Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಕೊರೋನ-ನ್ಯುಮೋನಿಯಾ ಗೊಂದಲಗಳ ನಡುವೆ...

ಕೊರೋನ-ನ್ಯುಮೋನಿಯಾ ಗೊಂದಲಗಳ ನಡುವೆ...

ಹರೀಶ್ ಎಂ. ರೈ, ಉಡುಪಿಹರೀಶ್ ಎಂ. ರೈ, ಉಡುಪಿ6 April 2021 12:10 AM IST
share
ಕೊರೋನ-ನ್ಯುಮೋನಿಯಾ ಗೊಂದಲಗಳ ನಡುವೆ...

ನೀ ಮಾಯೆಯೊಳಗೊ, ನಿನ್ನೊಳಗೆ ಮಾಯೆಯೋ ಎಂದು ದಾಸರು ಹಾಡಿದ್ದಾರೆ. ಅದೇ ರೀತಿ ‘ನ್ಯುಮೋನಿಯಾ ಕೊರೋನದ ಒಳಗೋ ಅಥವಾ ಕೊರೋನ ನ್ಯುಮೋನಿಯಾದ ಒಳಗೋ?’ ಎಂದು ಇತ್ತೀಚೆಗೆ ಖಾಸಗಿ ವೈದ್ಯರೇ ಗೊಂದಲಕ್ಕೆ ಒಳಗಾಗಿದ್ದಾರೆ.

ಇದೇ ಫೆಬ್ರವರಿಯಲ್ಲಿ 65 ವರ್ಷ ದಾಟಿದ್ದ ನಮ್ಮ ಒಬ್ಬ ಸಂಬಂಧಿಗೆ ನ್ಯುಮೋನಿಯಾ ಆಗಿತ್ತು. ಅದನ್ನು ಇಬ್ಬರು ಡಾಕ್ಟರ್‌ಗಳು ದೃಢೀಕರಿಸಿದ್ದರು. ಆದರೆ ಕೊನೆಗೆ ಅವರನ್ನು ಒಂದು ದೊಡ್ಡ ಖಾಸಗಿ ಆಸ್ಪತ್ರೆಗೆ ಕೊಂಡು ಹೋದಾಗ ಅವರು ಇದು ‘ಕೊರೋನ ಸಂಬಂಧಿತ ನ್ಯುಮೋನಿಯಾ (ಕೊರೋನ ರಿಲೇಟೆಡ್ ನ್ಯುಮೋನಿಯಾ) ಎಂಬ ಹೊಸ ಹೆಸರು ಕೊಟ್ಟರು ಹಾಗೂ ಆರನೇ ದಿನ ಅವರ ಮೃತದೇಹ ಕೊಡುವಾಗ ಕೇವಲ ಪಿಪಿಇ ಕಿಟ್ ಮತ್ತು ಕನ್‌ಸ್ಯೂಮೇಬಲ್ ಎಂಬ ಹೆಸರಿನಲ್ಲಿ ತೊಂಬತ್ತು ಸಾವಿರ ರೂಪಾಯಿ ಕೂಡಿಸಿ ಕೇವಲ ಐದು ದಿನಕ್ಕೆ ಮೂರು ಲಕ್ಷದ ಬಿಲ್ ಜಡಿದಿದ್ದರು. ಅದನ್ನು ಇನ್ಶೂರೆನ್ಸ್ ಕಂಪೆನಿಯವರು ಮಾನ್ಯ ಮಾಡಲಿಲ್ಲ. ಕಾರಣ ಪ್ರತಿ ಪಿಪಿಇ ಕಿಟ್‌ಗೆ ಸರಕಾರ ನಿಗದಿ ಪಡಿಸಿದ್ದ ದರ ಕೇವಲ ರೂ.700, ಆದರೆ ಆಸ್ಪತ್ರೆಯವರು ಒಂದು ಪಿಪಿಇ ಕಿಟ್‌ಗೆ ರೂ.3,000 ದರ ಹಾಕಿದ್ದರು. ಅಂದರೆ ನಾಲ್ಕು ಪಟ್ಟು ಹೆಚ್ಚು. ಅದೇ ಪ್ರಕಾರ ಕನ್‌ಸ್ಯೂಮೇಬಲ್ ಎಂಬ ಹೆಸರಲ್ಲಿ ವಿವರಣೆ ಕೊಡದೆ ರೂ.30,000 ಬೇರೆ ಪೀಕಿಸಿದ್ದರು. ರೋಗಿ ಮತ್ತು ಸಂಬಂಧಿಕರು ಉನ್ನತ ವಿದ್ಯಾವಂತರಾಗಿದ್ದರೂ ಆಸ್ಪತ್ರೆ ಬಿಲ್‌ನಲ್ಲಿ ಇಷ್ಟೊಂದು ಮೋಸ! ಹಾಗಾದರೆ ಅವಿದ್ಯಾವಂತರನ್ನು ಇವರು ಅದೆಷ್ಟು ಸುಲಿಯುತ್ತಾರೋ ಏನೋ?

