Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ5 April 2021 12:10 AM IST
share
ಓ ಮೆಣಸೇ...

ಭಾರತ ಮತ್ತು ಬಾಂಗ್ಲಾದೇಶವು ಸ್ಥಿರತೆ, ಪ್ರೀತಿ ಹಾಗೂ ಶಾಂತಿಯನ್ನು ಬಯಸುತ್ತವೆ - ನರೇಂದ್ರ ಮೋದಿ, ಪ್ರಧಾನಿ
ಭಾರತದೊಳಗಿರುವ ಪ್ರಜೆಗಳೂ ಅದನ್ನೇ ಬಯಸುತ್ತಿದ್ದಾರೆ. ಅವರಿಗೂ ಅವು ಸಿಗುವಂತೆ ಮಾಡಿ.


ಡಿಕೆಶಿ ರಾಜಕೀಯದಲ್ಲಿರಲು ನಾಲಾಯಕ್- ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ರಾಜಕೀಯದೊಳಗಿರಬೇಕಾದರೆ ಸೀಡಿಯೊಳಗಿರಬೇಕಾದುದು ಅನಿವಾರ್ಯವೇ?


‘ಒಂದೇ ದೇಶ-ಒಂದು ಚುನಾವಣೆ’ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡದೇ ಇದ್ದ್ದುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ -ಕೆ.ಎಸ್.ಈಶ್ವರಪ್ಪ, ಸಚಿವ
ಒಂದೇ ದೇಶ-ಒಂದು ಚುನಾವಣೆ ಎನ್ನುವುದೇ ಪ್ರಜಾಸತ್ತೆಗೆ ಎಸಗುವ ದ್ರೋಹವಾಗಿದ್ದರೆ?


 ರಾಜ್ಯಗಳ ವಿಚಾರಗಳಲ್ಲಿ ಕೇಂದ್ರ ಸರಕಾರ ಅತಿಕ್ರಮಣ ಮಾಡಿ, ಹಸ್ತಕ್ಷೇಪ ನಡೆಸುತ್ತಿದೆ - ಜೆ.ಸಿ.ಮಾಧುಸ್ವಾಮಿ, ಸಚಿವ
ಕೇಂದ್ರದಲ್ಲಿ ಯುಪಿಎ ಸರಕಾರವಿದೆ ಎಂದು ತಪ್ಪು ತಿಳಿದು ಆಡಿದ ಮಾತಂತೆ.


ಮಹಿಳೆ ಪ್ರತಿ ಯಶಸ್ವಿ ಪುರುಷನ ಹಿಂದೆ ಇರುವುದಿಲ್ಲ, ಬದಲಿಗೆ ಪಕ್ಕದಲ್ಲಿಯೇ ಇರುತ್ತಾಳೆ - ಶಶಿಕಲಾ ಜೊಲ್ಲೆ, ಸಚಿವೆ
ಕೆಲವೊಮ್ಮೆ ಅವಳು ಸೀಡಿಯೊಳಗಿರುತ್ತಾಳೆ.


ರಾಜ್ಯ ರಾಜಕಾರಣದಲ್ಲಿ ಏನೇನೋ ನಡೆಯುತ್ತಿದೆ. ಉಪ್ಪು ತಿಂದವ ನೀರು ಕುಡಿಯುತ್ತಾನೆ - ಜಗ್ಗೇಶ್, ನಟ
ಜೊತೆಗೆ ಬಿಜೆಪಿ ವರಿಷ್ಠರು ಕಳ್ಳೆಕಾಯಿ ತಿನ್ನುತ್ತಿದ್ದಾರಂತೆ.


ಬೆಳಗಾವಿ ಲೋಕಸಭೆ ಉಪಚುನಾವಣೆಯ ಮೇಲೆ ಸೀಡಿ ಪರಿಣಾಮ ಬೀರುವುದಿಲ್ಲ - ಜಗದೀಶ್ ಶೆಟ್ಟರ್, ಸಚಿವ
ಇನ್ನೂ ಒಂದಿಷ್ಟು ಸೀಡಿಗಳು ಬಿಡುಗಡೆಯಾದರೆ ಪರಿಣಾಮ ಬೀರಬಹುದೇ?


ಸೀಡಿ ಪ್ರಕರಣದ ಬಗ್ಗೆ ಕೇಳುವಾಗ ನನಗೆ ವಾಕರಿಕೆ ಬರುತ್ತದೆ - ಕೆ.ಎಸ್.ಈಶ್ವರಪ್ಪ, ಸಚಿವ
ಹಾಗೆಂದು ಯಡಿಯೂರಪ್ಪ ಮೇಲೆ ವಾಂತಿ ಮಾಡಿ ಬಿಡುವುದೇ?


ನಾನು ಮುಖ್ಯಮಂತ್ರಿ ಆದರೆ ಐದೇ ನಿಮಿಷದಲ್ಲಿ ಎಲ್ಲ ಸಮಾಜಕ್ಕೂ ಮೀಸಲು ಘೋಷಿಸುತ್ತೇನೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮುಖ್ಯಮಂತ್ರಿ ಆಗದೇ ಇರುವುದೇ ಒಳ್ಳೆಯದು ಬಿಡಿ.


