Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. #ResignModi ಹ್ಯಾಶ್ ಟ್ಯಾಗ್ ಬ್ಲಾಕ್...

#ResignModi ಹ್ಯಾಶ್ ಟ್ಯಾಗ್ ಬ್ಲಾಕ್ ಮಾಡಿ ಪೇಚಿಗೀಡಾದ ನಂತರ ಮರುಸ್ಥಾಪಿಸಿದ ಫೇಸ್ ಬುಕ್

ವಾರ್ತಾಭಾರತಿವಾರ್ತಾಭಾರತಿ29 April 2021 10:52 AM IST
share
#ResignModi ಹ್ಯಾಶ್ ಟ್ಯಾಗ್ ಬ್ಲಾಕ್ ಮಾಡಿ ಪೇಚಿಗೀಡಾದ  ನಂತರ ಮರುಸ್ಥಾಪಿಸಿದ ಫೇಸ್ ಬುಕ್

ಹೊಸದಿಲ್ಲಿ, ಎ.29: ಕೊರೋನ ಸೋಂಕನ್ನು ಭಾರತ ನಿರ್ವಹಿಸುತ್ತಿರುವುದನ್ನು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿರುವ #resignmodi ಹ್ಯಾಶ್ಟ್ಯಾಗ್ ಅನ್ನು ಬುಧವಾರ ರಾತ್ರಿ ಫೇಸ್ಬುಕ್ ತಾತ್ಕಾಲಿಕವಾಗಿ ಬ್ಲಾಕ್ ಮಾಡಿತ್ತು. ಈ ಬಗ್ಗೆ ಬಳಕೆದಾರರು ಟ್ವಿಟರ್ನಲ್ಲಿ ಗಮನ ಸೆಳೆದ ಬಳಿಕ ‘ಪ್ರಮಾದವಶಾತ್ ಹೀಗಾಗಿದೆ’ ಎಂದು ಸಮಜಾಯಿಷಿ ನೀಡಿ ಮರುಸ್ಥಾಪಿಸಿದೆ. ಭಾರತ ಸರಕಾರ ಹೇಳಿದೆ ಎಂದು ಬ್ಲಾಕ್ ಮಾಡಿಲ್ಲ, ಪ್ರಮಾದವಶಾತ್ ಹ್ಯಾಶ್ಟ್ಯಾಗ್ ಬ್ಲಾಕ್ ಆಗಿದೆ ಎಂದು ಫೇಸ್ಬುಕ್ ನ ವಕ್ತಾರರು ಹೇಳಿರುವುದಾಗಿ ‘ದಿ ಗಾರ್ಡಿಯನ್’ 
ವರದಿ ಮಾಡಿದೆ. 

ಈ ಹ್ಯಾಶ್ಟ್ಯಾಗ್ಗೆ ಬಳಕೆದಾರರು ಹುಡುಕಾಟ ನಡೆಸಿದಾಗ ಫೇಸ್ಬುಕ್ನಲ್ಲಿ ಪ್ರಕಟವಾದ ಸಂದೇಶದಲ್ಲಿ ‘ಈ ಪೋಸ್ಟ್ನಲ್ಲಿರುವ ಕೆಲವು ಅಂಶಗಳು ನಮ್ಮ ಸಮುದಾಯ ಮಾನದಂಡ’ಕ್ಕೆ ವಿರುದ್ಧವಾಗಿರುವ ಕಾರಣ ಅವರನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಬಳಕೆದಾರರು ಟ್ವಿಟರ್ನಲ್ಲಿ ಗಮನ ಸೆಳೆದಾಗ ‘ ಹ್ಯಾಶ್ಟ್ಯಾಗ್ ಅನ್ನು ಮರುಸ್ಥಾಪಿಸಲಾಗಿದೆ. ಏನಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಫೇಸ್ಬುಕ್ ಸಂವಹನ ನೀತಿ ನಿರ್ದೇಶಕ ಆ್ಯಂಡಿ ಸ್ಟೋನ್ ಟ್ವೀಟ್ ಮಾಡಿದ್ದಾರೆ.

