Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಭೂಮಿಗೆ ನೀರು ಹೇಗೆ ಬಂತು?

ಭೂಮಿಗೆ ನೀರು ಹೇಗೆ ಬಂತು?

ನಾಳೆ ವಿಶ್ವ ಜಲ ದಿನ

ಆರ್.ಬಿ.ಗುರುಬಸವರಾಜಆರ್.ಬಿ.ಗುರುಬಸವರಾಜ21 March 2021 12:10 AM IST
share
ಭೂಮಿಗೆ ನೀರು ಹೇಗೆ ಬಂತು?

ನಮ್ಮ ಭೂಮಿಯ ಶೇಕಡಾ 70ರಷ್ಟು ಭಾಗ ನೀರಿನಿಂದ ಆವೃತವಾಗಿದೆ. ಸೌರವ್ಯೆಹದಲ್ಲಿ ಭೂಮಿಯು ಸೂರ್ಯನಿಂದ ಸರಿಯಾದ ದೂರದಲ್ಲಿ ಇರುವುದರಿಂದ ನೀರು ಅಸ್ತಿತ್ವದಲ್ಲಿದೆ. ಭೂಮಿಯು ಸೂರ್ಯನಿಂದ ಇತ್ತ ಸಮೀಪವೂ ಅಲ್ಲದ, ಅತ್ತ ದೂರವೂ ಅಲ್ಲದ ಗೋಲ್ಡಿಲಾಕ್ ಅಂದರೆ ತುಂಬಾ ತಣ್ಣಗಿರದ ಅಥವಾ ಹೆಚ್ಚು ಬಿಸಿಯಾಗಿರದ ವಲಯದಲ್ಲಿದೆ. ಭೂಮಿಯ ಮೇಲೆ ನೀರು ಎಂಬ ದ್ರವ ಇರುವುದರಿಂದಲೇ ಜೀವಿಗಳ ಉಗಮ ಮತ್ತು ವಿಕಾಸಕ್ಕೆ ಕಾರಣವಾಗಿದೆ. ನೀರು ನಮ್ಮ ಭೂ ಗ್ರಹದ ಒಂದು ವಿಶಿಷ್ಟ ಲಕ್ಷಣವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಯಾದಾಗಿನಿಂದ ಈಗಿನವರೆಗೂ ಜಲಚಕ್ರದ ಬಗ್ಗೆ ತಿಳಿದುಕೊಂಡಿದ್ದೇವೆ. ಸಮುದ್ರ ಹಾಗೂ ಸರೋವರಗಳ ನೀರು ಸೂರ್ಯನ ಶಾಖಕ್ಕೆ ಕಾದು ಆವಿಯಾಗಿ, ಆವಿ ಮೋಡವಾಗಿ, ಮೋಡದಿಂದ ಮಳೆ ಸುರಿದು ಸಮುದ್ರ ಸರೋವರ ಸೇರಿ, ಪುನಃ ಸರೋವರಗಳ ನೀರು ಆವಿಯಾಗುವ ಪ್ರಕ್ರಿಯೆಯನ್ನು ತುಂಬಾ ಅರ್ಥವತ್ತಾಗಿ ತಿಳಿದುಕೊಂಡಿದ್ದೇವೆ. ಹಾಗಾದರೆ ಭೂಮಿಗೆ ನೀರು ಎಲ್ಲಿಂದ ಬಂತು? ಹೇಗೆ ಬಂತು? ಎಂಬುದನ್ನು ಇನ್ನೂ ತಿಳಿದುಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎನಿಸುತ್ತದೆ.

ನೀರು ಭೂಮಿಗೆ ಹೇಗೆ ಬಂತು ಎಂಬುದನ್ನು ತಿಳಿಯಲು ಭೂಮಿಯ ಆರಂಭಿಕ ರಚನೆಗಳನ್ನು ತಿಳಿದುಕೊಳ್ಳಬೇಕು. ನಮ್ಮ ಗ್ರಹದ ನೀರಿನ ಮೂಲವು ಬಿಗ್‌ಬ್ಯಾಂಗ್ ಕಾಲದ ಒಂದು ಸಂಕೀರ್ಣ ಕಥೆಯಾಗಿದೆ. ಭೂಮಿಗೆ ನೀರು ಹೇಗೆ ಬಂತು ಎಂಬುದಕ್ಕೆ ಅನೇಕ ಸಿದ್ಧಾಂತಗಳಿವೆ. ಮೊದಲನೇ ಸಿದ್ಧಾಂತದ ಪ್ರಕಾರ ಬಿಗ್‌ಬ್ಯಾಂಗ್ ನಂತರ ದೂರ ಸಿಡಿದ ಅನಿಲ ಮತ್ತು ಶಿಲೆ ಕಣಗಳ ರಾಶಿಯು ಒಟ್ಟಾಗಿ ತಿರುಗುತ್ತಾ ಗ್ರಹಗಳಾಗಿ ರೂಪುಗೊಂಡವು ಎಂಬುದು ಗೊತ್ತು. ಮೂಲ ಅನಿಲದ ರಾಶಿ ಕುಗ್ಗಿ, ಸಾಂದ್ರವಾಗಿ ಸೂರ್ಯ ರೂಪುಗೊಳ್ಳುತ್ತಿದ್ದ ಹಂತದಲ್ಲೇ ಅದರ ಹೊರ ಅಂಚಿನಲ್ಲಿ ವೃತ್ತಾಕಾರವಾಗಿ ಸುತ್ತುತ್ತಿದ್ದ ಕಾಯಗಳು ಗುರುತ್ವ ಬಲದ ಸೆಳೆತಕ್ಕೆ ಒಳಗಾಗಿ ಗ್ರಹಗಳಾಗಿ ರೂಪುಗೊಂಡವು. ಮೊದಲು ಬಿಸಿಬಿಸಿ ಅನಿಲದ ಮುದ್ದೆಯಾಗಿದ್ದ ಭೂಮಿ ಕ್ರಮೇಣ ತಣ್ಣಗಾಯಿತು. ಆಗ ಹೊರಮೈ ಹೆಪ್ಪುಗಟ್ಟಿ ಚಿಪ್ಪಿನಂತಾಯಿತು. ಭಾರ ಲೋಹವಾದ ಕಬ್ಬಿಣ ನಿಧಾನವಾಗಿ ಭೂಗರ್ಭಕ್ಕಿಳಿಯಿತು. ನಿಕ್ಕಲ್ ಜೊತೆಗೂಡಿ ಭೂಮಿಯ ತಿರುಳನ್ನು ರೂಪಿಸಿತು.

