Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ12 April 2021 12:10 AM IST
share
ಓ ಮೆಣಸೇ...

ಸೀಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ಎಮ್ಮೆಲ್ಸಿ, ಮಂತ್ರಿ ಆದವರಿಂದ ನಾನು ಕಲಿಯಬೇಕಾದುದೇನೂ ಇಲ್ಲ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಕನಿಷ್ಠ ಸಿಸಿ ಕ್ಯಾಮರಾ ಎಲ್ಲೆಲ್ಲ, ಹೇಗೆಲ್ಲ ಇರುತ್ತೆ ಎನ್ನುವ ಎಬಿಸೀಡಿಗಳನ್ನು ಕಲಿಯಬಹುದಲ್ಲವೇ?


ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕಿದ್ದ ವಿಷಯವನ್ನು ಈಶ್ವರಪ್ಪ ರಾಜ್ಯಪಾಲರ ಬಳಿಗೆ ಒಯ್ದಿರುವುದು ಸರಿ ಅಲ್ಲ- ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ನಾಲ್ಕು ಗೋಡೆಗಳ ನಡುವೆ ಮಾಡಬೇಕಾದ ಕೆಲಸ ಸೀಡಿಯೊಳಗೆ ಬಂದಿರುವಾಗ ಇದೇನು ಮಹಾ?


ರಾಜಕೀಯಕ್ಕೆ ಸಿನೆಮಾ ಕ್ಷೇತ್ರ ಅಡ್ಡಿಯಾಗಲಿದೆ ಎಂದು ಕಂಡು ಬಂದರೆ ಚಲನಚಿತ್ರ ಕ್ಷೇತ್ರಕ್ಕೆ ವಿದಾಯ ಹೇಳುವೆ- ಕಮಲ್ ಹಾಸನ್, ನಟ
ಚಿತ್ರರಂಗದಲ್ಲಿ ಸಾಲು ಸಾಲು ಸೋಲಿನಿಂದ ಕಂಗೆಟ್ಟು ಆಡಿದ ಮಾತು.


ಪ.ಬಂ.ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಟಿಎಂಸಿ ಗೂಂಡಾಗಳಿಗೆ ಪಾಠ ಕಲಿಸಲಾಗುವುದು - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ ಉತ್ತರ ಪ್ರದೇಶದ ಗೂಂಡಾಗಳಿಂದ ಟಿಎಂಸಿ ಗೂಂಡಾಗಳು ಪಾಠ ಕಲಿಯುವುದೇ?


ಯುವ ಜನತೆ ಆರ್ಥಿಕವಾಗಿ ಮುಂದೆ ಬರುತ್ತಲೇ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಬೇಕು - ಡಾ.ಸಿದ್ದಲಿಂಗಯ್ಯ, ಕವಿ
ತಾವು ಇನ್ನೂ ಆರ್ಥಿಕವಾಗಿ ಮುಂದೆ ಬಂದಿಲ್ಲ ಎಂದು ಇದರ ಅರ್ಥವೋ?


ರೈತರ ಕಣ್ಮಣಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕನಕದಾಸ ಜಯಂತಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ನಾವು ಯಾರೂ ಮರೆಯುವಂತಿಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ 
ಯಡಿಯೂರಪ್ಪರನ್ನು ಅಭಿನಂದಿಸುವುದಕ್ಕಾಗಿ ತಾವು ರಾಜ್ಯಪಾಲರ ಬಳಿಗೆ ಹೋಗಿರಬೇಕು, ಅಲ್ಲವೇ?


ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಇಳಿಕೆಯಾಗುತ್ತಿದ್ದು, ಇನ್ನೂ ಇಳಿಕೆಯಾಗುವ ಸಾಧ್ಯತೆ ಇದೆ - ಧಮೇಂದ್ರ ಪ್ರಧಾನ್, ಕೇಂದ್ರ ಸಚಿವ ಚುನಾವಣೆ ಮುಗಿಯುವವರೆಗೆ ಪೈಸೆ ಲೆಕ್ಕದಲ್ಲಿ ಇಳಿಕೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ ಬಿಡಿ.


