Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಡಿಕೇರಿ ನಗರಸಭೆ ಬಿಜೆಪಿ ಪಾಲು:...

ಮಡಿಕೇರಿ ನಗರಸಭೆ ಬಿಜೆಪಿ ಪಾಲು: ಎಸ್‍ಡಿಪಿಐ ಪ್ರಮುಖ ವಿರೋಧ ಪಕ್ಷ, ಕಾಂಗ್ರೆಸ್ ಗೆ ಮುಖಭಂಗ

ವಾರ್ತಾಭಾರತಿವಾರ್ತಾಭಾರತಿ30 April 2021 12:06 PM IST
share
ಮಡಿಕೇರಿ ನಗರಸಭೆ ಬಿಜೆಪಿ ಪಾಲು: ಎಸ್‍ಡಿಪಿಐ ಪ್ರಮುಖ ವಿರೋಧ ಪಕ್ಷ, ಕಾಂಗ್ರೆಸ್ ಗೆ ಮುಖಭಂಗ

ಮಡಿಕೇರಿ, ಎ.30: ಮಡಿಕೇರಿ ನಗರಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 23 ವಾರ್ಡ್ ಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಪಡೆದಿದೆ. ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಜೆಡಿಎಸ್ ಕೂಡ ಒಂದು ಸ್ಥಾನ ಗಳಿಸಿದೆ.  
ವಾರ್ಡ್ ಸಂಖ್ಯೆ 1 ಚಿತ್ರಾವತಿ(ಬಿಜೆಪಿ), ವಾರ್ಡ್ ಸಂಖ್ಯೆ 2 ಮಹೇಶ್ ಜೈನಿ (ಬಿಜೆಪಿ), ವಾರ್ಡ್ ಸಂಖ್ಯೆ 3 ಮೇರಿ ವೇಗಸ್ (ಎಸ್‍ಡಿಪಿಐ ), ವಾರ್ಡ್ ಸಂಖ್ಯೆ 4 ಮನ್ಸೂರ್ ಆಲಿ (ಎಸ್‍ಡಿಪಿಐ), ವಾರ್ಡ್ ಸಂಖ್ಯೆ 5 ಎಸ್.ಸಿ.ಸತೀಶ್ (ಬಿಜೆಪಿ), ವಾರ್ಡ್ ಸಂಖ್ಯೆ 6 ಕೆ ಎಸ್ ರಮೇಶ್ (ಬಿಜೆಪಿ), ವಾರ್ಡ್ ಸಂಖ್ಯೆ7 ಅಮಿನ್ ಮೊಯಿಸಿನ್ (ಎಸ್‍ಡಿಪಿಐ )

ವಾರ್ಡ್ ಸಂಖ್ಯೆ 8 ಸವಿತಾ ರಾಕೇಶ್ (ಬಿಜೆಪಿ), ವಾರ್ಡ್ ಸಂಖ್ಯೆ 9 ಕಲಾವತಿ (ಬಿಜೆಪಿ), ವಾರ್ಡ್ ಸಂಖ್ಯೆ 10 ಮುಸ್ತಾಫಾ (ಜೆಡಿಎಸ್ ), ವಾರ್ಡ್ ಸಂಖ್ಯೆ 11 ನೀಮಾ ಅರ್ಷದ್ (ಎಸ್‍ಡಿಪಿಐ ), ವಾರ್ಡ್ ಸಂಖ್ಯೆ 12 ಬಷೀರ್ (ಎಸ್‍ಡಿಪಿಐ )