ಸುಮಾರು ನೂರು ಕೋಟಿ ವರ್ಷಗಳ ಕಾಲ ಗ್ರಹಾಂಶಗಳು ಭೂಮಿಯನ್ನು ಸತತವಾಗಿ ಸುತ್ತಾಡಿಸುತ್ತಿದ್ದವು. ಇದರ ಪರಿಣಾಮವಾಗಿ ಭೂಗ್ರಹ ಗಾತ್ರದಲ್ಲಿ ಹಿಗ್ಗಿತು. ಹಗುರ ಧಾತುಗಳಾದ ಅಲ್ಯೂಮಿನಿಯಮ್, ಸಿಲಿಕಾನ್ ಮುಂತಾದವು ಭೂಚಿಪ್ಪಿನಲ್ಲಿ ಸೇರಿದವು. ವಿಕಿರಣಪಟು ಖನಿಜಗಳು ನಿರಂತರವಾಗಿ ದಹಿಸಿದುದರಿಂದ ಭೂಗರ್ಭ ಕುಲುಮೆಯಂತಾಯಿತು. ಕ್ರಮೇಣವಾಗಿ ಅನಿಲಗಳು ಸೋರಿಹೋಗಿ ವಾತಾವರಣ ನಿರ್ಮಿಸಿದವು. ನೈಟ್ರೋಜನ್, ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಮಿಥೇನ್, ಅಮೋನಿಯಾ ಭೂಮಿಗೆ ಅನಿಲದ ಕವಚವನ್ನು ತೊಡಿಸಿದವು. ಇದೇ ವೇಳೆ ನೀರೂ ಉತ್ಪತ್ತಿಯಾಯಿತು. ವಾಯುಮಂಡಲದಲ್ಲಿ ಮಿಳಿತವಾಗಿದ್ದ ತೇವಾಂಶ ಸಾಂದ್ರಗೊಂಡು ಮಳೆಗರೆದಾಗ ನೈಸರ್ಗಿಕ ಜಲಚಕ್ರ ಪ್ರಾರಂಭವಾಯಿತು. ಹೀಗೆ ಭೂಮಿಯ ಮೇಲೆ ನೀರು ಬಂದಿತು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.

