Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಛತ್ತೀಸಗಢ ನಕ್ಸಲ್ ದಾಳಿ ಚಿತ್ರಗಳು ಎಂದು...

ಛತ್ತೀಸಗಢ ನಕ್ಸಲ್ ದಾಳಿ ಚಿತ್ರಗಳು ಎಂದು ಚಲನಚಿತ್ರದ ಶೂಟಿಂಗ್ ನ ಫೋಟೋ ಪ್ರಕಟಿಸಿದ ‘ದೈನಿಕ್ ಭಾಸ್ಕರ್’

ವಾರ್ತಾಭಾರತಿವಾರ್ತಾಭಾರತಿ6 April 2021 5:20 PM IST
share
ಛತ್ತೀಸಗಢ ನಕ್ಸಲ್ ದಾಳಿ ಚಿತ್ರಗಳು ಎಂದು ಚಲನಚಿತ್ರದ ಶೂಟಿಂಗ್ ನ ಫೋಟೋ ಪ್ರಕಟಿಸಿದ ‘ದೈನಿಕ್ ಭಾಸ್ಕರ್’

ಹೊಸದಿಲ್ಲಿ: ಛತ್ತೀಸಗಢದ ತೆಕಲ್ಗುಡಂ ಗ್ರಾಮದ ಸುಕ್ಮಾ-ಬಿಜಾಪುರ ಗಡಿ ಸಮೀಪ ಶನಿವಾರ ನಡೆದ ಮಾವೋವಾದಿಗಳ ಜತೆಗಿನ ಸಂಘರ್ಷದಲ್ಲಿ 22 ಸಿಆರ್‍ಪಿಎಫ್ ಯೋಧರು ಹತರಾದ ಅತ್ಯಂತ ಗಂಭೀರ ಹಾಗೂ ದುರಂತಮಯ ಘಟನೆ ಮರೆಯಲು ಅಸಾಧ್ಯ. ಇಂತಹ ಒಂದು ವಿದ್ಯಮಾನವನ್ನು ಮಾಧ್ಯಮಗಳು  ಬಹಳಷ್ಟು ಜವಾಬ್ದಾರಿಯುತವಾಗಿ ಹಾಗೂ ನಿಖರವಾಗಿ ವರದಿ ಮಾಡಬೇಕಿದೆ. ಆದರೆ ‘ದೈನಿಕ್ ಭಾಸ್ಕರ್’ ಮಾಡಿದ ಕೆಲಸ ಮಾತ್ರ ನಿಜಕ್ಕೂ ಆಘಾತಕಾರಿ.

ಸೋಮವಾರ ಎಪ್ರಿಲ್ 5ರಂದು ಈ ಹಿಂದಿ ಸುದ್ದಿ ತಾಣ ತನ್ನ ವೆಬ್ ಸೈಟ್‍ನಲ್ಲಿ ಘಟನೆಯದ್ದೆಂದು ಹೇಳಲಾದ ಛಾಯಾಚಿತ್ರಗಳನ್ನು ಹಾಗೂ ವೀಡಿಯೋಗಳನ್ನು  ಪ್ರಕಟಿಸಿತ್ತು ಹಾಗೂ ವರದಿಯಲ್ಲಿ `ಬಿಜಾಪುರ ಎನ್‍ಕೌಂಟರ್ ಸ್ಥಳದ ಚಿತ್ರಗಳು ಮತ್ತು ವೀಡಿಯೋಗಳು,'' ಎಂದು ವಿವರಿಸಲಾಗಿತ್ತು.

ಶಸ್ತ್ರಾಸ್ತ್ರಗಳೊಂದಿಗೆ `ಮಾವೋವಾದಿಗಳ' ಚಿತ್ರಗಳಿದ್ದವು ಹಾಗೂ ವೀಡಿಯೋದಲ್ಲಿ ಎನಿಮೇಟೆಡ್  ರಾಕೆಟ್ ಲಾಂಚರ್ ಹಾಗೂ ನಕ್ಸಲೈಟ್ ಮಹಿಳೆಯರು  ಇದ್ದರು. ಜತೆಗೆ ‘ದೈನಿಕ್ ಭಾಸ್ಕರ್’ ತನಗೆ ``ಚಿತ್ರಗಳನ್ನು ದೃಢೀಕರಿಸಲು ಸಾಧ್ಯವಾಗಿಲ್ಲ,'' ಎಂದು ಬರೆದಿದೆ.

