Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ತಂದೆಯನ್ನು ನೋಡಲು ವೈದ್ಯರಿಗೆ ಅನುಮತಿ...

ತಂದೆಯನ್ನು ನೋಡಲು ವೈದ್ಯರಿಗೆ ಅನುಮತಿ ನೀಡಿ

ಉಪವಾಸನಿರತ ರಶ್ಯ ಪ್ರತಿಪಕ್ಷ ನಾಯಕನ ಮಗಳಿಂದ ಮನವಿ

ವಾರ್ತಾಭಾರತಿವಾರ್ತಾಭಾರತಿ19 April 2021 8:59 PM IST
share
ತಂದೆಯನ್ನು ನೋಡಲು ವೈದ್ಯರಿಗೆ ಅನುಮತಿ ನೀಡಿ

ಮಾಸ್ಕೋ (ರಶ್ಯ), ಎ. 19: ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ಜೀವದ ಬಗ್ಗೆ ಜಗತ್ತಿನಾದ್ಯಂತ ಕಳವಳ ಹೆಚ್ಚುತ್ತಿರುವಂತೆಯೇ, ‘‘ನನ್ನ ತಂದೆಯನ್ನು ನೋಡಲು ವೈದ್ಯರಿಗೆ ಅನುಮತಿ ನೀಡಿ’’ ಎಂಬುದಾಗಿ ಅವರ ಮಗಳು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

ಉಪವಾಸದಿಂದಾಗಿ ನವಾಲ್ನಿಯ ದೇಹ ವ್ಯವಸ್ಥೆ ವೇಗವಾಗಿ ಹದಗೆಡುತ್ತಿದೆಯೆನ್ನಲಾಗಿದ್ದು, ತನ್ನ ವೈದ್ಯರನ್ನು ನೋಡಲು ಅಧಿಕಾರಿಗಳು ಅವರಿಗೆ ಅವಕಾಶ ನೀಡುತ್ತಿಲ್ಲ.

ರಶ್ಯದ ಜೈಲೊಂದರಲ್ಲಿ ಅವರು ನಡೆಸುತ್ತಿರುವ ಉಪವಾಸ 19ನೇ ದಿನವನ್ನು ಪ್ರವೇಶಿಸಿದೆ.

ನವಾಲ್ನಿಯ 20 ವರ್ಷದ ಮಗಳು ಡಾರಿಯ ನವಾಲ್ನಿಯ ಕ್ಯಾಲಿಫೋರ್ನಿಯದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದಾರೆ.

ನವಾಲ್ನಿ ಸಾಯುತ್ತಿದ್ದಾರೆ ಎಂಬುದಾಗಿ ಅವರ ಪತ್ರಿಕಾ ಕಾರ್ಯದರ್ಶಿ ಕೆ.ಡಬ್ಲ್ಯು. ವಿರಾ ಯಾರ್ಮಿಶ್ ಟ್ವೀಟ್ ಮಾಡಿದ್ದಾರೆ. ‘‘ಅವರ ಬದುಕು ಇನ್ನು ಕೆಲವು ದಿನಗಳು ಮಾತ್ರ’’ ಎಂದು ಅವರು ಹೇಳಿದ್ದಾರೆ.

ಅವರ ಹೃದಯ ಯಾವುದೇ ಕ್ಷಣದಲ್ಲಿ ಸ್ತಂಭಿಸಬಹುದು ಎಂದು ಹಲವು ವೈದ್ಯರು ಹೇಳಿದ್ದಾರೆ.

ರಶ್ಯದ ನಗರಗಳಲ್ಲಿ ಬುಧವಾರ ಸಂಜೆ ಹೊಸದಾಗಿ ಪ್ರತಿಭಟನೆಗಳನ್ನು ನಡೆಸುವುದಾಗಿ ಅವರ ತಂಡ ರವಿವಾರ ಘೋಷಿಸಿದೆ.

ಓರ್ವ ವ್ಯಕ್ತಿಯನ್ನು ಅವರು ಹೇಗೆ ಕೊಲ್ಲುತ್ತಾರೆ ಎನ್ನುವುದನ್ನು ನೋಡಬೇಕೇ?