ರಾಜ್ಯ ಕಾಂಗ್ರೆಸ್ ನಾಯಕರು ಹಸಿ ಸುಳ್ಳು ಹೇಳುವುದರಿಂದ ಜನ ಅವರನ್ನು ನಂಬುವುದಿಲ್ಲ - ಜಗದೀಶ್ ಶೆಟ್ಟರ್, ಸಚಿವ
ನಿಮ್ಮದೆಲ್ಲ ಒಣ ಸುಳ್ಳು ಇರಬೇಕು.


ಕಲೆ, ಸಾಹಿತ್ಯದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು- ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮಖಂಡ
ಜನರಿಗೆ ಅದು ಕೊಲೆ ಸಾಹಿತ್ಯದ ಮೂಲಕ ಎಂದು ಕೇಳಿಸಿದೆ.


ಸರಕಾರ ಉಚಿತವಾಗಿ ಕೋವಿಡ್ ಲಸಿಕೆ ಕೊಡುತ್ತಿದೆಯಾದರೂ ಜನರು ತೆಗೆದುಕೊಳ್ಳುತ್ತಿಲ್ಲ - ಡಾ.ಕೆ.ಸುಧಾಕರ್, ಸಚಿವ
ಹಸಿದ ಜನರಿಗೆ ಬೇಕಾಗಿರುವುದು ಉಚಿತ ಅಕ್ಕಿ.


ಬಿಜೆಪಿಯಲ್ಲಿ ಅಭಿಪ್ರಾಯ ಭೇದಗಳಿವೆಯೇ ಹೊರತು ಭಿನ್ನಾಭಿಪ್ರಾಯಗಳಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ
ಸೀಡಿಯ ವಿಷಯದಲ್ಲಿ ಇರಬೇಕು.


 ಕಾಂಗ್ರೆಸ್ ಎಲ್ಲ ಜನರನ್ನೂ ಸೇರಿಸಿಕೊಂಡು ಹಲವಾರು ದಶಕಗಳ ಕಾಲ ಆಡಳಿತ ನಡೆಸಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಅದಕ್ಕೆ ಬೇಸತ್ತ ಜನರು ಈಗ ಬರೇ ಇಬ್ಬರಿಂದ ಆಳಿಸಿಕೊಳ್ಳುತ್ತಿದ್ದಾರೆ.


ಒಂದೊಮ್ಮೆ ನಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಆಡಳಿತ ನೀಡುತ್ತೇನೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ನೇರ ಉತ್ತರ ಪ್ರದೇಶಕ್ಕೇ ಹೋಗಿ, ಇಲ್ಲೇನು ಮಾಡುತ್ತಿದ್ದೀರಿ?


ಪ್ರಧಾನಿ ಮೋದಿ ಅಲೆಯಿಂದಾಗಿ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಕೊರೋನ ಅಲೆಯ ಜೊತೆಗೆ ಮೋದಿ ಅಲೆ ತೀವ್ರ ಪೈಪೋಟಿಯಲ್ಲಿದೆ.


ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್ ಸ್ವಲ್ಪಮಟ್ಟಿಗೆ ಕ್ರಿಯಾಶೀಲವಾಗಿರುತ್ತದೆ - ಜಿತೇಂದ್ರ ಸಿಂಗ್, ಕೇಂದ್ರ ಸಚಿವ
ಬಿಜೆಪಿಗೆ ಮಾರಿಕೊಳ್ಳಲು ಒಂದಿಷ್ಟು ಶಾಸಕರು ಬೇಕಲ್ಲ, ಆ ಕಾರಣಕ್ಕೆ ಕ್ರಿಯಾಶೀಲವಾಗಿರುವುದಂತೆ.


ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಬಿಜೆಪಿ ಸರಕಾರ ಇದ್ದಾಗ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ - ಅಮಿತ್ ಶಾ, ಕೇಂದ್ರ ಸಚಿವ
ಕರ್ನಾಟಕ ಆ ಪರಿಹಾರವನ್ನು ಈಗಾಗಲೇ ಅನುಭವಿಸುತ್ತಿದೆ.


ಬಿಜೆಪಿಯಲ್ಲಿ ಯೋಗ್ಯತೆ ಇದ್ದವರಿಗೆ ಮಾತ್ರ ಉಸ್ತುವಾರಿ ಕೊಡಲಾಗುತ್ತಿದೆ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಕೆಪಿಎಸ್ಸಿ ಸ್ಥಾನಕ್ಕೆ ಮಾತ್ರ ಯೋಗ್ಯತೆಯ ಅಗತ್ಯವಿಲ್ಲ ಎಂದು ಭಾವಿಸಿರಬೇಕು.