ವಾರ್ಡ್ ಸಂಖ್ಯೆ 13 ಮಂಜುಳಾ (ಬಿಜೆಪಿ), ವಾರ್ಡ್ ಸಂಖ್ಯೆ 14 ಉಷಾಕುಮಾರಿ ( ಬಿಜೆಪಿ ), ವಾರ್ಡ್ ಸಂಖ್ಯೆ 15 ಚಂದ್ರಶೇಖರ್ (ಬಿಜೆಪಿ ), ವಾರ್ಡ್ ಸಂಖ್ಯೆ 16 ರಾಜೇಶ್ ಯೆಲ್ಲಪ್ಪ (ಕಾಂಗ್ರೆಸ್ ), ವಾರ್ಡ್ ಸಂಖ್ಯೆ 17 ಅರುಣ್ ಶೆಟ್ಟಿ (ಬಿಜೆಪಿ ), ವಾರ್ಡ್ ಸಂಖ್ಯೆ 18 ಉಮೇಶ್ ಸುಬ್ರಮಣಿ (ಬಿಜೆಪಿ), ವಾರ್ಡ್ ಸಂಖ್ಯೆ 19 ಕೆ.ಎಂ.ಅಪ್ಪಣ್ಣ (ಬಿಜೆಪಿ), ವಾರ್ಡ್ ಸಂಖ್ಯೆ 20 ಅನಿತಾ ಪೂವಯ್ಯ (ಬಿಜೆಪಿ), ವಾರ್ಡ್ ಸಂಖ್ಯೆ 21 ಶ್ವೇತಾ ಪ್ರಶಾಂತ್ (ಬಿಜೆಪಿ), ವಾರ್ಡ್ ಸಂಖ್ಯೆ 22 ಸಬಿತಾ (ಬಿಜೆಪಿ), ವಾರ್ಡ್ ಸಂಖ್ಯೆ 23 ಶಾರದಾ ನಾಗರಾಜ್ (ಬಿಜೆಪಿ) ಗೆಲವು ಸಾಧಿಸಿದ್ದಾರೆ.

ಸೋತ ಪ್ರಮುಖರು
ಮಡಿಕೇರಿ ನಗರಸಭೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಮುಖರು ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‍ನಿಂದ ನಗರಸಭೆಯ ಮಾಜಿ ಅಧ್ಯಕ್ಷರುಗಳಾದ ಹೆಚ್.ಎಂ.ನಂದಕುಮಾರ್, ಜುಲೇಕಾಬಿ, ಕಾವೇರಮ್ಮ ಸೋಮಣ್ಣ, ಮಾಜಿ ಸದಸ್ಯರಾದ ಕೆ.ಯು.ಅಬ್ದುಲ್ ರಜಾಕ್, ಎ.ಸಿ.ದೇವಯ್ಯ, ಪ್ರಕಾಶ್ ಆಚಾರ್ಯ, ಟಿ.ಎಂ.ಅಯ್ಯಪ್ಪ, ಮುನೀರ್ ಅಹಮ್ಮದ್, ಮಾಜಿ ಸದಸ್ಯ ಪಕ್ಷೇತರ ಅಭ್ಯರ್ಥಿ ಕೆ.ಜಿ.ಪೀಟರ್, ಕೆ.ಟಿ.ಬೇಬಿಮ್ಯಾಥ್ಯು ಸೋಲು ಅನುಭವಿಸಿದ್ದಾರೆ. 

ಗೆದ್ದವರು
ಬಿಜೆಪಿಯಿಂದ ಮಾಜಿ ಸದಸ್ಯರಾದ ಕೆ.ಎಸ್.ರಮೇಶ್, ಅನಿತಾಪೂವಯ್ಯ, ಎಸ್‍ಡಿಪಿಐ ಯಿಂದ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸದಸ್ಯ ಎಂ.ಕೆ.ಮನ್ಸೂರ್, ಅಮಿನ್ ಮೊಹಿಸಿನ್ ಗೆಲುವು ಸಾಧಿಸಿದ್ದಾರೆ.

ಪಡೆದ ಮತಗಳು
ಮಡಿಕೇರಿ ನಗರಸಭೆ ಚುನಾವಣೆಯ ಫಲಿತಾಂಶ ಸಂಬಂಧ ವಾರ್ಡ್ ಗಳ ಸಂಖ್ಯೆ, ಅಭ್ಯರ್ಥಿಗಳು ಪ್ರತಿನಿಧಿಸಿದ ಪಕ್ಷದ ಹೆಸರು ಮತ್ತು ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆಯ ಮಾಹಿತಿಯ ವಿವರ ಇಂತಿದೆ.  