ಎರಡನೇ ಸಿದ್ಧಾಂತದ ಪ್ರಕಾರ ಭೂಮಿ ರೂಪುಗೊಂಡಾಗಲೇ ಸ್ವಲ್ಪನೀರು ಇತ್ತು. ಅದು ನಿಹಾರಿಕೆಗಳ ಅನಿಲ ಮತ್ತು ಧೂಳಿನಲ್ಲಿ ಮಂಜಿನ ರೂಪದಲ್ಲಿ ಇತ್ತು ಎಂದು ಹೇಳಲಾಗುತ್ತದೆ. ಇನ್ನೊಂದು ಸಿದ್ಧ್ದಾಂತದ ಪ್ರಕಾರ ಭೂಮಿಯು ರೂಪುಗೊಂಡಾಗ ಅದರಲ್ಲಿನ ಶಿಲೆಗಳಲ್ಲಿ ನೀರಿನಂಶ ಇತ್ತು. ಕ್ರಮೇಣವಾಗಿ ಶಾಖ ಹಾಗೂ ಇನ್ನಿತರ ಪ್ರಕ್ರಿಯೆಗಳಿಂದ ಶಿಲೆಗಳಲ್ಲಿನ ನೀರು ಆವಿಯಾಗಿ ಮೋಡವಾಗಿ, ಮೋಡದಿಂದ ಮಳೆಯ ರೂಪದಲ್ಲಿ ಭೂಮಿಯಲ್ಲಿ ಸಂಗ್ರಹವಾಗುತ್ತಾ ಮತ್ತು ವಿಸ್ತೃತವಾಗುತ್ತಾ ಸಾಗಿದೆ. ಉಲ್ಕೆಗಳಿಂದ ನೀರು ಭೂಮಿಗೆ ಬಂದಿದೆ ಎಂಬ ಮತ್ತೊಂದು ವಾದವೂ ಇದೆ. ನಮಗೆಲ್ಲಾ ತಿಳಿದಿರುವಂತೆ ನೀರು ಹೈಡ್ರೋಜನ್ ಮತ್ತು ಆಕ್ಸಿಜನ್‌ಗಳ ಸಂಯುಕ್ತ ವಸ್ತು. ಭೂಮಿ ರೂಪುಗೊಂಡ ಪ್ರಾರಂಭಿಕ ವರ್ಷಗಳಲ್ಲಿ ವಾತಾವರಣ ಇರಲಿಲ್ಲ. ಕ್ರಮೇಣವಾಗಿ ವಾತಾವರಣದಲ್ಲಿ ಜೀವ ರಸಾಯನಿಕ ಅನಿಲಗಳು ಸಂಚಯವಾದಂತೆ ಹೈಡ್ರೋಜನ್ ಮತ್ತು ಆಕ್ಸಿಜನ್‌ಗಳು ಜೊತೆಗೂಡಿ ನೀರು ಎಂಬ ಜೀವ ರಸಾಯನಿಕ ದ್ರವ ರೂಪುಗೊಂಡಿರಬಹುದು ಎಂದು ಲೆಕ್ಕಾಚಾರ ಹಾಕಬಹುದು.

ಹೀಗೆ ವೈವಿಧ್ಯಮಯ ಪ್ರಕ್ರಿಯೆಗಳಿಂದ ಸಾವಿರಾರು ವರ್ಷಗಳ ನಂತರ ಭೂಮಿಯಲ್ಲಿ ನೀರು ಸಂಗ್ರಹವಾಗುತ್ತಾ ಸಾಗಿದೆ. ಆದರೆ ಪ್ರಸ್ತುತ ನೀರಿನ ಸ್ಥಾನಮಾನ ಹಾಗೂ ಬಳಕೆಯ ವಿಧಾನಗಳಲ್ಲಿ ವೈಪರೀತ್ಯಗಳಾಗಿವೆ. ಭೂಮಂಡಲದ ಮುಕ್ಕಾಲು ಭಾಗ ನೀರಿದೆ. ಆದರೆ ಅದರಲ್ಲಿ ಶೇಕಡಾ 97.3ರಷ್ಟು ಸಮುದ್ರದ ನೀರು ಹಾಗೂ ಶೇಕಡಾ 2.7ರಷ್ಟು ಹಿಮನದಿ, ಸಿಹಿನೀರ ಸರೋವರಗಳು, ನದಿಗಳಲ್ಲಿದೆ. ಸಾಗರದಲ್ಲಿನ ನೀರು ಬಹುತೇಕವಾಗಿ ನಿರುಪಯುಕ್ತ ವಾಗಿದೆ. ಉಳಿದ ಶೇಕಡಾ 2.7ರಷ್ಟು ನೀರು ಅಸಮರ್ಪಕವಾಗಿ ಹಂಚಿಕೆಯಾಗಿರುವುದರಿಂದ ಎಲ್ಲರಿಗೂ ಸರಿಯಾದ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಅದಕ್ಕಾಗಿ ಜಲಯುದ್ಧಗಳು ಸಂಭವಿಸಲೂಬಹುದು ಎಂಬುವುದು ಅತಿಶಯೋಕ್ತಿಯೇನಲ್ಲ. ಆದರೆ ಈಗಿರುವ ಸಿಹಿನೀರಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಜಗತ್ತಿನ ಎಲ್ಲರಿಗೂ ಕುಡಿಯಲು ನೀರು ಲಭ್ಯವಾಗುತ್ತದೆ. ಅದಕ್ಕಾಗಿ ನಾವು ಜಲಸಂರಕ್ಷಣೆಯ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅನಿವಾರ್ಯತೆ ಇದೆ. ಜಲಸಂರಕ್ಷಣೆಯ ಸೂತ್ರಗಳು ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ ಜೀವನದ ಭಾಗವಾಗಬೇಕು. ಪ್ರತಿಯೊಬ್ಬರೂ ಆ ಸೂತ್ರಗಳನ್ನು ಅನುಸರಿಸಿ ನಡೆದರೆ ಭೂಗ್ರಹವನ್ನು ನೀಲಗ್ರಹವನ್ನಾಗಿ ಉಳಿಸಿಕೊಳ್ಳಬಹುದು. ಇಲ್ಲದಿದ್ದರೆ ಮುಂದೊಂದು ದಿನ ಇದೂ ಬರಡು ಗ್ರಹವಾಗಲೂಬಹುದು. ಹಾಗಾಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ.

share
ಆರ್.ಬಿ.ಗುರುಬಸವರಾಜ
ಆರ್.ಬಿ.ಗುರುಬಸವರಾಜ
Next Story
X