ಕೋವಿಡ್ : ಭಾರತೀಯರಿಗೆ 'ಕೈಲಾಸ' ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ನಿತ್ಯಾನಂದ !

ಕೋವಿಡ್ ನಿಂದ ಕಂಗಾಲಾಗಿ ನೀವು ದೇಶದಿಂದ ಪರಾರಿಯಾಗಲು ಬಯಸಿದ್ದರೆ ಎಲ್ಲಿಗೆ ಹೋಗುತ್ತೀರಿ ? ನಿಮಗೆ ಬೇಕೆಂದ ಎಲ್ಲ ದೇಶಗಳಿಗೆ ಹೋಗಲು ಸಾಧ್ಯವಿಲ್ಲ. ಕೆಲವು ದೇಶಗಳು ಈಗಾಗಲೇ ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿವೆ. ಆ ಪಟ್ಟಿಗೆ ಹೊಸ ಸೇರ್ಪಡೆ 'ಕೈಲಾಸ' !.
ಹೌದು. ಭಾರತೀಯರು ಸದ್ಯಕ್ಕೆ ಕೈಲಾಸಕ್ಕೆ ಹೋಗಲು ಸಾಧ್ಯವಿಲ್ಲ. ಗಡಿಬಿಡಿ ಮಾಡಿಕೊಳ್ಳಬೇಡಿ. ಇದು ಸ್ವಾಮಿ ನಿತ್ಯಾನಂದನ ಸ್ವಯಂ ಘೋಷಿತ ದ್ವೀಪ ದೇಶ. ಅದರ ಹೆಸರು ಕೈಲಾಸ. ಇದು ಈಕ್ವೆಡಾರ್ ಸಮೀಪ ಇದೆ.
ಈ ಕುರಿತು ಕೈಲಾಸ ದೇಶದ ಅಧ್ಯಕ್ಷ ಸ್ವಾಮಿ ನಿತ್ಯಾನಂದ ಸ್ವತಃ ಟ್ವೀಟ್ ಮೂಲಕ ಆದೇಶ ಹೊರಡಿಸಿದ್ದಾರೆ. ವಿಶ್ವಾದ್ಯಂತ ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ, ಬ್ರೆಝಿಲ್, ಯುರೋಪಿಯನ್ ಯೂನಿಯನ್ ಹಾಗೂ ಮಲೇಶ್ಯದಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿದ ಬಳಿಕ ನಿತ್ಯಾನಂದ 2019 ರಿಂದ ಈಕ್ವೆಡಾರ್ ನಲ್ಲಿರುವ ದ್ವೀಪವೊಂದರಲ್ಲಿ ವಾಸಿಸಿ ಅದನ್ನು ಹೊಸ ದೇಶವೆಂದು ಪರಿಗಣಿಸಲು ವಿಶ್ವ ಸಂಸ್ಥೆಯನ್ನು ಕೇಳಿಕೊಂಡಿದ್ದಾನೆ.
ಅಧ್ಯಕ್ಷ ನಿತ್ಯಾನಂದರ ಆದೇಶದ ಟ್ವೀಟ್ ಹಾಗೂ ಅದಕ್ಕೆ ಜನರ ಪ್ರತಿಕ್ರಿಯೆಗಳು ಇಲ್ಲಿವೆ ನೋಡಿ
KAILASA's #PresidentialMandate
— KAILASA'S SPH JGM HDH Nithyananda Paramashivam (@SriNithyananda) April 20, 2021
Executive order directly from the #SPH for all the embassies of #KAILASA across the globe. #COVID19 #COVIDSecondWaveInIndia #CoronaSecondWave #Nithyananda #Kailaasa #ExecutiveOrder pic.twitter.com/I2D0ZvffnO
— Harvard V/s HardWork (@TurMurTu) April 22, 2021
— Mal-Lee (@MallikarjunaNH) April 22, 2021