ವಾರ್ಡ್ ನಂ 1 ರಿಂದ ಅನಿತಾ ಕೆ.ಕೆ(ಜೆಡಿಎಸ್) 104, ಬಿ.ಪಿ.ಚಿತ್ರಾವತಿ (ಬಿಜೆಪಿ) 336, ಪ್ರೇಮ ಎನ್(ಕಾಂಗ್ರೆಸ್) 80, ಅನಿತಾ ಬಿ.ಡಿ (ಪಕ್ಷೇತರ) 240 ಮತಗಳನ್ನು ಪಡೆದಿದ್ದಾರೆ. ನೋಟಾಗೆ 20 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 2 ರಿಂದ ಅಂಬೆಕಲ್ ನವೀನ್ (ಕಾಂಗ್ರೆಸ್) 67, ಮಹೇಶ್ ಜೈನಿ(ಬಿಜೆಪಿ) 375, ಲೀಲಾ ಶೇಷಮ್ಮ (ಜೆಡಿಎಸ್) 43, ತನುಜಾವತಿ ಎಚ್.ಎಚ್.(ಪಕ್ಷೇತರ) 53, ಕೆ.ಎಂ.ಚೇತನ (ಪಕ್ಷೇತರ) 26, ಮನೋಹರ ಎಂ.ಕೆ.(ಪಕ್ಷೇತರ) 4,  ಮೋಹನ್ ವಿ.ಜಿ. (ಪಕ್ಷೇತರ) 50, ಬಿಎಂ.ಯಲ್ಲಪ್ಪ (ಪಕ್ಷೇತರ) 4, ಲಿಂಗರಾಜು ಡಿ.ಎನ್ (ಪಕ್ಷೇತರ) 36, ಎನ್.ಎ.ಸತೀಶ್ ಪೈ (ಪಕ್ಷೇತರ)  3, ಸತೀಶ್ ರೈ ಪಿ.ಕೆ (ಪಕ್ಷೇತರ) 57 ಮತಗಳನ್ನು ಪಡೆದಿದ್ದಾರೆ. ನೋಟಾಗೆ 3 ಮತಗಳು ಚಲಾವಣೆಯಾಗಿವೆ. 

ವಾರ್ಡ್ ನಂ 3 ರಿಂದ ಟಿ.ಕೆ.ಕವಿತ (ಬಿಜೆಪಿ) 100, ಕೆ.ಎಕ್ಸ್ ಸಾಲಿ (ಕಾಂಗ್ರೆಸ್) 75, ಮೇರಿ ವೇಗಸ್ (ಎಸ್‍ಡಿಪಿಐ) 676 ಮತಗಳನ್ನು ಪಡೆದಿದ್ದಾರೆ. ನೋಟಾಗೆ 3 ಮತಗಳು ಚಲಾವಣೆಯಾಗಿವೆ. 

ವಾರ್ಡ್ ನಂ 4 ರಿಂದ ಎಂ.ಯು ಖಲೀಲ್ ಬಾದಷಾ(ಜೆಡಿಎಸ್) 15, ದೀಪು ಎಚ್.ಕೆ (ಬಿಜೆಪಿ) 274, ಮಹಮ್ಮದ್ ಯೂಸುಫ್ (ಕಾಂಗ್ರೆಸ್) 43, ಮನ್ಸೂರ್ ಆಲಿ ಎಂ.ಕೆ (ಎಸ್‍ಡಿಪಿಐ) 701, ಎಂ.ಎ.ಮುಹಮದ್ ಫಯಾಜ್ (ಪಕ್ಷೇತರ) 20 ಮತಗಳನ್ನು ಪಡೆದಿದ್ದಾರೆ. ನೋಟಾಗೆ 5 ಮತಗಳು ಚಲಾವಣೆಯಾಗಿವೆ. 

