ಸಿಡಿ ಪ್ರಕರಣ: ಸರಕಾರದ ವಿಶೇಷ ಅಭಿಯೋಜಕರಾಗಿ ಕಿರಣ್ ಜವಳಿ, ಪ್ರಸನ್ನಕುಮಾರ್ ನೇಮಕ
ಬೆಂಗಳೂರು, ಎ.2: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಸರಕಾರದ ಪರ ವಾದ ಮಂಡನೆಗೆ ವಿಶೇಷ ಅಭಿಯೋಜಕರಾಗಿ ಹೈಕೋರ್ಟ್ ವಕೀಲರಾದ ಎಸ್.ಕಿರಣ್ ಜವಳಿ ಹಾಗೂ ಸಿಬಿಐ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.
ಈ ಕುರಿತು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಯೋಜನೆ ಪರ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ನಲ್ಲಿ ವಾದ ಮಂಡಿಸಲಿದ್ದಾರೆ.
ವಕೀಲಿಕೆಯಲ್ಲಿ 35 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಕಿರಣ್ ಜವಳಿ ಕ್ರಿಮಿನಲ್ ಪ್ರಕರಣ ನಡೆಸುವಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಅಂತೆಯೇ ಸಿಬಿಐ, ಎನ್ಐಎ ಪರ ವಕೀಲರಾದ ಪಿ.ಪ್ರಸನ್ನ ಕುಮಾರ್ ಹಲವು ಪ್ರಮುಖ ಪ್ರಕರಣಗಳಲ್ಲಿ ಯಶಸ್ವಿ ವಾದ ಮಂಡಿಸಿದ್ದರು.
Next Story





