ಮಾಳ ಘಾಟ್ನಲ್ಲಿ ಅಪಘಾತ: ಲಾರಿ ಚಾಲಕ ಮೃತ್ಯು
ಕಾರ್ಕಳ, ಎ. 21: ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಎ.20ರಂದು ರಾತ್ರಿ ವೇಳೆ ಇಲ್ಲಿನ ಮಾಳ ಘಾಟ್ನಲ್ಲಿ ನಡೆದಿದೆ.
ಶಿವಮೊಗ್ಗದಿಂದ ಕಾರ್ಕಳ ಕಡೆಗೆ ಸಿಲಿಂಡರ್ ತುಂಬಿಸಿಕೊಂಡು ಬರುತ್ತಿದ್ದ ಲಾರಿಯು ಮಾಳ ಘಾಟಿಯಲ್ಲಿ ಇಳಿಯುತ್ತಿರುವಾಗ ಲಾರಿ ಏಕಾಏಕಿ ನಿಯಂತ್ರಣ ತಪ್ಪಿರಸ್ತೆಯಲ್ಲಿ ಅಡ್ಡದಿಡ್ಡಿ ಚಲಿಸಿತ್ತೆನ್ನಲಾಗಿದೆ. ಈ ವೇಳೆ ಚಾಲಕ ವಿಶ್ವನಾಥ ಲಾರಿಯಿಂದ ಹೊರಗೆ ಹಾರಿದ್ದು, ಲಾರಿ ಎದುರಿಗೆ ಹೋಗಿ ರಸ್ತೆ ಬದಿಯ ಗೋಡೆಗೆ ಬಡಿಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ವಿಶ್ವನಾಥ ಸ್ಥಳದಲ್ಲಿಯೇ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story