ವಾರ್ಡ್ ನಂ 5 ರಿಂದ ಎಚ್.ಎಂ.ನಂದಕುಮಾರ್ (ಕಾಂಗ್ರೆಸ್) 213, ರವಿಕುಮಾರ್ ಎಚ್.ಎ (ಜೆಡಿಎಸ್) 13, ಸತೀಶ್ ಎಸ್.ಸಿ (ಬಿಜೆಪಿ) 334 ಮತಗಳನ್ನು ಪಡೆದಿದ್ದಾರೆ. ನೋಟಾಗೆ 2 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 6 ರಿಂದ ಎಂ.ಖಲೀಲ್ (ಜೆಡಿಎಸ್) 9, ಎ.ಜಿ.ರಮೇಶ್ (ಕಾಂಗ್ರೆಸ್) 28, ಕೆ.ಎಸ್.ರಮೇಶ್ (ಬಿಜೆಪಿ) 540, ಮಹೇಶ್ ಆರ್ ಮಹೇಶ್ ಕುಮಾರ್ (ಪಕ್ಷೇತರ) 374 ಮತಗಳನ್ನು ಪಡೆದಿದ್ದಾರೆ. ನೋಟಾಗೆ 11 ಮತಗಳು ಚಲಾವಣೆಗೊಂಡಿವೆ.

ವಾರ್ಡ್ ನಂ 7 ರಿಂದ ಎಂ.ಆರ್.ಜನಾರ್ದನ (ಜೆಡಿಎಸ್) 20, ಪ್ರಭು ರೈ (ಪ್ರಭಾಕರ) (ಕಾಂಗ್ರೆಸ್) 97, ರೋಶನ್ ಬಿ.ವಿ. (ಅಣ್ಣು) (ಬಿಜೆಪಿ) 210, ಅಮಿನ್ ಮೊಹಿಸಿನ್ (ಎಸ್‍ಡಿಪಿಐ) 382 ಮತಗಳನ್ನು ಪಡೆದಿದ್ದಾರೆ. ನೋಟಾಗೆ 8 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 8 ರಿಂದ ಆಯಿಷಾ ಹಮೀದ್ (ಜೆಡಿಎಸ್) 40, ಎಂ.ಮಮ್ತಾಜ್ ಬೇಗಂ (ಕಾಂಗ್ರೆಸ್) 49, ಸವಿತಾ ರಾಕೇಶ್ (ಬಿಜೆಪಿ) 286, ನಫೀಸಾ ಅಕ್ಬರ್ (ಪಕ್ಷೇತರ) 100, ಭಾರತಿ ರಮೇಶ್ (ಪಕ್ಷೇತರ) 64 ಮತಗಳನ್ನು ಪಡೆದಿದ್ದಾರೆ. ನೋಟಾಗೆ 7 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 9 ರಿಂದ ಕಲಾವತಿ(ಬಿಜೆಪಿ) 299, ಶಶಿ (ಕಾಂಗ್ರೆಸ್) 48, ಸಲ್ಮಾ ಖಾನಂ ಎಂ.ಈ (ಜೆಡಿಎಸ್) 283, ರಜೀಯಾ ಎಂ.ಬಿ (ಪಕ್ಷೇತರ) 216 ಮತಗಳನ್ನು ಪಡೆದಿದ್ದಾರೆ. ನೋಟಾಗೆ 9 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 10 ರಿಂದ ಅಬ್ದುಲ್ ರಜಾಕ್ (ಕಾಂಗ್ರೆಸ್) 36, ಬಿ.ಕೆ.ಜಗದೀಶ್ (ಬಿಜೆಪಿ) 142, ಮುಸ್ತು (ಜೆಡಿಎಸ್) 251, ಅಬ್ದುಲ್ ಸತ್ತಾರ್ (ಪಕ್ಷೇತರ) 57, ಕೆ.ಜಿ.ಪೀಟರ್ (ಪಕ್ಷೇತರ) 53, ಎಂ.ಎಂ.ಲಿಯಾಕತ್ ಅಲಿ (ಪಕ್ಷೇತರ) 20, ಸುಕುಮಾರ್ ಪಿ.ಜಿ. (ಪಕ್ಷೇತರ) 80 ಮತ ಪಡೆದಿದ್ದಾರೆ. ನೋಟಾಗೆ ಮತ ಚಲಾವಣೆಗೊಂಡಿಲ್ಲ.

