Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮುಂದುವರಿದ ಅಧ್ಯಾಯ: ಮೊದಲ ಪುಟಕೂ ಕೊನೆಯ...

ಮುಂದುವರಿದ ಅಧ್ಯಾಯ: ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಇನಿತೇ ಅಂತರ!

ಶಶಿಕರ ಪಾತೂರುಶಶಿಕರ ಪಾತೂರು21 March 2021 12:10 AM IST
share
ಮುಂದುವರಿದ ಅಧ್ಯಾಯ: ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಇನಿತೇ ಅಂತರ!

ನನಗೆ ಕತೆ ಓದುವುದಕ್ಕಿಂತ ಕೇಳುವುದಕ್ಕೆ ಇಷ್ಟ ಅನ್ನುತ್ತಾನೆ ನಾಯಕ. ಚಿತ್ರದಲ್ಲಿ ನಾಯಕ ಪೊಲೀಸ್ ಅಧಿಕಾರಿ. ತಾನು ತನಿಖೆ ನಡೆಸುತ್ತಿರುವ ಅಪರಾಧಿ ಕೃತ್ಯದ ಕುರಿತಾದ ವಿವರಣೆಯನ್ನು ಕತೆ ಎನ್ನುವಂತೆ ಕೇಳುವುದೇ ನೈಜತೆಗೆ ದೂರವಾದ ಮಾತು. ಈ ತನಿಖೆಯನ್ನು ಚಿತ್ರದ ನಾಯಕನಿಗೆ ಒಪ್ಪಿಸುವ ಗೃಹಮಂತ್ರಿ ಕೂಡ, ಇಂತಹ ಒಳ್ಳೆಯ ಥ್ರಿಲ್ಲಿಂಗ್ ಸ್ಟೋರಿ ಸಿಗುತ್ತೆ ಅಂದರೆ ಅವನು ಬಂದೇ ಬರುತ್ತಾನೆ ಅಂತಾರೆ! ಅಲ್ಲಿಗೆ ನಿರ್ದೇಶಕರು ಇದನ್ನೊಂದು ನೈಜ ಘಟನೆ ಮಾದರಿಯ ಚಿತ್ರಣವಾಗಿ ತೋರಿಸುವ ಬದಲು ಒಂದು ಕತೆಯ ವೀಡಿಯೊ ನಿರೂಪಣೆಗಷ್ಟೇ ಸಿನೆಮಾ ಮಾಡಿದ್ದಾರೆ ಎನ್ನುವುದು ಸಾಬೀತಾಗುತ್ತದೆ.

ಸಿನೆಮಾ ಆರಂಭವಾದ ಅರ್ಧ ಗಂಟೆಯ ಬಳಿಕ ಚಿತ್ರದ ನಾಯಕ ಪೊಲೀಸ್ ಅಧಿಕಾರಿ ‘ಬಾಲ’ನ ಆಗಮನವಾಗುತ್ತದೆ. ಇನ್ನು ಅರ್ಧ ಗಂಟೆಯ ಬಳಿಕ ಅದುವರೆಗೆ ನಡೆದ ಒಟ್ಟು ಕತೆಯ ಗೋಜಲುಗಳನ್ನು ನಿವಾರಿಸುವ ರೀತಿಯಲ್ಲಿ ಬಾಲ ವಿವರಿಸುತ್ತಾರೆ. ಅಂದರೆ ಮಧ್ಯಂತರದ ಹೊತ್ತಿಗೆ ಸಿನೆಮಾ ನೋಡಲು ಶುರು ಮಾಡಿದರೆ ಗೋಜಲುಗಳಿಲ್ಲದೆ ಸಿನೆಮಾ ನೋಡಿಕೊಂಡು ಹೋಗಬಹುದು ಎಂದಾಯಿತು. ಆದರೆ ವಿರಾಮ ಸಮಯ ದಾಟಿ ಬಳಿಕ ಬಂದು ನೋಡಿದರೆ ಮತ್ತಷ್ಟು ಗೋಜಲುಗಳು ಹಾಗೂ ಅಂತ್ಯದಲ್ಲಿ ಅವುಗಳಿಗೂ ಆದಿತ್ಯ ನೀಡುವ ವಿವರವಾದ ಮಾಹಿತಿಯೊಂದಿಗೆ ಸಿನೆಮಾ ಕೊನೆಯಾಗುತ್ತದೆ. ಒಟ್ಟಿನಲ್ಲಿ ಸಿನೆಮಾ ದೃಶ್ಯ ರೂಪದ ನಿರೂಪಣೆಗಿಂತ ಕತೆ ಹೇಳುವ ರೀತಿಯಲ್ಲೇ ಪರಿಪೂರ್ಣತೆ ಮೂಡಿಸುವಂತಿದೆ. ಬಹುಶಃ ಇದಕ್ಕೆ ನಿರ್ದೇಶಕರು ಒಬ್ಬ ಕತೆಗಾರರಾಗಿ, ಬರಹಗಾರರಾಗಿದ್ದು ಸಿನೆಮಾದಲ್ಲಿ ಪ್ರಥಮ ಪ್ರಯತ್ನ ನಡೆಸಿರುವುದೇ ಕಾರಣ ಇರಬಹುದು.

