ಹೆಲ್ಪ್ ಲೈನ್ ಮೊಂಟೆಪದವು ವತಿಯಿಂದ ಸಮಾಲೋಚನಾ ಕಾರ್ಯಕ್ರಮ
ಮುಡಿಪು : ಹೆಲ್ಪ್ ಲೈನ್ ಮೊಂಟೆಪದವು ವತಿಯಿಂದ ಸಮಾಲೋಚನಾ ಸಭಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಹಾಪಿಳ್ ಶಿಹಾಬುದ್ದೀನ್ ಮೊಂಟಪದವು ಕಿರಾಅತ್ ಪಠಿಸಿದರು. ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಹಾಜಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಕ್ವಾ ಮಸ್ಜಿದ್ ಮಂಗಳೂರು ಇದರ ಮ್ಯಾನೇಜರ್ ಜಿಎಂ ಹಸನ್ ಕುಂಞಿ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು.
ಮೊಂಟಪದವು ಜುಮಾ ಮಸೀದಿಯ ಖತೀಬ್ ಹಾಗೂ ಹೆಲ್ಪ್ ಲೈನಿನ ಮುಖ್ಯ ಸಲಹೆಗಾರ ಎಂ ಎಂ ಸಿದ್ದೀಕ್ ಸಹದಿ ಮಿತ್ತೂರು ಹೆಲ್ಪ್ ಲೈನ್ ಬಗ್ಗೆ ವಿವರಿಸಿದರು.
ನೊಲೇಜ್ ವಿಲೇಜ್ ಮುಖ್ಯಸ್ಥರಾದ ಅಝೀಝ್ ಮೊಂಟಪದವು ಹೆಲ್ಪ್ ಲೈನ್ ನಡೆದು ಬಂದ ದಾರಿಯ ಬಗ್ಗೆ ಪರಿಚಯ ಮಾಡಿದರು. .ಹೆಲ್ಪ್ ಲೈನ್ ಗ್ರೂಪಿನ್ ಅಡ್ಮಿನ್ ಗಳಾದ ಹನೀಫ್ ಶೈನ್ ಸ್ವಾಗತಿಸಿದರು. ರಝಾಕ್ ಮೊಂಟೆಪದವು ಕಾರ್ಯಕ್ರಮ ನಿರೂಪಿಸಿ, ಶೌಕತ್ ಕತಾರ್ ವಂದಿಸಿದರು.