ವಾರ್ಡ್ ನಂ.11 ರಿಂದ ಫರ್ಝಾನ (ಕಾಂಗೆಸ್) 82, ಕೆ.ಎಸ್.ರಾಜೇಶ್ವರಿ (ಜೆಡಿಎಸ್) 34, ಇಗ್ಗುಡ ಶಿವಕುಮಾರಿ ಗಣಪತಿ (ಬಿಜೆಪಿ) 97, ನೀಮಾ ಅರ್ಷದ್ (ಎಸ್‍ಡಿಪಿಐ) 125, ಫಾತಿಮಾ ಸಿ.ಎ (ಆಮ್ ಆದ್ಮಿ) 6, ತಜಸುಂ (ಪಕ್ಷೇತರ) 51 ಮತಗಳನ್ನು ಪಡೆದಿದ್ದಾರೆ. ನೋಟಾಗೆ 6 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ.12 ರಿಂದ ನಿಸಾರ್ ಅಹಮದ್ (ಜೆಡಿಎಸ್) 54, ಮುನೀರ್ ಅಹ್ಮದ್ (ಕಾಂಗ್ರೆಸ್) 115, ಬಿ.ಎಂ.ರಾಜೇಶ್(ರಾಜು) (ಬಿಜೆಪಿ) 141, ಎಂ.ಎಂ.ಕಲಂದರ್ ಬಾಷಾ (ಆಮ್ ಆದ್ಮಿ) 2, ಬಶೀರ್ ಅಹಮ್ಮದ್ (ಎಸ್‍ಡಿಪಿಐ) 239 ಮತಗಳನ್ನು ಪಡೆದಿದ್ದಾರೆ. ನೋಟಾಗೆ 1 ಮತ ಚಲಾವಣೆಗೊಂಡಿದೆ. 

ವಾರ್ಡ್ ನಂ 13 ರಿಂದ ಕವಿತಾ ರಾಮಚಂದ್ರ (ಜೆಡಿಎಸ್) 29, ಕಾವೇರಮ್ಮ ಸೋಮಣ್ಣ (ಕಾಂಗ್ರೆಸ್) 209, ಮಂಜುಳ ಸಿ.ಕೆ (ಬಿಜೆಪಿ) 367, ಡಿ.ಆರ್.ಮೇರಿ (ಪಕ್ಷೇತರ) 11 ಮತಗಳನ್ನು ಪಡೆದಿದ್ದಾರೆ. ನೋಟಾಗೆ 8 ಮತಗಳು ಚಾಲಾವಣೆಗೊಂಡಿವೆ. 

