ಚಾಮರಾಜನಗರ: ಈಜಲು ಹೋದ ವಿದ್ಯಾರ್ಥಿ ನೀರುಪಾಲು
ಚಾಮರಾಜನಗರ: ಯುಗಾದಿ ವರ್ಷದೊಡಕಿನಂದು ಬಣ್ಣದಾಟ ಆಡಿ ಬಣ್ಣ ತೊಳೆದುಕೊಳ್ಳಲು ಈಜಲು ಹೋದ ವೇಳೆ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಕೆರೆಯಲ್ಲಿ ನಡೆದಿದೆ.
ಕೊಡಸೋಗೆ ಗ್ರಾಮದ ಮಹೇಶ್ ಎಂಬವರ ಮಗ ಚಂದು ಮೃತ ದುರ್ದೈವಿ. ಈತ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಯುಗಾದಿ ವರ್ಷದೊಡಕಿನ ಪ್ರಯುಕ್ತ ಬಣ್ಣ ಎರಚಾಡಿಕೊಂಡು ಸಂಭ್ರಮಿಸಿ ಬಣ್ಣ ತೊಳೆಯಲು ಮೂವರು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದಾರೆ. ಚಂದು ಕಾಲುಜಾರಿ ಆಳಕ್ಕೆ ಹೋಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story