ಕರ್ತವ್ಯ ಲೋಪ: ಎಎಸ್ಸೈ ಸೇರಿ ಮೂವರು ಪೊಲೀಸರ ಅಮಾನತು
ಚಿಕ್ಕಮಗಳೂರು, ಮಾ.26: ಕರ್ತವ್ಯ ಲೋಪದಡಿಯಲ್ಲಿ ಎಎಸ್ಸೈ ಸಹಿತ ಮೂವರು ಪೊಲೀಸರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಆದೇಶಿಸಿದ್ದಾರೆ.
ಸಖರಾಯಪಟ್ಟಣ ಪೊಲೀಸ್ ಠಾಣೆಯ ಎಎಸ್ಸೈ ಶಿವಕುಮಾರ್, ಪೊಲೀಸ್ ಪೇದೆಗಳಾದ ಶಿವಾಜಿ, ಶಿವು ಎಂಬವರನ್ನು ಕರ್ತವ್ಯ ಲೋಪ ಎಸಗಿದ ಆರೋಪದಡಿಯಲ್ಲಿ ಅಮಾನತ್ತುಗೊಳಿಸಿ ಎಸ್ಪಿ ಆದೇಶಿಸಿದ್ದಾರೆ.
ಇತ್ತೀಚೆಗೆ ಪೊಕ್ಸೊ ಕಾಯ್ದೆಯಡಿಯಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಲಾಕಪ್ನಿಂದ ತಪ್ಪಿಸಿ ಕೊಂಡಿದ್ದು, ಅಂದು ಈ ಮೂರ್ವರು ಪೊಲೀಸರು ಕರ್ತವ್ಯದಲ್ಲಿದ್ದರು. ತಪ್ಪಿಸಿಕೊಂಡಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆಯಾದರೂ ಮೂವರು ಪೊಲೀಸರು ಅಂದು ಕರ್ತವ್ಯ ಲೋಪ ಎಸಗಿದ್ದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ನೀಡಿದ್ದಾರೆ.
Next Story