೊಂದರ ಚಾರ್ಜ್ ಶೀಟ್‍ನಲ್ಲಿ ಯಾರ ಹೆಸರು ಉಲ್ಲೇಖಗೊಂಡಿತ್ತು? ಯಾರನ್ನು ಬಂಧಿಸಲಾಗಿತ್ತು ಹಾಗೂ ಯಾರು ಜೈಲುಪಾಲಾಗಿದ್ದು ಎಂದು ಅಮಿತ್ ಶಾ ಅವರಿಗೆ ನೆನಪಿದೆಯೇ? ಅದೇ ವ್ಯಕ್ತಿ ಕೊಲೆ, ಅಪಹರಣ, ಬಲವಂತದ ವಸೂಲಿ ಹಾಗೂ ಅಕ್ರಮ  ಗೂಢಚರ್ಯೆ ನಡೆಸಿದ ಆರೋಪ ಎದುರಿಸಿದ್ದರು" ಎಂದು ಧರ್ಮಡಂ ಎಂಬಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಪಿಣರಾಯಿ ಹೇಳಿದರು.

ಸೊಹ್ರಾಬುದ್ದೀನ್ ಶೇಖ್,  ಆತನ ಪತ್ನಿ ಕೌಸರ್ ಬೀ ಹಾಗೂ ತುಳಸೀರಾಂ ಪ್ರಜಾಪತಿ ಪ್ರಕರಣಗಳನ್ನು ಉಲ್ಲೇಖಿಸಿದ ಪಿಣರಾಯಿ "ಎಲ್ಲವೂ ನಕಲಿ ಎನ್‍ಕೌಂಟರ್ ಪ್ರಕರಣಗಳಾಗಿದ್ದವು. ಈ ಎಲ್ಲಾ ಅಪರಾಧಗಳಿಗೆ ಸಂಬಂಧಿಸಿದಂತೆ ಯಾರ ವಿರುದ್ಧ ಪ್ರಕರಣ ದಾಖಲಾಗಿತ್ತು? ಆ ಹೆಸರು ಅಮಿತ್ ಶಾ," ಎಂದು ಹೇಳಿದ ಪಿಣರಾಯಿ  ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿ ಎಚ್ ಲೋಯಾ ಶಂಕಾಸ್ಪದ ಸಾವು ಪ್ರಕರಣ  ಉಲ್ಲೇಖಿಸಿ ಯಾವ ಬಿಜೆಪಿ ನಾಯಕ ಈ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.

"ನಮಗೆಲ್ಲರಿಗೂ 2013ರ ಅಕ್ರಮ ಗೂಢಚರ್ಯೆ ಪ್ರಕರಣದ ಕುರಿತು ತಿಳಿದಿದೆ. ನಂತರ ದೂರುದಾರ ಮಹಿಳೆ ದೂರು ಕೈಬಿಟ್ಟರು. ಈ ಪ್ರಕರಣದಲ್ಲಿ ಯಾರು ಜೈಲಿನಲ್ಲಿದ್ದರು? ನೀವು  ಹೊಂದಿರುವ ಹುದ್ದೆಗೆ ತಕ್ಕಂತೆ ನೀವು ವರ್ತಿಸದೇ ಇದ್ದರೆ ನಿಮ್ಮ ತಪ್ಪುಗಳನ್ನು ಪಟ್ಟಿ ಮಾಡುವುದು ನಮಗೆ ಅನಿವಾರ್ಯ" ಎಂದು ಪಿಣರಾಯಿ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X