Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ...

ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ ಮಾಡಬಾರದೇ ?: ತಜ್ಞ ವೈದ್ಯರು ಹೀಗೆ ಉತ್ತರಿಸುತ್ತಾರೆ...

ವಾರ್ತಾಭಾರತಿವಾರ್ತಾಭಾರತಿ24 April 2021 8:39 PM IST
share
ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ ಮಾಡಬಾರದೇ ?: ತಜ್ಞ ವೈದ್ಯರು ಹೀಗೆ ಉತ್ತರಿಸುತ್ತಾರೆ...

ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ ಮಾಡಬಾರದು, ಅಂದರೆ ಮೊದಲ ಡೋಸ್ ತೆಗೆದುಕೊಂಡ ನಂತರ ಎರಡರಿಂದ ಎರಡೂವರೆ ತಿಂಗಳು ರಕ್ತದಾನ ಮಾಡಲು ಸಾಧ್ಯವಿಲ್ಲ. ಹೆಚ್ಚಾಗಿ ರಕ್ತದಾನ ಮಾಡುವ 18-45 ವಯಸ್ಸಿನೊಳಗಿನವರೇ ಈಗ ಲಸಿಕೆ ಹಾಕಿಸಿಕೊಳ್ಳಲಿರುವುದರಿಂದ ರಕ್ತದಾನ ಮಾಡಲಿಚ್ಚಿಸುವವರು ಮೊದಲೇ ರಕ್ತದಾನ ಮಾಡಿ ಆ ಮೇಲೆ ಲಸಿಕೆ ಪಡೆಯಿರಿ ಎಂದು ಹೇಳಿರುವ ವಿಡಿಯೋ ಹರಿದಾಡುತ್ತಿದೆ. ಇಂಥ ನಿಯಮವನ್ನು ಮಾಡಿದ್ದರೆ ಅದನ್ನು ಪ್ರಶ್ನಿಸುವ ಬದಲಿಗೆ ಬಂದ ನಿಯಮವೇ ವೇದವಾಕ್ಯ ಎಂಬಂತೆ ಹೇಳಿಕೆಗಳನ್ನು ನೀಡುತ್ತಿರುವುದು ಶೋಚನೀಯವಾಗಿದೆ.

ಕೊರೋನ ಲಸಿಕೆ ಪಡೆದವರು ಎರಡನೇ ಡೋಸ್ ಪಡೆದ 28 ದಿನಗಳವರೆಗೆ ರಕ್ತದಾನ ಮಾಡುವಂತಿಲ್ಲ ಎಂದು ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಡಿ ಇರುವ ರಾಷ್ಟ್ರೀಯ ರಕ್ತ ಪೂರಣ ಮಂಡಳಿಯು ಫೆಬ್ರವರಿ 17ರ ಸಭೆಯಲ್ಲಿ ನಿರ್ಣಯಿಸಿದೆ ಎಂದು ವರದಿಯಾಗಿದೆ. [ https://science.thewire.in/health/no-blood-donation-for-28-days-after-last-jab-of-covid-19-vaccine-order/ ] ವಿಶ್ವದೆಲ್ಲೆಡೆ ಒಂದು ದಾರಿಯಾದರೆ ನಮ್ಮಲ್ಲಿ ಬೇರೆಯೇ ದಾರಿ ಎನ್ನುವುದಕ್ಕೆ ಇದು ಇನ್ನೊಂದು ನಿದರ್ಶನವಾಗಿದೆ. ಇದೇ ಮಂಡಳಿಯು ಕಳೆದ ವರ್ಷ ಕೊರೋನ ಸೋಂಕಿತರು ರಕ್ತದಾನ ಮಾಡುವ ಬಗ್ಗೆ ಕೈಗೊಂಡ ನಿರ್ಧಾರಗಳೂ ಟೀಕೆಗೊಳಗಾಗಿದ್ದವು. 

ಅಮೆರಿಕದ ರೆಡ್ ಕ್ರಾಸ್ ಸಂಸ್ಥೆಯನುಸಾರ ಅಮೆರಿಕದಲ್ಲಿ ನೀಡಲಾಗುತ್ತಿರುವ ಎಂಆರ್‌ಎನ್‌ಎ ಲಸಿಕೆ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಹಾಗೂ ಅಸ್ತ್ರ ಜೆನೆಕ (ಭಾರತದಲ್ಲಿ ಕೋವಿಶೀಲ್ಡ್) ಲಸಿಕೆಗಳನ್ನು ಪಡೆದ ಮೇಲೆ ರಕ್ತದಾನ ಮಾಡುವುದಕ್ಕೆ ಯಾವ ಕಾಯುವಿಕೆಯೂ ಅಗತ್ಯವಿಲ್ಲ, ಆದರೆ ಯಾವ ಲಸಿಕೆ ಎಂಬ ವಿವರವು ಲಭ್ಯವಿಲ್ಲದಿದ್ದರೆ ಎರಡು ವಾರ ಕಾಯಬೇಕು ಎಂದು ಹೇಳಲಾಗಿದೆ.

