ರಾಜಾ ಕಾಲುವೆಯ ದುರಸ್ತಿ ಕಾರ್ಯ ನಿರ್ವಹಿಸಿದ ಗುತ್ತಿಗೆದಾರರ ಬೇಜವಾಬ್ದಾರಿ ಪ್ರಶ್ನಾರ್ಹ: ವೆಲ್ಫೇರ್ ಪಾರ್ಟಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಪಾಂಡೇಶ್ವರದಲ್ಲಿನ ರಾಜಾ ಕಾಲುವೆಗೆ ಸೇರುವ ತ್ಯಾಜ್ಯ ನೀರು ಗಳನ್ನು ತಡೆಯುವ ಸಲುವಾಗಿ ಸಲ್ಲಿಸಿದ ಸಾರ್ವಜನಿಕರ ಸಲಹೆಗಳಿಗೆ ಕಿವಿಗೊಡುವ ವ್ಯವಧಾನ ಪಾಲಿಕೆಯ ಅಧಿಕಾರಿಗಳು ಮತ್ತು ಆಡಳಿತ ವರ್ಗದಲ್ಲಿ ಇಲ್ಲದೆ ಹೋದರೂ, ಕೊನೆಯ ಪಕ್ಷ ಕಾಲುವೆಯಲ್ಲಿನ ಎರಡೂ ಬದಿಗಳಲ್ಲಿರುವವುಗಳಲ್ಲಿನ ಗೋಡೆಗಳಲ್ಲಿ ಒಂದು ಬದಿಯನ್ನಾದರೂ ಸದ್ಯ ದುರಸ್ತಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ಮನಪಾದವರು ಅದರ ಗುತ್ತಿಗೆ ನೀಡಿದ ಮಂದಿಗೆ ದುರಸ್ತಿಯ ನಂತರ ಅಲ್ಲಿ ಉಳಿಯುವ ಸಾಮಗ್ರಿಗಳನ್ನೂ ತೆರವುಗೊಳಿಸಲು ಹೇಳಲಿಲ್ಲವೇ ಅಥವಾ ಅದಕ್ಕೆ ಪ್ರತ್ಯೇಕ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆ ಮಾಡಬೇಕಾಗಿದೆಯೇ ಎಂಬುವುದಾಗಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ಪ್ರಕಟಣೆಯಲ್ಲಿ ಪ್ರಶ್ನಿಸಿದರು.
ಅಲ್ಲಿನ ಕೆಲಸದಲ್ಲಿ ಸಾರ್ವಜನಿಕರ ನಿಜವಾದ ಬೇಡಿಕೆಯಾಗಿದ್ದ ಒಳಚರಂಡಿಯ ನೀರು, ಕಾಲುವೆಗೆ ಸೇರಿ ಹೊರಚರಂಡಿಯಾಗಿ ಹರಿಯುವುದ ರಿಂದ ಆಗುವ ಪರಿಸರದ ದುರ್ನಾತಕ್ಕೆ ಪರಿಹಾರವಾಗದಿದ್ದರೂ, ಕನಿಷ್ಠಪಕ್ಷ ಮಾಡಿರುವ ಬದಿಯ ಗೋಡೆಗಳ ದುರಸ್ತಿಯ ನಂತರ ಅಳಿದುಳಿದ ಸಾಮಗ್ರಿಗಳನ್ನೂ ಬೇಕಾಬಿಟ್ಟಿ ಎಸೆದಂತೆ ಬಿಟ್ಟಿದ್ದು ಇನ್ನೂ ತೆರವುಗೊಳಿಸದೆ ಅಲ್ಲಿನ ನಿತ್ಯ ಪ್ರಯಾಣಿಕರುಗಳಾದ, ಸಾರ್ವಜನಿಕರಿಗೆ ಆಗುತ್ತಿ ರುವ ತೊಂದರೆಗಳ ಬಗ್ಗೆ ಗಮನ ಹರಿಸಬೇಕಾಗಿದೆಯೆಂದರು.
ಇದು ಇಲ್ಲಿನ ಕಾಮಗಾರಿಯ ಗುತ್ತಿಗೆದಾರರ ಬೇಜವಾಬ್ದಾರಿತನಕ್ಕೆ ನಿದರ್ಶನವಾಗಿದ್ದು, ಇಂದು ಸರಕಾರದಿಂದ ಪಡೆಯುವ ಗುತ್ತಿಗೆದಾರರ ಇಷ್ಟೊಂದು ನಿರ್ಲಕ್ಷ್ಯತನ ಸಾಮಾನ್ಯವಾಗಿದ್ದು, ಇತ್ತೀಚಿಗೆ ವಿಟ್ಲ ಪೇಟೆಯಲ್ಲಿನ ರಸ್ತೆಯ ಡಾಮರೀಕರಣ ಕೆಲಸವನ್ನು ವಹಿಸಿಕೊಂಡಿದ್ದ ಜನಗಳು ಅಲ್ಲಿನ ಶಾಲಾರಸ್ತೆ ಬದಿಯಲ್ಲಿ (ರಸ್ತೆಭಾಗ ಸೇರಿ) ಕಾರು ನಿಲುಗಡೆಗೊಳಿಸಿ ಹೋದವನನ್ನು ಕರೆಸಿ ಅದನ್ನು ತೆರವುಗೊಳಿಸುವ ಬದಲು ಅಷ್ಟೊಂದು ರಸ್ತೆಯ ಭಾಗದಲ್ಲಿ ಡಾಮರು ಬಳಿಯದೆ ಬಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಷಯವನ್ನು ಉದಾಹರಿ ಸಿದ ಅವರು ಇಲ್ಲೆಲ್ಲಾ ಸರಕಾರಿ ಅಧಿಕಾರಿಗಳು ಇಂತಹ ಜನಗಳ ಅಸಮರ್ಪಕ ಕೆಲಸದ ಬಗ್ಗೆ ಕಣ್ಗಾವಲು ಮಾಡದೆ ಇರುವುದೇ ಸಮಸ್ಯೆಗಳಿಗೆ ಕಾರಣ, ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ ತಕ್ಷಣ ಗಮನಹರಿಸಿ ಸರಿಪಡಿಸಬೇಕಾದ ಅಗತ್ಯವಿದೆಯೆಂದವರು ಹೇಳಿದರು.







