Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು : ಮೀನಿನ ಹೊಟ್ಟೆಯಲ್ಲಿ...

ಮಂಗಳೂರು : ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ !

ವಾರ್ತಾಭಾರತಿವಾರ್ತಾಭಾರತಿ25 March 2021 9:40 PM IST
share
ಮಂಗಳೂರು : ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ !

ಮಂಗಳೂರು, ಮಾ.25: ಅತ್ತಾವರದ ಮೀನು ಮಾರಾಟ ಮಳಿಗೆಯಲ್ಲಿ ದೊಡ್ಡ ಗಾತ್ರದ ಮೀನಿನ ಹೊಟ್ಟೆಯಲ್ಲಿ ಪೇಪರ್‌ನಿಂದ ಕೂಡಿದ ಪ್ಲಾಸ್ಟಿಕ್ ಪತ್ತೆಯಾಗಿರುವುದು ಸಮುದ್ರ, ನದಿ, ಕೆರೆಗಳು ಮಲಿನಗೊಂಡು ಪ್ಲಾಸ್ಟಿಕ್‌ನಿಂದ ತುಂಬಿರುವುದಕ್ಕೆ, ಜಲಚರಗಳು ಅಪಾಯದಲ್ಲಿರುವುದಕ್ಕೆ ಸಾಕ್ಷಿಯಾಗಿದೆ.

ಅತ್ತಾವರದ ಫ್ರೆಸ್ ಸೊ ಫ್ರೆಸ್ ಎಂಬ ಮಳಿಗೆಯ ಸಿಬ್ಬಂದಿ ಮುರು ಮೀನು (ರೀಫ್ ಕಾಡ್ ಫಿಶ್) ಕತ್ತರಿಸಿ ಶುಚಿಗೊಳಿಸುತ್ತಿದ್ದ ವೇಳೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಇದನ್ನು ಕಂಡು ಸಿಬ್ಬಂದಿ ಹಾಗೂ ಮಳಿಗೆಯ ಮಾಲಕ ಗಾಬರಿಯಾಗಿದ್ದಾರೆ. ಜನರಿಗೆ ಜಾಗೃತಿ ನೀಡುವ ಸಲುವಾಗಿ ಮಳಿಗೆಯ ಮಾಲಕ ಸಾಮಾಜಿಕ ಜಾಲತಾಣದ ಮೂಲಕ ಇದರ ವೀಡಿಯೋವನ್ನು ಹರಿಯಬಿಟ್ಟಿದ್ದಾರೆ.

ಇಂತಹ ಪ್ರಕರಣವನ್ನು ತಾವು ಪ್ರಥಮ ಬಾರಿಗೆ ಕಂಡಿದ್ದು, ಈ ರೀತಿಯಾಗಿ ಜನರು ಪ್ಲಾಸ್ಟಿಕ್‌ಗಳನ್ನು ಸಮುದ್ರ, ನದಿ ಕೆರೆಗಳಿಗೆ ಎಸೆದಲ್ಲಿ ಮೀನಿನ ಸಂತತಿ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

‘‘ನಾನು ಆ ವೀಡಿಯೋವನ್ನು ನೋಡಿದ್ದೇನೆ. ಇದು ಸಮುದ್ರದ ತಳಭಾಗ ಪ್ಲಾಸ್ಟಿಕ್‌ನಿಂದ ತುಂಬಿ ಜಲಚರಗಳು ಅಪಾಯವಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಮೀನುಗಳು ಪ್ಲಾಸ್ಟಿಕ್ ತಿನ್ನಲಾರವು. ಆದರೆ ಮೀನುಗಳನ್ನು ಹಿಡಿಯುವ ಸಂದರ್ಭ ತಳಭಾಗದ ಪ್ಲಾಸ್ಟಿಕ್‌ಗಳು ಕೂಡಾ ಮೀನಿನ ಜತೆ ಬಲೆಯನ್ನು ಸೇರುತ್ತವೆ. ಆ ಸಂದರ್ಭದಲ್ಲಿ ಮೀನುಗಳು ಉಸಿರಾಟದ ಪ್ರಕ್ರಿಯೆ ವೇಳೆ ಈ ಪ್ಲಾಸ್ಟಿಕನ್ನು ನುಂಗಿರುವ ಸಾಧ್ಯತೆ ಇದೆ. (ನೀರಿನಲ್ಲಿ ಬಿದ್ದು ಮುಳುಗುವಾಗ ಮನುಷ್ಯರ ಹೊಟ್ಟೆಯೊಳಗೆ ನೀರು ಸೇರುತ್ತದೆ. ಅದೇ ರೀತಿ ಮೀನಿನ ಹೊಟ್ಟೆಗೆ ನೀರಿನ ಜತೆ ಪ್ಲಾಸ್ಟಿಕ್ ಸೇರಿರಬಹುದು) ಅದು ಪ್ಲಾಸ್ಟಿಕ್ ಕೂಡಾ ತಾಜಾ ಆಗಿರುವುದರಿಂದ ಇದು ಸಾಯುವ ಕೆಲ ಸಮಯದ ಹಿಂದೆ ನುಂಗಿರುವಂತಿದೆ. ನಿಜಕ್ಕೂ ಇದು ಗಂಭೀರ ವಿಚಾರ ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಹಾಗೂ ಪ್ರೊ. ಡಾ. ಎ. ಸೆಂತಿಲ್ ವೇಲ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