ಅಷ್ಟಕ್ಕೂ ಇವು ಕಳೆದ ಶನಿವಾರ ನಡೆದ ಸಂಘರ್ಷದ ಚಿತ್ರಗಳಲ್ಲ, ಇವುಗಳು ಮಾವೋವಾದಿಗಳ ಕುರಿತಂತೆ  ಛತ್ತೀಸಗಢದ ಬಸ್ತರ್ ಎಂಬಲ್ಲಿ ಚಿತ್ರೀಕರಿಸಲಾದ ಚಲನಚಿತ್ರದ ಫೋಟೋ ಹಾಗೂ ವೀಡಿಯೋಗಳು ಎಂಬುದು ಪ್ರಾಯಶಃ ಅವುಗಳನ್ನು ಪ್ರಕಟಿಸುವಾಗ ‘ದೈನಿಕ್ ಭಾಸ್ಕರ್‍’ಗೆ ತಿಳಿದಿರಲಿಲ್ಲ.

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಈ ನಿರ್ದಿಷ್ಟ ವರದಿಯನ್ನು ಡಿಲೀಟ್ ಮಾಡಲಾಗಿದೆ.

ದೈನಿಕ್ ಭಾಸ್ಕರ್ ಪ್ರಕಟಿಸಿದ್ದ ಫೋಟೋ ಹಾಗೂ ವೀಡಿಯೋಗಳು ವಾಸ್ತತವಾಗಿ ಜಗ್ದಲ್ಪುರ್ ಮೂಲದ ಸಂಪತ್ ಝಾ ಅವರ ನೇತೃತ್ವದಲ್ಲಿ ನಿರ್ಮಿಸಲಾದ ಚಲನಚಿತ್ರದ್ದಾಗಿತ್ತು. ಈ ಫೋಟೋಗಳಲ್ಲಿ ಕಾಣಿಸಿರುವ `ಮಾವೋವಾದಿಗಳು' ನಟರಾಗಿದ್ದಾರೆ ಎಂದು ಚಿತ್ರ ತಂಡದಲ್ಲಿದ್ದವರೊಬ್ಬರು ಮಾಹಿತಿ ನೀಡಿದ್ದಾರೆ ಎಂದು newslaundry.com ವರದಿ ಮಾಡಿದೆ.

‘ದೈನಿಕ್ ಭಾಸ್ಕರ್’ ವರದಿಯಲ್ಲಿದ್ದ ವೀಡಿಯೋಗಳಲ್ಲಿ ಒಂದು ವೀಡಿಯೋ ಮಾರ್ಚ್ 2020ರದ್ದಾಗಿತ್ತು  ಹಾಗೂ ಸುಕ್ಮಾ ಜಿಲ್ಲೆಯ ಗ್ರಾಮದಲ್ಲಿ ಹತ್ಯೆಗೀಡಾದ ಮಾವೋವಾದಿಯೊಬ್ಬನ ಅಂತ್ಯಕ್ರಿಯೆಯದ್ದಾಗಿತ್ತು.

ಈ ಕುರಿತು ‘ದೈನಿಕ್ ಭಾಸ್ಕರ್’ ಡಿಜಿಟಲ್ ಮಾಧ್ಯಮದ ಮುಖ್ಯಸ್ಥರಾಗಿರುವ ಪ್ರಸೂನ್ ಮಿಶ್ರಾ ಅವರನ್ನು newslaundry.com ಸಂಪರ್ಕಿಸಿದಾಗ, “ಈ ವಿಚಾರ ನನ್ನ ಗಮನಕ್ಕೆ ಬಂದಿದೆ, ಆದು ಅವಸರದಿಂದ ನಡೆದಿರಬಹುದು. ಕಳೆದ ಕೆಲ ದಿನಗಳಿಂದ ನಾನು ರಜೆಯಲ್ಲಿದ್ದೆ,'' ಎಂದಿದ್ದಾರೆ.

‘ದೈನಿಕ್ ಭಾಸ್ಕರ್’ ಪತ್ರಿಕೆಯ ರಾಷ್ಟ್ರೀಯ ಸಂಪಾದಕ ನವನೀತ್ ಗುರ್ಜರ್ ಪ್ರತಿಕ್ರಿಯಿಸಿ ``ದೃಢೀಕರಿಸಿ ಚಿತ್ರಗಳನ್ನು ಪ್ರಕಟಿಸಬೇಕಿತ್ತು. ನನಗೆ ಹೆಚ್ಚು ತಿಳಿದಿಲ್ಲದೇ ಇರುವುದರಿಂದ ಏನೂ ಹೇಳಲು ಸಾಧ್ಯವಿಲ್ಲ,'' ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X