ಚಿಕ್ಕವಳಿದ್ದಾಗ ನಾನು ಯಾರಿಗೂ ಬೇಡವಾದ ಹೆಣ್ಣು ಮಗುವಾಗಿದ್ದೆ - ಕಂಗನಾ ರಣಾವತ್, ನಟಿ
ಈಗ ತಾವು ಪೊಲೀಸರಿಗೆ ತುಂಬಾ ಬೇಕಾಗಿರುವ ಹೆಣ್ಣು ಮಗುವಂತೆ.


ಪ್ರಧಾನಿ ಮೋದಿಯಿಂದ ದೇಶಕ್ಕೆ ತೊಂದರೆ ಆಗಿದೆಯೇ ವಿನಃ ಏನೂ ಒಳ್ಳೆಯದಾಗಿಲ್ಲ - ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಮುಖಂಡ
ಆದರೆ ಕಾಂಗ್ರೆಸ್‌ಗೆ ತೊಂದರೆಯಾಗಿರುವುದು ಕಾಂಗ್ರೆಸ್‌ನೊಳಗಿರುವ ಮುಖಂಡರಿಂದಲೇ ಹೊರತು, ಮೋದಿಯಿಂದಲ್ಲ.


ಕೃಷಿ ಕ್ಷೇತ್ರಕ್ಕೆ ಆಧುನಿಕತೆಯ ಅಗತ್ಯವಿದೆ - ನರೇಂದ್ರ ಮೋದಿ, ಪ್ರಧಾನಿ
ಅದಾನಿ, ಅಂಬಾನಿಗಳನ್ನೇ ಇವರು ಆಧುನಿಕತೆ ಎಂದು ಕರೆಯುತ್ತಿದ್ದಾರೆ.


ನಾನು ಮುಖ್ಯಮಂತ್ರಿ ಆಗುವುದಕ್ಕಿಂತ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನನಗೆ ಮುಖ್ಯ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್ ಅಧಿಕಾರಕ್ಕೆ ಬರದೆ, ನೀವು ಮುಖ್ಯಮಂತ್ರಿ ಆಗುವುದಾದರೂ ಹೇಗೆ?


 ಶಾಸಕರು ಏನು ಮಾಡುತ್ತಿದ್ದಾರೆ ಎಂದು ಸರಕಾರಕ್ಕೆ ಗೊತ್ತಿಲ್ಲ, ಸರಕಾರ ಏನು ಮಾಡುತ್ತಿದೆ ಎಂದು ಶಾಸಕರಿಗೆ ಗೊತ್ತಿಲ್ಲ - ಎಂ.ಬಿ.ಪಾಟೀಲ್, ಮಾಜಿ ಸಚಿವ
ಸಚಿವರು ಏನು ಮಾಡುತ್ತಿದ್ದಾರೆ ಎನ್ನುವುದು ಸೀಡಿಗಳ ಮೂಲಕ ನಾಡಿಗೆ ಗೊತ್ತಾಗಿದೆ.


ವಿಜಯನಗರ ಸಾಮ್ರಾಜ್ಯ ಹುಟ್ಟಿಕೊಂಡಿದ್ದೇ ಹಿಂದುತ್ವ ರಕ್ಷಿಸಲು - ಸಿ.ಟಿ.ರವಿ, ಬಿಜೆಪಿ ಪ್ರ.ಕಾರ್ಯದರ್ಶಿ
ಹಿಂದುತ್ವ ರಕ್ಷಿಸುವುದೆಂದರೆ, ಸೀಡಿಯೊಳಗೆ ಸಿಲುಕಿಕೊಂಡವರನ್ನು ರಕ್ಷಿಸುವುದೇ?


ಪೊಲೀಸ್ ವ್ಯವಸ್ಥೆ ಮಾದರಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗೂ ಸಮವಸ್ತ್ರ ನೀಡಲಾಗುವುದು- ಮುರುಗೇಶ್ ನಿರಾಣಿ, ಸಚಿವ
ಗಣಿ ದೋಚುವವರಿಗೂ ಒಂದು ಸಮವಸ್ತ್ರ ಕೊಟ್ಟಿದ್ದರೆ ಗುರುತು ಹಿಡಿಯಲು ಸುಲಭವಾಗುತ್ತಿತ್ತು.


ಪ.ಬಂಗಾಳದ ತಾಯಂದಿರು ಮತ್ತು ಪುತ್ರಿಯರ ಸುರಕ್ಷತೆಗಾಗಿ ಬಿಜೆಪಿ ಹೋರಾಟ ಮಾಡುತ್ತದೆ- ಅಮಿತ್ ಶಾ, ಕೇಂದ್ರ ಸಚಿವ

ಹಾಥರಸ್‌ನಲ್ಲಿ ನೀಡಿದ ಸುರಕ್ಷತೆಯನ್ನು ಪ. ಬಂಗಾಳಕ್ಕೆ ವರ್ಗಾಯಿಸುವ ಉದ್ದೇಶವಿದೆಯೇ?


