ಭಾರತದ ಮುಖ್ಯ ನ್ಯಾಯಾಧೀಶರನ್ನಾಗಿ ಜಸ್ಟಿಸ್ ಎನ್. ವಿ. ರಮಣ ಅವರನ್ನು ನೇಮಿಸಿದ ರಾಷ್ಟ್ರಪತಿ

ಹೊಸದಿಲ್ಲಿ: ಜಸ್ಟಿಸ್ ಎನ್. ವಿ. ರಮಣ ಅವರನ್ನು ಮುಂದಿನ ಭಾರತದ ಮುಖ್ಯ ನ್ಯಾಯಾಧೀಶರನ್ನಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ನೇಮಕ ಮಾಡಿದ್ದಾರೆ. ರಮಣ ಅವರು ಎಪ್ರಿಲ್ 24ರಂದು ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಎಪ್ರಿಲ್ 23ರಂದು ನಿವೃತ್ತಿಯಾಗಲಿರುವ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಅವರು ಕಳೆದ ತಿಂಗಳು ತನ್ನ ಉತ್ತರಾಧಿಕಾರಿಯಾಗಿ ಎನ್. ವಿ. ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದರು.
ಆಗಸ್ಟ್ 27, 1957ರಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನಾವರಂ ಗ್ರಾಮದಲ್ಲಿ ಜನಿಸಿರುವ ಜಸ್ಟಿಸ್ ರಮಣ ಅವರು ಒಂದು ವರ್ಷ ನಾಲ್ಕು ತಿಂಗಳ ಕಾಲ ಆಗಸ್ಟ್ 26,2022ರ ತನಕ ದೇಶದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜಸ್ಟಿಸ್ ಬೋಬ್ಡೆ ಅವರು 2019ರ ನವೆಂಬರ್ ನಲ್ಲಿ ಜಸ್ಟಿಸ್(ನಿವೃತ್ತ)ರಂಜನ್ ಗೊಗೊಯ್ ಅವರ ಉತ್ತರಾಧಿಕಾರಿಯಾಗಿ, ಭಾರತದ 47ನೇ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಂಡಿದ್ದರು.
Next Story