ವಾರ್ಡ್ ನಂ 14 ರಿಂದ ಉಷಾ ಕೆ (ಬಿಜೆಪಿ) 463, ಕುಸುಮಾ ಡಿ.ಕೆ (ಕಾಂಗ್ರೆಸ್) 77, ಮೀನಾಕ್ಷಿ ಗಣೇಶ್ (ಜೆಡಿಎಸ್) 51 ಮತಗಳನ್ನು ಪಡೆದಿದ್ದಾರೆ. ನೋಟಾಗೆ 9 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 15 ರಿಂದ ಪಿ.ಚಂದ್ರಶೇಖರ (ಬಿಜೆಪಿ) 486, ವನಿತ (ವಾಣಿ) (ಜೆಡಿಎಸ್) 106, ಸ್ವರ್ಣಲತಾ ಚಂಗಪ್ಪ (ಕಾಂಗ್ರೆಸ್) 58 ಮತ ಪಡೆದಿದ್ದಾರೆ. ನೋಟಾಗೆ 15 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 16 ರಿಂದ ಕಾವೇರಪ್ಪ ಪಿ.ಯು(ಕವನ್) (ಬಿಜೆಪಿ) 352, ಕೆ.ಇ.ಮ್ಯಾಥ್ಯೂ (ಜೆಡಿಎಸ್) 36, ಬಿ.ರಾಜೇಶ್ ಯಲ್ಲಪ್ಪ (ಕಾಂಗ್ರೆಸ್) 381 ಮತಗಳನ್ನು ಪಡೆದಿದ್ದಾರೆ. ನೋಟಾಗೆ 7 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ 17 ರಿಂದ ಕೆ.ಕೆ.ಅಜಿತ್ ಕುಮಾರ್ (ಜೆಡಿಎಸ್) 3, ಅರುಣ್ ಶೆಟ್ಟಿ (ಬಿಜೆಪಿ) 274, ಎ.ಸಿ.ದೇವಯ್ಯ(ಚುಮ್ಮಿ) (ಕಾಂಗ್ರೆಸ್) 66, ಎಂ.ಕೆ.ಅಪ್ಪಯ್ಯ (ಆಮ್ ಆದ್ಮಿ) 2, ಕೆ.ಟಿ.ಬೇಬಿ ಮ್ಯಾಥ್ಯೂ (ಪಕ್ಷೇತರ) 19, ಶರತ್ ಸಿ.ಎ (ಪಕ್ಷೇತರ) 53, ನೋಟಾಗೆ 1 ಮತ ಚಲಾವಣೆಗೊಂಡಿದೆ. 

ವಾರ್ಡ್ ನಂ 18 ರಿಂದ ಎ.ಎಸ್.ಪ್ರಕಾಶ್ ಆಚಾರ್ಯ (ಕಾಂಗ್ರೆಸ್) 204, ಎನ್.ಸಿ ಸುನಿಲ್ (ಜೆಡಿಎಸ್) 69, ಉಮೇಶ್ ಸುಬ್ರಮಣಿ (ಬಿಜೆಪಿ) 359, ಎಂ.ಎಸ್.ಸುರೇಶ್ (ಪಕ್ಷೇತರ) 17 ಮತ ಪಡೆದಿದ್ದಾರೆ. ನೋಟಾಗೆ 3 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 19 ರಿಂದ ಅಪ್ಪಣ್ಣ ಕೆ.ಎಂ.(ಬಿಜೆಪಿ) 340, ಅಯ್ಯಪ್ಪ ಟಿ.ಎಂ.(ಕಾಂಗ್ರೆಸ್) 176, (ಮನು) ರಾಜೀವ್ ಕುಮಾರ್ ಕೆ.ಕೆ (ಜೆಡಿಎಸ್) 87, ಪೃಥ್ವಿ ಎಚ್.ಬಿ.(ಆಮ್ ಆದ್ಮಿ) 2, ಸುನಿಲ್ ನಂಜಪ್ಪ (ಪಕ್ಷೇತರ) 78, ಕೆ.ವಿ.ಮಣಿ (ಪಕ್ಷೇತರ) 28 ಮತ ಪಡೆದಿದ್ದಾರೆ. ನೋಟಾಗೆ 5 ಚಲಾವಣೆಗೊಂಡಿವೆ. 
ವಾರ್ಡ್ ನಂ 20 ರಿಂದ ಅನಿತಾ ಪೂವಯ್ಯ (ಬಿಜೆಪಿ) 330, ಬಿ.ಯು.ರಶ್ಮಿ (ಜೆಡಿಎಸ್) 78, ಎಚ್.ಯು.ಲಿಲ್ಲಿ (ಕಾಂಗ್ರೆಸ್) 248, ಲಕ್ಷ್ಮಿ (ಪಕ್ಷೇತರ) 110 ಮತ ಪಡೆದಿದ್ದಾರೆ. ನೋಟಾಗೆ 15 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 21 ರಿಂದ ಜುಲೇಕಾಬಿ ಎಂ.ಯು (ಕಾಂಗ್ರೆಸ್) 123, ಪ್ರತ್ಯೂಷ ಬಿ.ಎಸ್ (ಜೆಡಿಎಸ್) 127, ಶ್ವೇತ ಪ್ರಶಾಂತ್ (ಬಿಜೆಪಿ) 195, ಚಿತ್ರಾವತಿ ಪಿ.ಎಲ್ (ಪಕ್ಷೇತರ) 160, ದೀಕ್ಷಾ (ಪಕ್ಷೇತರ) 18 ಮತ ಪಡೆದಿದ್ದಾರೆ. ನೋಟಾಗೆ 9 ಮತಗಳು ಚಲಾವಣೆಗೊಂಡಿವೆ.