ಕೇರಳ ವಿಧಾನ ಸಭಾ ಚುನಾವಣೆಯ ಬಳಿಕ ಎಡರಂಗದ ರಕ್ತ ರಾಜಕಾರಣ ಕೊನೆಯಾಗಲಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಬಲರಂಗದ ರಕ್ತ ರಾಜಕಾರಣ ಆರಂಭವಾಗುತ್ತದೆಯೇ?


ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಪ್ರಬಲವಾದರೆ ಮುಖ್ಯಮಂತ್ರಿ ದುರ್ಬಲರಾಗುತ್ತಾರೆ. ಹೈಕಮಾಂಡ್ ದುರ್ಬಲವಾದರೆ ಮುಖ್ಯಮಂತ್ರಿ ಪ್ರಬಲರಾಗುತ್ತಾರೆ - ವೈ.ಎಸ್.ವಿ.ದತ್ತ ಜೆಡಿಎಸ್ ಮುಖಂಡ
ತಾವು ದುರ್ಬಲರಾಗಲು ಯಾರು ಪ್ರಬಲರಾದದ್ದು ಕಾರಣ ಎನ್ನುವುದನ್ನು ಬಿಡಿಸಿ ಹೇಳುತ್ತೀರಾ?


ಪರೀಕ್ಷೆಗಳು ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಇರುವ ಅವಕಾಶಗಳು - ನರೇಂದ್ರ ಮೋದಿ, ಪ್ರಧಾನಿ
ಬರೇ ಪರೀಕ್ಷೆ ಮಾಡುವುದಷ್ಟೇ ಪ್ರಧಾನಿಯ ಕೆಲಸವೇ?


ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯ ಮಾಲಕರಲ್ಲ - ಸಿ.ಟಿ.ರವಿ, ಬಿಜೆಪಿ ಪ್ರ.ಕಾರ್ಯದರ್ಶಿ
ಅದಾನಿ, ಅಂಬಾನಿ ಬಿಜೆಪಿಯ ಮಾಲಕರು ಎನ್ನುವುದು ವಿಶ್ವಕ್ಕೆ ಗೊತ್ತಿದೆ ಬಿಡಿ.


ಯಡಿಯೂರಪ್ಪರ ಬಗ್ಗೆ ಈಶ್ವರಪ್ಪರಿಗೆ ಅಭಿಮಾನವಿದೆ- ಭೈರತಿ ಬಸವರಾಜ್, ಸಚಿವ
ಆ ಅಭಿಮಾನ ನೋಡಿ ರಾಜ್ಯಪಾಲರು ಆನಂದ ಬಾಷ್ಪವನ್ನು ಸುರಿಸಿದರಂತೆ.


ಮಹಾರಾಷ್ಟ್ರದಲ್ಲಿ ಕೊರೋನ ಹೆಚ್ಚಾಗಲು ವಲಸೆ ಕಾರ್ಮಿಕರೇ ಕಾರಣ - ರಾಜ್ ಠಾಕ್ರೆ, ಎಂ.ಎನ್.ಎಸ್. ನಾಯಕ
ತಪಾಸಣೆ ಹೆಚ್ಚುತ್ತಿರುವುದು ಕಾರಣ ಎನ್ನುವುದು ವೈದ್ಯರ ಅಂಬೋಣ. ತಪಾಸಣೆಯನ್ನು ನಿಲ್ಲಿಸಿದರೆ ಕೊರೋನ ಇಳಿಕೆಯಾಗುವ ಸಾಧ್ಯತೆಗಳಿವೆ. 


ಆರೆಸ್ಸೆಸ್ ಸಿದ್ಧಾಂತ ವಿಷ ಇದ್ದಂತೆ. ಈ ವಿಷ ದೇಶಾದ್ಯಂತ ಹರಡುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕು- ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಮುಖಂಡ
ದೇಶಾದ್ಯಂತ ಇನ್ನೂ ಹರಡಿಯೇ ಇಲ್ಲ ಎಂಬ ನಿಮ್ಮ ಮುಗ್ಧತೆಗೆ ನಮಸ್ಕಾರ 

share
ಪಿ.ಎ.ರೈ
ಪಿ.ಎ.ರೈ
Next Story
X