ಕಳೆದ ವಾರ ನಮ್ಮ ಮತ್ತೊಬ್ಬ ಪರಿಚಯದ ವ್ಯಕ್ತಿಗೆ ಕೊರೋನ ಆಗಿತ್ತು. ಅವರನ್ನು ಅದೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಆಸ್ಪತ್ರೆಯವರು ಅದು ಕೊರೋನ ಎಂದು ಒಪ್ಪಿಕೊಂಡರು. ಆದರೆ ನಂತರ ‘‘ಇವರಿಗೆ ಕೊರೋನ ಲಸಿಕೆಯ ಡೋಸ್ 10 ದಿನಗಳ ಹಿಂದೆ ನಿಮ್ಮದೇ ಆಸ್ಪತ್ರೆಯಲ್ಲಿ ಕೊಡಲಾಗಿತ್ತು, ಆದರೂ ಕೊರೋನ ಬಂದಿದ್ದು ಹೇಗೆ?’’ ಎಂದು ರೋಗಿಯ ಸಂಬಂಧಿಕರು ಪ್ರಶ್ನಿಸಿದಾಗ ಡಾಕ್ಟರುಗಳು ಒಮ್ಮೆಲೇ ರಾಗ ಬದಲಿಸಿ- ಇಲ್ಲ ಇಲ್ಲ, ಇದು ಬರೀ ನ್ಯುಮೋನಿಯಾ ಎಂದು ಹೇಳಿದರು. ಅಂದರೆ ಲಸಿಕೆ ಕೊಟ್ಟು ಕೊರೋನ ಬಂದರೆ ಅದು ನ್ಯುಮೋನಿಯಾ! ಒಂದು ವೇಳೆ ಲಸಿಕೆ ಕೊಡದೆ ಇದ್ದಾಗ ಕೇವಲ ನ್ಯುಮೋನಿಯಾ ಆದರೂ ಅದು ‘ಕೊರೋನ ರಿಲೇಟೆಡ್ ನ್ಯುಮೋನಿಯಾ’ ಎಂದು ಹೇಳಿ ಆಸ್ಪತ್ರೆಯವರು ಸುಲಿಗೆಗೆ ಅವಕಾಶ ಮಾಡಿಕೊಳ್ಳುತ್ತಾರೇನೋ? ನಿಜವಾಗಿ ಕೊರೋನ ಮತ್ತು ನ್ಯುಮೋನಿಯಾ ಎರಡೂ ಒಂದೇ ತರದ ರೋಗ ಲಕ್ಷಣ ಹೊಂದಿವೆ. ಎರಡರಲ್ಲಿಯೂ ಉಸಿರಾಟದ ತೊಂದರೆ ಉಂಟಾಗುತ್ತದೆ ಹಾಗೂ ಪುಪ್ಪಸದಲ್ಲಿ ಕಫ ತುಂಬಿಕೊಂಡು ಶ್ವಾಸಕೋಶದ ಇನ್‌ಫೆಕ್ಷನ್ ಆಗುತ್ತದೆ. ಇವೆರಡೂ ರೋಗಗಳು ಒಂದೇ ನಾಣ್ಯದ ಎರಡು ಮುಖಗಳು. ಆದರೆ ನ್ಯುಮೋನಿಯಾ ಹೆಚ್ಚು ಮಾರಕ!