[ https://www.redcross.org/about-us/news-and-events/news/2021/what-you-need-to-know-about-covid-19-vaccines-and-blood-donation.html, https://www.live5news.com/2021/03/28/fact-or-fiction-blood-donations-after-getting-your-covid-vaccine/ ] 

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳನುಸಾರ, ಯಾವುದೇ ಲಸಿಕೆಯನ್ನು ಪಡೆದವರು 7 ದಿನಗಳ ನಂತರ, ಅಂದರೆ ಎಂಟನೇ ದಿನದಿಂದ, ರಕ್ತದಾನ ಮಾಡಬಹುದಾಗಿದೆ, ಅಡ್ಡ ಪರಿಣಾಮಗಳೇನಾದರೂ ಆಗಿದ್ದರೆ, ಅವು ಮರೆಯಾಗಿ ಒಂದು ವಾರದ ಬಳಿಕ ರಕ್ತದಾನ ಮಾಡಬಹುದಾಗಿದೆ. [ https://www.blood.co.uk/news-and-campaigns/news-and-statements/coronavirus-covid-19-updates/, https://www.transfusionguidelines.org/dsg/bm/guidelines/coronavirus-vaccination] 

ಅದೇ ಅಸ್ತ್ರ ಜೆನೆಕಾ ಲಸಿಕೆಯನ್ನು ಕೋವಿಶೀಲ್ಡ್ ಹೆಸರಲ್ಲಿ ಭಾರತದಲ್ಲಿ ನೀಡಲಾಗುತ್ತಿರುವುದರಿಂದ, ಇನ್ನೊಂದು ಲಸಿಕೆಯಾದ ಕೊವಾಕ್ಸಿನ್‌ನಲ್ಲೂ ಸಜೀವ ವೈರಸ್ ಕಣಗಳು ಇಲ್ಲದೇ ಇರುವುದರಿಂದ, ಇವೇ ನೀತಿಗಳನ್ನು ಇಲ್ಲೂ ಅಳವಡಿಸಿಕೊಳ್ಳಬಹುದಾಗಿದೆ. ಆದರೆ ನಮ್ಮ ರಾಷ್ಟ್ರೀಯ ರಕ್ತ ಪೂರಣ ಮಂಡಳಿಯ ಆದೇಶವು ಇದಕ್ಕಿಂತ ಭಿನ್ನವಾಗಿದ್ದು, ಅನಗತ್ಯವಾದ ಗೊಂದಲಗಳನ್ನು ಸೃಷ್ಟಿಸುವಂತಿದೆ. ಹೀಗೆ ಎಲ್ಲಾ ದಾನಿಗಳೂ ಲಸಿಕೆಗೆ ಮೊದಲು ರಕ್ತದಾನ ಮಾಡಿದರೂ ಕೂಡ ರಕ್ತ ಮತ್ತದರ ಕಣಗಳನ್ನು 35-42 ದಿನಗಳಿಗಿಂತ ಹೆಚ್ಚು ಕಾಲ ಸಂರಕ್ಷಿಸಿಡಲು ಸಾಧ್ಯವಿಲ್ಲದಿರುವುದರಿಂದ ಅವು ವ್ಯರ್ಥಗೊಳ್ಳುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ, ರಾಷ್ಟ್ರೀಯ ರಕ್ತ ಪೂರಣ ಮಂಡಳಿಯ ಆದೇಶವನ್ನು ಬದಲಿಸಿ, ಅಮೆರಿಕದ ರೆಡ್ ಕ್ರಾಸ್ ಮತ್ತು ಬ್ರಿಟಿಷ್ ಆರೋಗ್ಯ ಸೇವೆಗಳು ಅನುಸರಿಸುವ ಕ್ರಮವನ್ನೇ ಇಲ್ಲೂ ಅಳವಡಿಸಿಕೊಳ್ಳುವುದು ಒಳ್ಳೆಯದು.

-ಡಾ. ಶ್ರೀನಿವಾಸ ಕಕ್ಕಿಲ್ಲಾಯ 

ಕೊರೋನ ಲಸಿಕೆ ಪಡೆದವರು 28 ದಿನ ರಕ್ತದಾನ ಮಾಡಬಾರದು, ಅಂದರೆ ಮೊದಲ ಡೋಸ್ ತೆಗೆದುಕೊಂಡ ನಂತರ ಎರಡರಿಂದ ಎರಡೂವರೆ ತಿಂಗಳು ರಕ್ತದಾನ ಮಾಡಲು...

Posted by Srinivas Kakkilaya on Saturday, 24 April 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X