‘‘ಓರ್ವ ವ್ಯಕ್ತಿಯನ್ನು ಅವರು ಹೇಗೆ ಕೊಲ್ಲುತ್ತಾರೆ ಎನ್ನುವುದನ್ನು ನಿಮ್ಮದೇ ಕಣ್ಣುಗಳಲ್ಲಿ ನೀವು ಯಾವತ್ತಾದರೂ ನೋಡಿದ್ದೀರಾ’’ ಎಂಬುದಾಗಿ ಹೇಳಿಕೆಯೊಂದರಲ್ಲಿ ನವಾಲ್ನಿಯ ಪ್ರತಿನಿಧಿಯೊಬ್ಬರು ಕೇಳಿದ್ದಾರೆ.

‘‘ಈಗ ನೀವು ಅದನ್ನು ನೋಡುತ್ತಿದ್ದೀರಿ... ಅವರು ಅಲೆಕ್ಸಿ ನವಾಲ್ನಿಯನ್ನು ಕೊಲ್ಲುತ್ತಿದ್ದಾರೆ, ಭೀಕರವಾಗಿ. ನಮ್ಮೆಲ್ಲರ ಎದುರಲ್ಲಿ’’ ಎಂದು ಅವರು ಹೇಳಿದ್ದಾರೆ.

ಖ್ಯಾತನಾಮರಿಂದ ಪುಟಿನ್‌ಗೆ ಮನವಿ

ಅಲೆಕ್ಸಿ ನವಾಲ್ನಿಗೆ ತನ್ನ ವೈದ್ಯರನ್ನು ನೋಡಲು ಅವಕಾಶ ನೀಡಿ ಎಂಬುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಕರೆ ನೀಡುವ ಪತ್ರವೊಂದನ್ನು ಹಲವಾರು ಲೇಖಕರು, ನಟರು, ಇತಿಹಾಸ ತಜ್ಞರು ಮತ್ತು ಇತರ ಖ್ಯಾತನಾಮರು ‘ಎಕನಾಮಿಸ್ಟ್’ ಮತ್ತು ‘ಲೆ ಮಾಂಡ್’ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ.

ರಶ್ಯದ ಕೃತ್ಯಗಳು ‘ಸಂಪೂರ್ಣ ಅನ್ಯಾಯವಾಗಿವೆ’’ ಹಾಗೂ ‘‘ಸಂಪೂರ್ಣ ಅನುಚಿತವಾಗಿವೆ’’ ಎಂಬುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶನಿವಾರ ಬಣ್ಣಿಸಿದ್ದಾರೆ.

ರಿಸೀವರ್ ಕೆಳಗಿಟ್ಟು ಮಲಗಿದರು: ನವಾಲ್ನಿ ಪತ್ನಿ

ಜೈಲಿನಲ್ಲಿ ನವಾಲ್ನಿಯನ್ನು ಮೊದಲ ಬಾರಿಗೆ ಭೇಟಿಯಾಗಲು ಅವರ ಪತ್ನಿ ಯೂಲಿಯಾ ನವಾಲ್ನಿಯಗೆ ಕಳೆದ ವಾರ ಅವಕಾಶ ನೀಡಲಾಗಿತ್ತು.

‘‘ನಮ್ಮ ನಡುವೆ ಗಾಜಿನ ಪರದೆಯಿದ್ದು, ಟೆಲಿಫೋನ್ ಮೂಲಕ ನಾನು ನವಾಲ್ನಿಯೊಂದಿಗೆ ಮಾತನಾಡಿದೆ’’ ಎಂಬುದಾಗಿ ಪತ್ನಿ ಹೇಳಿದ್ದಾರೆ. ‘‘ಅವರು ಮಾತಾನಾಡಲು ಕಷ್ಟ ಪಡುತ್ತಿದ್ದರು. ಅವರು ಎಷ್ಟು ದುರ್ಬಲರಾಗಿದ್ದಾರೆಂದರೆ, ಸ್ವಲ್ಪ ಮಾತನಾಡಿದ ಬಳಿಕ ರಿಸೀವರನ್ನು ಕೆಳಗಿಟ್ಟು ಮಲಗಿದರು’’ ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X