Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಗನ ಸನ್ಯಾಸ ಸ್ವೀಕಾರಕ್ಕೆ ಮಾನಸಿಕವಾಗಿ...

ಮಗನ ಸನ್ಯಾಸ ಸ್ವೀಕಾರಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದೆವು: ಡಾ.ಸರಳತ್ತಾಯ

ವಾರ್ತಾಭಾರತಿವಾರ್ತಾಭಾರತಿ21 April 2021 8:51 PM IST
share
ಮಗನ ಸನ್ಯಾಸ ಸ್ವೀಕಾರಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದೆವು: ಡಾ.ಸರಳತ್ತಾಯ

ಉಡುಪಿ, ಎ.21: ‘ಅನಿರುದ್ಧ ನಮಗೆ ಏಕೈಕ ಪುತ್ರನಾದರೂ, ಆತನ ಜಾತಕ ನೋಡಿದಾಗಲೇ ಆತನಲ್ಲಿ ಯತಿ ಧರ್ಮ ಹಾಗೂ ಶಾಸ್ತ್ರ ಅಧ್ಯಯನ ಇರುವುದು ಕಂಡುಬಂದಿತ್ತು. ಬಹಳಷ್ಟು ಮಂದಿಗೆ ಇದನ್ನು ತೋರಿಸಿದಾಗ ಅವರೂ ಇದೇ ಅಭಿಪ್ರಾಯ ನೀಡಿದರು. ಹೀಗಾಗಿ ಮಗನ ಸನ್ಯಾಸ ಸ್ವೀಕಾರಕ್ಕೆ ನಾವು ಮಾನಸಿಕವಾಗಿ ಸಿದ್ಧರಾಗಿದ್ದೆವು.’ ಎಂದು ಶಿರೂರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಉಡುಪಿಯ ಅನಿರುದ್ಧ ಸರಳತ್ತಾಯರ ತಂದೆ ಡಾ.ಎಂ.ಉದಯ ಕುಮಾರ್ ಸರಳತ್ತಾಯ ಹಾಗೂ ತಾಯಿ ಶ್ರೀವಿದ್ಯಾ ನುಡಿದರು.

ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಶಿರೂರು ಮಠದ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಶಿರೂರು ಮಠದ ಉತ್ತರಾಧಿಕಾರಿಯ ಘೋಷಣೆ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಮಗನೊಂದಿಗೆ ಉಪಸ್ಥಿತರಿದ್ದ ಅವರು ಈ ವಿಷಯ ತಿಳಿಸಿದರು.

ಅನಿರುದ್ಧ ಚಿಕ್ಕ ವಯಸ್ಸಿನಿಂದಲೂ ದೇವರು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಉಳ್ಳವನಾಗಿದ್ದು, ಮನೆಯಲ್ಲಿ ಉಳಿದ ಶಿಷ್ಯರೊಂದಿಗೆ ಆತನೂ ವೇದಾಧ್ಯಯನದಲ್ಲಿ ನಿರತನಾಗಿದ್ದ. ಮಠ, ಸಂಪ್ರದಾಯ, ಆಚರಣೆಗಳು, ವಿಧಿವಿದಾನಗಳ ಬಗ್ಗೆ ಆಸಕ್ತನಾಗಿದ್ದ. ಶಿರೂರು ಮಠಕ್ಕೆ ಯತಿಯಾಗಿ ತೆರಳುವ ಬಗ್ಗೆ ಆತನೇ ನಮಗೆ ತಿಳಿಸಿದ್ದ. ಹೀಗಾಗಿ ಮೊದಲ ಬಾರಿ ಆತ ಈ ಮಾತನ್ನು ಹೇಳಿದಾಗಲೇ ನಾವು ಒಪ್ಪಿಗೆ ಸೂಚಿಸಿದೆವು ಎಂದು ಉದಯಕುಮಾರ್ ಸರಳತ್ತಾಯ ನುಡಿದರು.

ತಾಯಿ ಶ್ರೀವಿದ್ಯಾ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ಆತ ಪೂಜೆ, ಉಪವಾಸದ ಬಗ್ಗೆ ಹೆಚ್ಚು ಒಲವು ತೋರುತಿದ್ದ. ಆದ್ಯಾತ್ಮಿಕತೆಯತ್ತ ಆತನ ಒಲವಿನಿಂದಾಗಿ ಆತನಿಗೆ ಸನ್ಯಾಸ ಯೋಗವಿರುವುದು ನಮಗೆ ಖಚಿತವಾಗಿ ಆತನ ಸನ್ಯಾಸ ಸ್ವೀಕಾರ ವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೇವೆ ಎಂದರು. ಇವರಿಗೆ ಹಿರಣ್ಮಯಿ ಎಂಬ ಮಗಳಿದ್ದಾಳೆ.

ಡಾ.ಉದಯಕುಮಾರ ಸರಳತ್ತಾಯ ಕುಟುಂಬ ಮೂಲತ: ಉಡುಪಿಯದ್ದಾದರೂ, ಅವರ ಪೂರ್ವಜರು ದೇವಸ್ಥಾನದ ಪೂಜೆಗೆಂದು ತೆರಳಿ ಧರ್ಮಸ್ಥಳ ಸಮೀಪದ ನಿಡ್ಲೆಯಲ್ಲಿ ನೆಲೆಸಿದ್ದರು. ಉಡುಪಿಯಲ್ಲಿ ವೇದಾಭ್ಯಾಸ ನಡೆಸಿ, ಉಡುಪಿಯ ಸಂಸ್ಕೃತ ಕಾಲೇಜು, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಬಿ.ಎಡ್. ಹಾಗೂ ಪಿಎಚ್‌ಡಿ ಮುಗಿಸಿದ್ದರು.

''ನನಗೆ ಮೊದಲಿನಿಂದಲೂ ಕೃಷ್ಣನ ಪೂಜೆ ಮಾಡುವ ಆಶೆ ಇತ್ತು. ಸನ್ಯಾಸಾಶ್ರಮ ವಿಷಯದ ಬಗ್ಗೆಯೂ ನನಗೆ ತಿಳಿದಿದೆ. ತಂದೆಯವರು ನನಗೆ ಎಲ್ಲವನ್ನೂ ತಿಳಿಸಿದ್ದಾರೆ. ಅವರ ಬಳಿಯೇ ನಾನು ಸಂಸ್ಕೃತದ ಮೂಲ ಅಧ್ಯಯನ, ವೇದಾದ್ಯಯನ ನಡೆಸುತಿದ್ದೇನೆ. ಶಿರೂರು ಮಠದ ಯತಿಯಾಗುವ ಇಚ್ಛೆಯನ್ನು ನಾನೇ ತಂದೆಯವರ ಬಳಿ ಹೇಳಿದ್ದೆ. ಮುಂದೆ ಶಾಸ್ತ್ರಾಭ್ಯಾಸ, ವೇದಾಂತ ಅಧ್ಯಯನವನ್ನು ನಡೆಸುತ್ತೇನೆ. ಅದರೊಂದಿಗೆ ಲೌಕಿಕ ಅಧ್ಯಯನವನ್ನೂ ಮುಂದುವರಿಸುತ್ತೇನೆ''.
 -ಅನಿರುದ್ಧ ಸರಳತ್ತಾಯ, ಶಿರೂರು ಮಠದ ಉತ್ತರಾಧಿಕಾರಿಯಾಗಲು ಆಯ್ಕೆಯಾದ ವಟು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X