ರಾಜ್ಯದಲ್ಲಿಂದು ಕೋವಿಡ್ ಗೆ 201 ಮಂದಿ ಬಲಿ: 29 ಸಾವಿರ ಪ್ರಕರಣಗಳು ಪಾಸಿಟಿವ್

ಬೆಂಗಳೂರು, ಎ.26: ರಾಜ್ಯದಲ್ಲಿ ಸೋಮವಾರದಂದು 29,744 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 201 ಜನರು ಸೋಂಕಿಗೆ ಬಲಿಯಾಗಿದ್ದು, 6,982 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 13,68,945ಕ್ಕೆ ತಲುಪಿದ್ದು, 1,815 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 14,627ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 2,81,042ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
201 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 18, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 105, ಬೀದರ್ 4, ಚಾಮರಾಜನಗರ 3, ಚಿಕ್ಕಮಗಳೂರು 2, ಧಾರವಾಡ 5, ಹಾಸನ 10, ಹಾವೇರಿ 4, ಕಲಬುರಗಿ 7, ಕೋಲಾರ 5, ಮಂಡ್ಯ 9, ಮೈಸೂರು 7, ರಾಯಚೂರು 1, ರಾಮನಗರ 5, ಶಿವಮೊಗ್ಗ 1, ತುಮಕೂರು 4, ಉತ್ತರ ಕನ್ನಡ 3, ಯಾದಗಿರಿ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 29,744 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 418, ಬಳ್ಳಾರಿ 786, ಬೆಳಗಾವಿ 312, ಬೆಂಗಳೂರು ಗ್ರಾಮಾಂತರ 505, ಬೆಂಗಳೂರು ನಗರ 16,545, ಬೀದರ್ 452, ಚಾಮರಾಜನಗರ 267, ಚಿಕ್ಕಬಳ್ಳಾಪುರ 444, ಚಿಕ್ಕಮಗಳೂರು 403, ಚಿತ್ರದುರ್ಗ 104, ದಕ್ಷಿಣ ಕನ್ನಡ 295, ದಾವಣಗೆರೆ 105, ಧಾರವಾಡ 433, ಗದಗ 97, ಹಾಸನ 747, ಹಾವೇರಿ 78, ಕಲಬುರಗಿ 872, ಕೊಡಗು 311, ಕೋಲಾರ 421, ಕೊಪ್ಪಳ 282, ಮಂಡ್ಯ 929, ಮೈಸೂರು 1563, ರಾಯಚೂರು 609, ರಾಮನಗರ 168, ಶಿವಮೊಗ್ಗ 250, ತುಮಕೂರು 1197, ಉಡುಪಿ 412, ಉತ್ತರ ಕನ್ನಡ 190, ವಿಜಯಪುರ 385, ಯಾದಗಿರಿ ಜಿಲ್ಲೆಯಲ್ಲಿ 164 ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ 105 ಜನರು ಸಾವು
ರಾಜಧಾನಿಯಲ್ಲಿ ಸೋಮವಾರದಂದು 16,545 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 105 ಜನರು ಮೃತಪಟ್ಟಿದ್ದಾರೆ. 4,313 ಸೋಂಕಿತರು ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 6,70,201 ಕೊರೋನ ಸೋಂಕಿತರು ದೃಢಪಟ್ಟಿದ್ದು, 5,905 ಜನರು ಸೋಂಕಿಗೆ ಬಲಿಯಾಗಿದ್ದಾರೆ. 4,71,626 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.