ನ್ಯುಮೋನಿಯಾ ಆದ 100 ರೋಗಿಗಳಲ್ಲಿ 25 ರೋಗಿಗಳು ಸಾಯುತ್ತಾರೆ, ಆದರೆ ಕೊರೋನ ಆದ 100 ರೋಗಿಗಳಲ್ಲಿ ಕೇವಲ ಇಬ್ಬರು ರೋಗಿಗಳು ಸಾಯಬಹುದು. ಈ ಎರಡೂ ರೋಗಗಳು ಸೋಂಕು ರೋಗಗಳು. ಅಂದರೆ ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತವೆ. ಆದರೂ ಕೊರೋನಕ್ಕೆ ಚಿಕಿತ್ಸೆ ಕೊಡಲು ಡಾಕ್ಟರ್ ಮತ್ತು ನರ್ಸ್‌ಗಳಿಗೆ ದಿನಕ್ಕೆ ರೂ. 20 ಸಾವಿರ ಮೊತ್ತದ ಪಿಪಿಇ ಕಿಟ್ ಬೇಕಂತೆ, ಆದರೆ ನ್ಯುಮೋನಿಯಾದ ಚಿಕಿತ್ಸೆಗೆ ಪಿಪಿಇ ಕಿಟ್ ಬೇಡವಂತೆ! ಏನಿದು ವಿಚಿತ್ರ? ಭಾರತದಲ್ಲಿ ಹಿಂದಿನ ಒಂದು ವರ್ಷದಲ್ಲಿ ಕೊರೋನದಿಂದ ಸತ್ತವರು 1,65,000. ಆದರೆ ನ್ಯುಮೋನಿಯಾದಿಂದ ಇದೇ ಅವಧಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಕ್ಷಯರೋಗ (ಟಿಬಿ) ಎಲ್ಲಕ್ಕಿಂತ ವೇಗವಾಗಿ ಸೋಂಕು ಹರಡುವ ರೋಗ.

ಆದರೂ ಕ್ಷಯದ ಚಿಕಿತ್ಸೆ ಮಾಡುವ ಡಾಕ್ಟರ್ ನರ್ಸ್‌ಗಳಿಗೆ ಯಾವುದೇ ಪಿಪಿಇ ಕಿಟ್ ಬೇಡವಂತೆ. ಕಳೆದ ಒಂದು ದಶಕದಿಂದಲೂ ಕ್ಷಯ ಮತ್ತು ನ್ಯುಮೋನಿಯಾದಿಂದ ಪ್ರತಿ ವರ್ಷ ತಲಾ ಎರಡು ಲಕ್ಷ ಜನ ಭಾರತದಲ್ಲಿ ಸಾಯುತ್ತಿದ್ದಾರೆ, ಆದರ ಬಗ್ಗೆ ಭಾರತ ಸರಕಾರಕ್ಕೆ ಅಥವಾ ವಿಶ್ವ ಆರೋಗ್ಯ ಸಂಸ್ಥೆಗೆ ಕಳವಳವೇ ಇಲ್ಲ. ಕಾರಣ ಈ ರೋಗಗಳು ಹೆಚ್ಚಾಗಿ ಕಾಡುವುದು ಬಡವರನ್ನು. ಆದರೆ ಕೊರೋನ ಶ್ರೀಮಂತರನ್ನೂ ಕಾಡುತ್ತದೆ, ಅದಕ್ಕಾಗಿ ಕೊರೋನ ಕುರಿತು ಸರಕಾರಕ್ಕೆ ಇಷ್ಟೊಂದು ಆತಂಕವೇ? ಸರಕಾರದ ಆದೇಶದಂತೆ ಉಸಿರಾಟದ ತೊಂದರೆ ಇದ್ದು, ಬೇರೆ ರೋಗಗಳಿಂದ ಸತ್ತವರನ್ನೂ ಕೊರೋನ ಗುಂಪಿನಲ್ಲಿಯೇ ಸೇರಿಸುವುದರಿಂದ ಭಾರತದಲ್ಲಿ ಕೊರೋನದಿಂದಾದ ಮರಣದ ಸಂಖ್ಯೆ 1,65,000 ಮುಟ್ಟಿದೆ ಎನ್ನಲಾಗುತ್ತಿದೆ. ನಿಜವಾಗಿ ನೈಜ ಕೊರೋನದಿಂದ ಸತ್ತವರು ಕೆಲವೇ ಸಾವಿರ ಇರಬಹುದು ಅಷ್ಟೇ. ಈಗ ಮತ್ತೆ ಕೊರೋನ ಸೋಂಕು ಹೆಚ್ಚುತ್ತಿದೆ ಎಂದು ಭಯ ಹುಟ್ಟಿಸಲಾಗುತ್ತಿದೆ. ಇದರ ಹಿಂದೆ ಯಾವ ಗುಪ್ತ ಅಜೆಂಡಾ ಇದೆಯೋ... ಜನರನ್ನು ದೇವರೇ ಕಾಪಾಡಬೇಕು.

share
ಹರೀಶ್ ಎಂ. ರೈ, ಉಡುಪಿ
ಹರೀಶ್ ಎಂ. ರೈ, ಉಡುಪಿ
Next Story
X