#resignmodi ಹ್ಯಾಶ್ಟ್ಯಾಗ್ ಇರುವ ಪೋಸ್ಟ್ಗಳು ಮಾತ್ರ ಸ್ಥಗಿತವಾಗಿದೆ. ಬಳಕೆದಾರರು ಕಂಟೆಂಟ್ಗಳನ್ನು ಪೋಸ್ಟ್ ಮಾಡಬಹುದಾಗಿತ್ತು. ಭಾರತ, ಅಮೆರಿಕ, ಕೆನಡಾ, ಇಂಗ್ಲೆಂಡ್ನಲ್ಲಿ ಹ್ಯಾಶ್ಟ್ಯಾಗ್ ಬ್ಲಾಕ್ ಆಗಿತ್ತು ಎಂದು ವರದಿ ಹೇಳಿದೆ. ದೇಶದಲ್ಲಿ ಈಗ ಕೊರೋನ ಸೋಂಕಿನ ಎರಡನೇ ಅಲೆ ಉಲ್ಬಣಾವಸ್ಥೆಗೆ ತಲುಪಿದ್ದು ಸೋಂಕು ಪ್ರಕರಣ ಅಪಾಯಕಾರಿ ಮಟ್ಟಕ್ಕೇರಿದೆ. ಸತತ 7ನೇ ದಿನ 3 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣ ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,79,97,267ಕ್ಕೇರಿದೆ.

ಸೋಂಕಿನ ಸಮಸ್ಯೆಯನ್ನು ಸರಕಾರ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸುತ್ತಿದ್ದು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ಹ್ಯಾಶ್ಟ್ಯಾಗ್ ಬಳಸಿ ಆಗ್ರಹಿಸುತ್ತಿದ್ದಾರೆ.
 
ಫೇಸ್ಬುಕ್ನ ಕಾರ್ಯನಿರ್ವಹಣೆ ಈ ಹಿಂದೆಯೂ ವ್ಯಾಪಕ ಟೀಕೆಗೆ ಒಳಗಾದ ಉದಾಹರಣೆಗಳಿವೆ. ಆಗಸ್ಟ್ 14ರಂದು ವಾಲ್ಸ್ಟ್ರೀಟ್ ಜರ್ನಲ್ ಮಾಧ್ಯಮದಲ್ಲಿ ಪ್ರಕಟವಾದ ವರದಿಯಲ್ಲಿ ‘ 2014ರ ಲೋಕಸಭಾ ಚುನಾವಣೆ ಸಂದರ್ಭ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಮುಖಂಡರ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಫೇಸ್ಬುಕ್ ಕ್ರಮ ಕೈಗೊಂಡಿಲ್ಲ. ಹೀಗೆ ಮಾಡಿದರೆ ಫೇಸ್ಬುಕ್ನ ವಾಣಿಜ್ಯ ಹಿತಾಸಕ್ತಿಗೆ ತೊಂದರೆಯಾಗಬಹುದು ಎಂದು ಫೇಸ್ಬುಕ್ನ ಭಾರತದ ಅಧಿಕಾರಿಯಾಗಿದ್ದ ಆಂಖಿ ದಾಸ್ ಎಚ್ಚರಿಸಿದ್ದರು’ 
ಎಂದು ಪ್ರಕಟವಾಗಿತ್ತು. 