‘‘ನಾನು ಕಳೆದ ಎರಡು ವರ್ಷಗಳಿಂದ ಸಮುದ್ರದಲ್ಲಿ ಮೀನುಗಳು ಅಪಾಯದಲ್ಲಿರುವ ಬಗ್ಗೆ ಆಡಳಿತದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ. ಪ್ಲಾಸ್ಟಿಕ್‌ಗಳು ನೀರಿನಲ್ಲಿ ಸೇರಿ ಡೈಲ್ಯೂಟ್ ಆಗಿ ಸೂಕ್ಷ್ಮ ಕಣಗಳಾಗಿ ಪರಿವರ್ತನೆಯಾಗಿ ನೀರಿನೊಂದಿಗೆ ಬೆರೆತು ಚಿಕ್ಕಚಿಕ್ಕ ಮೀನು ಮರಿಗಳು ಅದನ್ನು ತಿಂದು ಸಾಯುತ್ತವೆ. ಮಾತ್ರವಲ್ಲದೆ ಮೀನುಗಾರಿಕೆ ಸಂದರ್ಭ ಟ್ರಾಲ್ ಬೋಟ್‌ಗಳ ಬಲೆಗಳು ಸಮುದ್ರದ ತಳಭಾಗವನ್ನು ತಲುಪುವಾಗ ಶೇ. 40ರಷ್ಟು ಪ್ಲಾಸ್ಟಿಕ್‌ಗಳು ಕೂಡಾ ಮೀನಿನ ಜತೆ ಬಲೆ ಸೇರುತ್ತವೆ ಎಂಬ ಬಗ್ಗೆ ಮೀನುಗಾರರು ದೂರು ನೀಡುತ್ತಾರೆ. ಈ ರೀತಿ ಬಲೆಯನ್ನು ಮೇಲೆತ್ತುವಾಗ ಮೀನುಗಳು ಗಾಬರಿಯಲ್ಲಿ ನೀರಿನ ಜತೆ ಪ್ಲಾಸ್ಟಿಕ್ ನುಂಗುವ ಸಾಧ್ಯತೆ ಇದೆ. ಇದರಿಂದಾಗಿ ನಮ್ಮ ಸಮುದ್ರದಲ್ಲಿ ಬೂತಾಯಿ ಮೀನಿನ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತಿದೆ. ಇದು ಅಪಾಯದ ಮುನ್ಸೂಚನೆ. ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಪ್ಲಾಸ್ಟಿಕ್‌ನಿಂದ ಜಲಚರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್‌ಗಳು ಮಾತ್ರವಲ್ಲದೆ, ಥರ್ಮಾಕೋಲ್ ಸಮುದ್ರದ ಒಡಲು ಸೇರಿದೆ. ಮೀನುಗಾರರ ತುಂಡಾದ ಬಲೆಗಳು ಕೂಡಾ ಸಮುದ್ರ ಪಾಲಾಗುತ್ತಿವೆ. ಇದನ್ನು ಸ್ವಚ್ಛಗೊಳಿಸಲು ಯುದ್ಧೋಪಾದಿಯಲ್ಲಿ ಆಡಳಿತದಿಂದ ಕೆಲಸ ಆಗಬೇಕಾಗಿದೆ.’’

- ಡಾ. ಸೆಂತಿಲ್‌ವೇಲ್, ಡೀನ್, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X