Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬಿಜೆಪಿ ಸರಕಾರದ ವೈಫಲ್ಯ, ಲಂಪಟತನ,...

ಬಿಜೆಪಿ ಸರಕಾರದ ವೈಫಲ್ಯ, ಲಂಪಟತನ, ಸುಳ್ಳು ಎಲ್ಲವೂ ಬಯಲಾಗುತ್ತಿದೆ: ಕಾಂಗ್ರೆಸ್ ಕಿಡಿ

''ಬಿಜೆಪಿ ಸಂಸದರೇ ಯಾವ ಬಿಲದಲ್ಲಿ ಅಡಗಿದ್ದೀರಿ, ದಯಮಾಡಿ ಹೊರಬನ್ನಿ''

ವಾರ್ತಾಭಾರತಿವಾರ್ತಾಭಾರತಿ30 April 2021 6:01 PM IST
share
ಬಿಜೆಪಿ ಸರಕಾರದ ವೈಫಲ್ಯ, ಲಂಪಟತನ, ಸುಳ್ಳು ಎಲ್ಲವೂ ಬಯಲಾಗುತ್ತಿದೆ: ಕಾಂಗ್ರೆಸ್ ಕಿಡಿ

ಬೆಂಗಳೂರು, ಎ. 30: `ಮೂರ್ಖರ ಸರಕಾರದ ಲಸಿಕೆ ಅಭಿಯಾನವೋ, ಲಸಿಕೆ ಅಧ್ವಾನವೋ?! ಲಸಿಕೆ ನೀಡಲು ಮಾಡಿಕೊಂಡ ತಯಾರಿ ಏನೆಂದು ನಾವು ಮೊದಲಿಂದಲೂ ಕೇಳುತ್ತಾ ಬಂದಿದ್ದೇವೆ. ಸರಕಾರ ತಯಾರಿ ಇಲ್ಲದೆ ರಾಜ್ಯದ ಜನರನ್ನು ಮೂರ್ಖರನಾಗಿಸುತ್ತಿದೆ, ರಾಜ್ಯಗಳ ಮೇಲೆ ಹೊರೆ ಹೊರಿಸಿ ಕೇಂದ್ರ ಜಾರಿಕೊಂಡಿದೆ. ಬಿಜೆಪಿಗೆ ನಿಮ್ಮದು ಕೈಲಾಗದ ಸರಕಾರವೆನ್ನಲು ಈ ವೈಫಲ್ಯವೇ ಸಾಕು' ಎಂದು ಕಾಂಗ್ರೆಸ್ ಟೀಕಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಡಾ.ಸುಧಾಕರ್ ಅವರೇ, ಡೋಲು ಬಡಿಯುವ ಮುಂಚೆ ಕೋಲು ಇದೆಯೇ ನೋಡಿಕೊಳ್ಳಬೇಕು ಕಣ್ರೀ! ಕಂಪೆನಿಗಳು ಆರ್ಡರ್ ಪೂರೈಸುವ ಭರವಸೆ ನೀಡಿಲ್ಲ, ನೀವು ದಾಸ್ತಾನು ಇಟ್ಟಿಲ್ಲ, ಕೇಂದ್ರವೂ ಕೊಟ್ಟಿಲ್ಲ, ಲಸಿಕೆ ಎಷ್ಟು ಸಿಗುತ್ತದೆ ಎನ್ನುವ ಅಂದಾಜು ನಿಮಗಿಲ್ಲ, ಹೀಗಿರುವಾಗ ಯಾವ ಆಧಾರದಲ್ಲಿ ಅಭಿಯಾನದ ಬಡಾಯಿ ಕೊಚ್ಚಿದಿರಿ, ಲಸಿಕೆ ಪಡೆಯಲು ಕರೆ ಕೊಟ್ಟಿರಿ?' ಎಂದು ಪ್ರಶ್ನಿಸಿದೆ.

`ನಾಳೆಯಿಂದ ಲಸಿಕೆ ಕೊಡಲಾಗುತ್ತಿಲ್ಲ, ಆಸ್ಪತ್ರೆ ಕಡೆ ಬರಲೇಬೇಡಿ ಎಂದಿರುವ ಡಾ.ಸುಧಾಕರ್ ಅವರೇ, ಇಷ್ಟು ದಿನ ಮೇ 1 ರಿಂದ ಸರ್ವರಿಗೂ ಲಸಿಕೆ ಎಂದು ಯಾವ ಆಧಾರದಲ್ಲಿ ಭರವಸೆ ನೀಡಿದ್ದಿರಿ? ರಾಜ್ಯ ಬಿಜೆಪಿ ಸರಕಾರದ ನಿಮ್ಮ ವೈಫಲ್ಯ, ಲಂಪಟತನ, ಸುಳ್ಳು ಎಲ್ಲವೂ ಬಯಲಾಗುತ್ತಿದೆ, ಜನರನ್ನು ಮಂಕುಬೂದಿ ಎರಚಿ ಯಾಮಾರಿಸುವ ತಂತ್ರ ಬಿಡಿ ಸರ್ವರಿಗೂ ಲಸಿಕೆ ಯಾವಾಗ ಹೇಳಿ' ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದೆ.