ಸಾಮಾನ್ಯವಾಗಿ ಪತ್ತೇದಾರಿ ಕತೆಯೊಂದು ನಮಗೆ ಇಷ್ಟವಾಗಬೇಕಾದರೆ ಮೊದಲು ಆ ಪಾತ್ರಗಳ ಜೊತೆಗೆ ನಮ್ಮ ಪ್ರಯಾಣ ಇರಬೇಕು ಅಥವಾ ಸಿನೆಮಾದಲ್ಲಾದರೆ ಆ ಪಾತ್ರಧಾರಿಗಳ ಬಗ್ಗೆಯಾದರೂ ನಮಗೆ ಅಂತಹ ಆಸಕ್ತಿ ಇರಬೇಕು. ಆದರೆ ಚಿತ್ರದಲ್ಲಿ ಕತೆಯ ಆರಂಭವನ್ನೇ ಗೋಜಲುಗೊಳಿಸಿರುವುದು ಮಾತ್ರವಲ್ಲ, ಪಾತ್ರಗಳಾಗಿ ಯಾವ ಜನಪ್ರಿಯ ತಾರೆಗಳು ಕೂಡ ಕಾಣಿಸುವುದಿಲ್ಲ. ಹಾಗಾಗಿ ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಲ್ಲಿ ಪತ್ತೆಯಾಗಲಿರುವ ಆರೋಪಿಗಳ ಬಗ್ಗೆ ಯಾವ ಕುತೂಹಲವೂ ಉಳಿದಿರುವುದಿಲ್ಲ. ಪೊಲೀಸ್ ಅಧಿಕಾರಿ ಬಾಲನಾಗಿ ಆದಿತ್ಯ ನಟಿಸಿದ್ದಾರೆ. ಪೊಲೀಸ್‌ಗೆ ಹೊಂದುವ ದೇಹ ಪ್ರಕೃತಿಯನ್ನು ಹೊರತು ಪಡಿಸಿ ಯಾವ ರೀತಿಯಿಂದಲೂ ಅವರು ಪಾತ್ರಕ್ಕೆ ಹೊಂದಿಕೊಂಡಂತೆ ಕಾಣಿಸುವುದಿಲ್ಲ.

ಚಿತ್ರದಲ್ಲಿ ಉಳಿದ ಪ್ರಮುಖ ಪಾತ್ರಗಳಾಗಿ ಅಜಯ್ ರಾಜ್, ಆಶಿಕಾ ಸೋಮಶೇಖರ್ ನಟಿಸಿದ್ದಾರೆ. ಚಿಂತನ್ ಎನ್ನುವ ಗಾಯಕನಾಗಿ ಅಜಯ್ ರಾಜ್ ನಟಿಸಿದ್ದರೆ, ಚಿಂತನ್ ಪ್ರೇಯಸಿಯಾಗಿ ಪತ್ರಕರ್ತೆ ಸಾಕ್ಷಿಯ ಪಾತ್ರದಲ್ಲಿ ಆಶಿಕಾ ಇದ್ದಾರೆ. ಗೃಹಮಂತ್ರಿಯಾಗಿ ಮುಖ್ಯಮಂತ್ರಿ ಚಂದ್ರು, ಪೊಲೀಸ್ ಅಧಿಕಾರಿಯಾಗಿ ಜೈಜಗದೀಶ್ ಅವರದು ಅತಿಥಿ ಪಾತ್ರ ಎಂದು ಹೇಳಬಹುದು. ತಾಂತ್ರಿಕ ವಿಚಾರಕ್ಕೆ ಬಂದರೆ ಅನೂಪ್ ಸೀಳಿನ್ ಅವರು ನೀಡಿರುವ ಹಿನ್ನೆಲೆ ಸಂಗೀತವೊಂದೇ ಆಕರ್ಷಕ ಎನ್ನಬಹುದು. ಉಳಿದಂತೆ ಪತ್ತೇದಾರಿ ಕಾದಂಬರಿ ಪ್ರಿಯರಿಗೆ ಇಷ್ಟವಾಗುವಂತಹ ಚಿತ್ರ ಇದು ಎನ್ನಬಹುದು.

ತಾರಾಗಣ: ಆದಿತ್ಯ, ಅಜಯ್ ರಾಜ್
ನಿರ್ದೇಶನ: ಬಾಲು ಚಂದ್ರಶೇಖರ್
ನಿರ್ಮಾಣ: ಕಣಜ ಎಂಟರ್‌ಪ್ರೈಸಸ್

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X