ಉಳ್ಳಾಲ: ಮಾ. 12ರಂದು ಯುನಿವೆಫ್ ನಿಂದ 'ಯುವಕರ ಸಮಾಗಮ'
ಮಂಗಳೂರು : ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ ಮಾ.12ರ ಸಂಜೆ 7 ಗಂಟೆಗೆ ಉಳ್ಳಾಲ ನಗರಸಭೆ ಕಚೇರಿ ಬಳಿ ಇರುವ ಸಮುದಾಯ ಭವನದಲ್ಲಿ "ಯುವಕರ ಸಮಾಗಮ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ "ಮುಸ್ಲಿಂ ಸಮುದಾಯ-ಭೂತ, ವರ್ತಮಾನ ಮತ್ತು ಭವಿಷ್ಯ" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ ಮೊ. 9886060530 ನ್ನು ಸಂಪರ್ಕಿಸಬಹುದು.
Next Story