ಸುಳ್ಳು ಎಂದರೆ ಕಾಂಗ್ರೆಸ್, ಸತ್ಯ ಎಂದರೆ ಬಿಜೆಪಿ - ಶ್ರೀರಾಮುಲು, ಸಚಿವ
ಕೊಲ್ಲು ಎಂದರೆ ಆರೆಸ್ಸೆಸ್ ಇರಬೇಕು.


ಪ.ಬಂಗಾಳದಲ್ಲಿ ಎ.1ರಂದು ಪ್ರಧಾನಿ ಮೋದಿ ಮಾಡಿರುವ ಭಾಷಣದಲ್ಲಿ ಜೀವಮಾನದಲ್ಲಿ ಒಮ್ಮೆ ಮಾತ್ರ ನಮ್ಮ ಕಿವಿಗೆ ಬೀಳಬಹುದಾದ ವಿಚಾರಗಳಿವೆ

- ಬಿ.ಎಲ್. ಸಂತೋಷ್, ಬಿಜೆಪಿ ಕಾರ್ಯದರ್ಶಿ
ಆ ವಿಚಾರಗಳಿಂದ ಪೆಟ್ರೋಲ್ ತಯಾರಿಸಿ ಹಂಚುವ ಯೋಜನೆಯೇನಾದರೂ ಇದೆಯೇ?


ಭಾರತ -ಚೀನಾ ಗಡಿಯಲ್ಲಿ ಒಂದೇ ಒಂದು ಇಂಚು ಭೂಮಿಯೂ ಚೀನಾದ ಪಾಲಾಗಿಲ್ಲ - ಎಂ.ಎಂ. ನರವಣೆ, ಭೂ ಸೇನಾ ಮುಖ್ಯಸ್ಥ
ಮತ್ತೆ ಅದು ಭಾರತವು ಚೀನಾಕ್ಕೆ ಕೊಟ್ಟ ಉಡುಗೊರೆಯೇ?


ರಾಹುಲ್ ಗಾಂಧಿಯ ಕಾಲು ಹಿಡಿದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಪ್ರಭಾಕರ ಭಟ್ಟರ ಕಾಲು ಹಿಡಿದು ಅಧ್ಯಕ್ಷರಾದವರು ಈ ರೀತಿ ಮಾತನಾಡುವುದು ಸಹಜ ಎಂದರಂತೆ ಸಿದ್ದರಾಮಯ್ಯ.


ಬಿಜೆಪಿಯವರಿಗೆ ಲವ್ ಎಂದರೇನೆಂದು ಗೊತ್ತಿಲ್ಲ, ಜಿಹಾದ್ ಎಂದರೆ ಏನೆಂದೂ ಗೊತ್ತಿಲ್ಲ - ಸಲ್ಮಾನ್ ಖುರ್ಷಿದ್ , ಕಾಂಗ್ರೆಸ್ ಮುಖಂಡ
ಲವ್‌ಜಿಹಾದ್ ಮೂಲಕ ರಾಜಕೀಯ ಮಾಡಲು ಗೊತ್ತಿದ್ದರೆ ಸಾಕಾಗುವುದಿಲ್ಲವೇ?


ಕೊರೋನ ಕಾಟ, 45 ದಿನಗಳ ಲಾಕ್‌ಡೌನ್ ನಡುವೆಯೂ 2020-21ನೇ ಸಾಲಿನಲ್ಲಿ ಅಬಕಾರಿ ಆದಾಯ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. - ಕೆ.ಗೋಪಾಲಯ್ಯ, ಸಚಿವ
ಜನರ ಬದುಕನ್ನು ನಾಶ ಮಾಡಿ, ಅಬಕಾರಿ ಇಲಾಖೆಯ ಖಜಾನೆ ತುಂಬಿಸಿಕೊಂಡದ್ದೂ ಒಂದು ಸಾಧನೆಯೇ?


ಭಾರತೀಯ ರೈಲ್ವೆಯು ದೇಶದ ಮತ್ತು ಜನತೆಯ ಆಸ್ತಿ, ಅದನ್ನು ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ - ಪಿಯೂಶ್ ಗೋಯಲ್, ಕೇಂದ್ರ ಸಚಿವ
ಜನತೆಯ ಆಸ್ತಿಯಾಗಿದ್ದಕ್ಕೆ ತಾನೇ ತಾವು ಎಲ್ಲವನ್ನೂ ಮಾರಲು ಹೊರಟಿರುವುದು. ತಮ್ಮ ಆಸ್ತಿಯಾಗಿದ್ದರೆ ಮಾರುತ್ತಿದ್ದಿರಾ?


ಮುಖ್ಯಮಂತ್ರಿ ವಿರುದ್ಧ ಸಚಿವರು ದೂರು ಕೊಡುವುದು ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧ - ಎಂ.ಪಿ.ರೇಣುಕಾಚಾರ್ಯ, ಶಾಸಕ
ಮುಖ್ಯಮಂತ್ರಿಯ ವಿರುದ್ಧ ದೂರುಕೊಟ್ಟ ಅನುಭವಿಗಳ ಮಾತು 

share
ಪಿ.ಎ.ರೈ
ಪಿ.ಎ.ರೈ
Next Story
X