ವಾರ್ಡ್ ನಂ 22 ರಿಂದ ಬಬಿತ ಸತೀಶ್ (ಜೆಡಿಎಸ್) 84, ಮೀನಾ ಪ್ರವೀಣ್ (ಪಮ್ಮಿ) (ಕಾಂಗ್ರೆಸ್) 335, ಸಬೀತ (ಬಿಜೆಪಿ) 364, ಆಶಾಲತ ಧರ್ಮಪಾಲ್ (ಪ್ರಭು) (ಪಕ್ಷೇತರ) 58, ಬೆನೆಡಿಕ್ಟ ಲೋಬೋ (ಪಕ್ಷೇತರ) 61 ಮತ ಪಡೆದಿದ್ದಾರೆ. ನೋಟಾಗೆ 18 ಮತಗಳು ಚಲಾವಣೆಗೊಂಡಿವೆ. 

ವಾರ್ಡ್ ನಂ 23 ರಿಂದ ಪ್ರತಿಮ ಎಚ್.ಡಿ.(ಜೆಡಿಎಸ್) 16, ಎಚ್.ಎನ್.ಶಾರದ (ಬಿಜೆಪಿ) 260, ಶಿಲ್ಪ ರಾಣಿ ಜಿ.ಎಸ್. (ಕಾಂಗ್ರೆಸ್) 199, ಎಚ್.ಕೆ.ಪ್ರೇಮ (ಪಕ್ಷೇತರ) 34 ಮತ ಪಡೆದಿದ್ದಾರೆ. ಹಾಗೂ ನೋಟಾಗೆ 5 ಮತಗಳು ಚಲಾವಣೆಗೊಂಡಿವೆ. 

ಈ ಸಂದರ್ಭದಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜನಪರ ಕಾಳಜಿ ಗಮನಿಸಿ ನಗರದ ಜನತೆ ಉತ್ತಮ ಫಲಿತಾಂಶ ನೀಡಿದ್ದಾರೆ. ನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದರು. 

ನಗರಸಭೆ ಚುನಾವಣೆಯ ಮತ ಎಣಿಕೆಯು ನಗರದ ಸಂತ ಜೋಸೆಫರ ಶಾಲೆಯಲ್ಲಿ ಶುಕ್ರವಾರ ವ್ಯವಸ್ಥಿತವಾಗಿ ನಡೆಯಿತು. ಚುನಾವಣಾ ವೀಕ್ಷಕರಾದ ಸಿ.ರಾಜು, ಚುನಾವಣಾಧಿಕಾರಿಗಳಾದ ಡಾ.ನಂಜುಂಡೇಗೌಡ, ಸಲೀಂ, ಶಶಿಧರ, ಹಾಗೂ ತಹಶೀಲ್ದಾರ್ ಮಹೇಶ್, ಡಿವೈಎಸ್‍ಪಿ ದಿನೇಶ್ ಕುಮಾರ್, ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ಮತ ಎಣಿಕೆಯು ಶಾಂತಿಯುತವಾಗಿ ನಡೆಯಿತು.  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X