ಕಳೆದ ವಾರ, ಕೊರೋನ ಸೋಂಕಿನ ದ್ವಿತೀಯ ಅಲೆಯನ್ನು ಭಾರತ ಸರಕಾರ ನಿರ್ವಹಿಸುವುದನ್ನು ಟೀಕಿಸಿದ್ದ 52 ಟ್ವೀಟ್ಗಳನ್ನು ಕೇಂದ್ರ ಸರಕಾರದ ಕೋರಿಕೆಯಂತೆ ಫೇಸ್ಬುಕ್ ಡಿಲೀಟ್ ಮಾಡಿತ್ತು. ಕಳೆದ ಫೆಬ್ರವರಿಯಲ್ಲಿ, ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರ ಪ್ರತಿಭಟನೆ ಉತ್ತುಂಗ ಸ್ಥಿತಿಯಲ್ಲಿದ್ದ ಸಮಯದಲ್ಲಿ ‘ಕಾರವಾನ್ ಮಾಧ್ಯಮ, ಕಿಸಾನ್ ಏಕತಾ ಮೋರ್ಛಾ’ದ ಸಹಿತ ಹಲವು ಬಳಕೆದಾರರ ಖಾತೆಗಳನ್ನು ಟ್ವಿಟರ್ ಸ್ಥಗಿತಗೊಳಿಸಿತ್ತು. ಕಾನೂನಿನ ಆಗ್ರಹದಂತೆ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದ ಟ್ವಿಟರ್ ಬಳಿಕ ಈ ಖಾತೆಗಳನ್ನು ಮರುಸ್ಥಾಪಿಸಿತ್ತು. 

ಕೇಂದ್ರದ ಸ್ಪಷ್ಟನೆ
#resignmodi ಹ್ಯಾಶ್ಟ್ಯಾಗ್ ಅನ್ನು ಬ್ಲಾಕ್ ಮಾಡಿರುವುದು ಸಾರ್ವಜನಿಕರ ಧ್ವನಿಯನ್ನು ಅಡಗಿಸುವ ಕೇಂದ್ರ ಸರಕಾರದ ಉಪಕ್ರಮವಾಗಿದೆ ಎಂಬ ಅಮೆರಿಕಾ ದಿನಪತ್ರಿಕೆಯ ವರದಿಯನ್ನು ಭಾರತ ನಿರಾಕರಿಸಿದೆ. ಇದು ತಪ್ಪು ಅಭಿಪ್ರಾಯ ಮೂಡಿಸುವ ಉದ್ದೇಶದ ವರದಿಯಾಗಿದೆ. ಹ್ಯಾಶ್ಟ್ಯಾಗ್ ಬ್ಲಾಕ್ ಮಾಡುವಂತೆ ಕೇಂದ್ರ ಸರಕಾರ ಕೋರಿಲ್ಲ. ದುರುದ್ದೇಶದ ವರದಿ ಇದಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. 

ವಾಲ್ ಸ್ಟ್ರೀಟ್ ಜರ್ನಲ್ ನ ವರದಿ ದುರುದ್ದೇಶಪೂರಿತ ಮತ್ತು ದಾರಿ ತಪ್ಪಿಸುವ ವಿಷಯವನ್ನು ಒಳಗೊಂಡಿದೆ. ಹ್ಯಾಶ್ಟ್ಯಾಗ್ ಬ್ಲಾಕ್ ಮಾಡುವಂತೆ ಭಾರತ ಸರಕಾರ ವಿನಂತಿಸಿಲ್ಲ ಮತ್ತು ಇದು ಪ್ರಮಾದವಶಾತ್ ಆದ ಘಟನೆ ಎಂದು ಫೇಸ್ಬುಕ್ ಕೂಡಾ ಸ್ಪಷ್ಟನೆ ನೀಡಿದೆ. 2021ರ ಮಾರ್ಚ್ 5ರಂದು ಕೂಡಾ ವಾಲ್ ಸ್ಟ್ರೀಟ್ ಜರ್ನಲ್ ‘ಭಾರತವು ಫೇಸ್ಬುಕ್, ವಾಟ್ಸ್ಯಾಪ್ ಮತ್ತು ಟ್ವಿಟರ್ ಉದ್ಯೋಗಿಗಳನ್ನು ಬಂಧಿಸುವುದಾಗಿ ಬೆದರಿಸಿದೆ’ ಎಂಬ ಸುಳ್ಳು ವರದಿ ಪ್ರಕಟಿಸಿತ್ತು. ಈ ಸುಳ್ಳು ಮತ್ತು ಕಪೋಲಕಲ್ಪಿತ ಸುದ್ಧಿಯ ಹಿನ್ನೆಲೆಯಲ್ಲಿ ಸರಕಾರ ಅಧಿಕೃತ ಖಂಡನೆ ರವಾನಿಸಿತ್ತು ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟ್ವೀಟ್ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X