ಲೆಕ್ಕ ಮುಚ್ಚಿಟ್ಟು ಮಾನ ಉಳಿಸಿಕೊಳ್ಳಲು ಯತ್ನ: `ಚಿತಾಗಾರಗಳಲ್ಲಿನ ಲೆಕ್ಕ ಬೆಟ್ಟದಷ್ಟು, ಸರಕಾರದ ಲೆಕ್ಕ ಸಾಸಿವೆಯಷ್ಟು. ಒಂದೇ ಚಿತೆಯಲ್ಲಿ ಹತ್ತು ಶವ ಸುಡಲಾಗುತ್ತಿದೆ, ಎಲ್ಲೆಲ್ಲೂ ಶವಗಳ ಸಾಲು, ಉರಿಯುತ್ತಿರುವ ಚಿತೆಗಳು. ಸರಕಾರ ಮಾತ್ರ ಎಮ್ಮೆಯ ಮೇಲೆ ಮಳೆ ಸುರಿದಂತೆ ಬೇಜವಾಬ್ದಾರಿತನದಲ್ಲಿ ಕೊರೋನ ಸಾವುಗಳ ಲೆಕ್ಕ ಮುಚ್ಚಿಟ್ಟು ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.

`ಡಾ.ಸುಧಾಕರ್ ಅವರೇ, ಲಸಿಕೆ ಹಂಚಿಕೆ ಯಾವ ದಿನಾಂಕದಿಂದ ನೀಡುವಿರಿ? ಲಸಿಕೆ ಕೊರತೆಯನ್ನು ನಿಭಾಯಿಸಲು ಯಾವ ಯೋಜನೆ ಹೊಂದಿದ್ದೀರಿ? ಕೇಂದ್ರ ಸರಕಾರಕ್ಕೆ ಲಸಿಕೆ ನೀಡುವಂತೆ ಏಕೆ ಬೇಡಿಕೆ ಇಟ್ಟಿಲ್ಲ? ರಾಜ್ಯದಲ್ಲಿ ಸರ್ವರಿಗೂ ಲಸಿಕೆ ನೀಡಲು ನಿಮಗೆ ಎಷ್ಟು ಕಾಲಾವಧಿ ಬೇಕು? ಲಸಿಕೆ ನೀಡಿಕೆಯ ಬಗ್ಗೆ ಸರಕಾರದ ಕಾರ್ಯತಂತ್ರವೇನು?' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸೋಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದರೆ ಅದು ಸೋಂಕಿನ ಪ್ರಭಾವವಲ್ಲ, ಸರಕಾರದ ವೈಫಲ್ಯ. ಸುದ್ದಿಗಳೆಲ್ಲವೂ ಆಕ್ಸಿಜನ್ ಇಲ್ಲದೆ ಸಾವು, ಹಾಸಿಗೆ ಸಿಗದೆ ಸಾವು, ವೆಂಟಿಲೇಟರ್ ಸಿಗದೆ ಸಾವು, ಚಿಕಿತ್ಸೆ ಸಿಗದೆ ಸಾವು. ತಜ್ಞರ ಪ್ರಕಾರ ಸೋಂಕಿತರನ್ನು ಶೇ.98ರಷ್ಟು ಕಾಪಾಡುವ ಸಾಧ್ಯತೆ ಇದೆ. ಆದರೆ ಬೇಜವಾಬ್ದಾರಿ ಕೊಲೆಗಡುಕ ಸರಕಾರದಿಂದ ಸಾವು ಹೆಚ್ಚಿದೆ' ಎಂದು ಕಾಂಗ್ರೆಸ್ ದೂರಿದೆ.

ಕೊರೋನ ಭೀತಿ ಮತ್ತು ಉದ್ಯೋಗ ನಷ್ಟದ ಪರಿಣಾಮ ವಲಸೆ ಕಾರ್ಮಿಕರು ಹಳ್ಳಿಗಳಿಗೆ ತೆರಳಿದ್ದಾರೆ, ಅವರ ಬದುಕಿಗೆ ಈಗ ಉದ್ಯೋಗ ಖಾತ್ರಿ ಒಂದೇ ಆಸರೆಯಾಗಬಲ್ಲದು. ಉದ್ಯೋಗ ಖಾತ್ರಿಗೆ ಅನುದಾನ ಹೆಚ್ಚಿಸಿ ನೆರವಿಗೆ ನಿಲ್ಲಬೇಕಾದ ಸರಕಾರ ಮೂರು ತಿಂಗಳ ಬಾಕಿಯನ್ನೇ ಕೊಡಲಿಲ್ಲ. ರಾಜ್ಯದ 25 ಬಿಜೆಪಿ ಸಂಸದರೇ ಯಾವ ಬಿಲದಲ್ಲಿ ಅಡಗಿದ್ದೀರಿ, ದಯಮಾಡಿ ಹೊರಬನ್ನಿ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಫೇಕ್ ಫ್ಯಾಕ್ಟರಿ

ಲಸಿಕೆ ಸಾಕಷ್ಟು ಇದೆ, ಆಕ್ಸಿಜನ್ ಬೇಕಾದಷ್ಟಿದೆ, ಬೆಡ್‍ಗಳು ಸರಾಗವಾಗಿ ಸಿಗುತ್ತಿದೆ, ರೆಮ್‍ಡಿಸಿವಿರ್ ಸಾಕಷ್ಟಿದೆ, ರಾಜ್ಯದಲ್ಲಿ ಸೋಂಕಿತರು ಸಾಯುತ್ತಲೇ ಇಲ್ಲ. ಯಾವುದೇ ವೈದ್ಯಕೀಯ ಸಮಸ್ಯೆಗಳೇ ಇಲ್ಲ. ಇದೆಲ್ಲವೂ ಫೇಕ್ ಫ್ಯಾಕ್ಟರಿ ಖ್ಯಾತಿಯ ಬಿಜೆಪಿ ಕರ್ನಾಟಕ ಟ್ವೀಟ್‍ಗಳಲ್ಲಿ ಮಾತ್ರ. ಜನ ಸಾಯುತ್ತಿದ್ದಾರೆ, ಇವರ ಸುಳ್ಳು ಮುಂದುವರಿಯುತ್ತಲೇ ಇದೆ. ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ' ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X