Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಂಸದರ ವಾರ್‌ರೂಮ್; ಉಚಿತ ಮೆಡಿಸಿನ್‌ಗೆ...

ಸಂಸದರ ವಾರ್‌ರೂಮ್; ಉಚಿತ ಮೆಡಿಸಿನ್‌ಗೆ ಬೇಡಿಕೆ ಸಲ್ಲಿಸುತ್ತಿರುವ ಸಾರ್ವಜನಿಕರು

ವಾರ್ತಾಭಾರತಿವಾರ್ತಾಭಾರತಿ30 April 2021 10:14 PM IST
share

ಮಂಗಳೂರು, ಎ.30: ಕೋವಿಡ್-19ಗೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾರದ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಸಂಸದ ನಳಿನ್ ಕುಮಾರ್ ಕಟೀಲ್‌ರ ‘ವಾರ್‌ರೂಮ್‌‘ಗೆ ದಿನನಿತ್ಯ ಆಕ್ಸಿಜನ್ ಬೇಕಿತ್ತು, ಆ್ಯಂಬುಲೆನ್ಸ್ ಬೇಕಿತ್ತು, ರೆಮ್‌ಡೆಸಿವಿರ್ ಸಿಗಬಹುದಾ? ಲಸಿಕೆ ಬೇಕಿತ್ತು... ಇತ್ಯಾದಿ ನೂರಾರು ಕರೆಗಳು ಬರುತ್ತಿವೆ. ಈ ಮಧ್ಯೆ ಕೆಲವರು ಉಚಿತ ಮೆಡಿಸಿನ್‌ಗೂ ಬೇಡಿಕೆ ಸಲ್ಲಿಸುತ್ತಿದ್ದಾರೆ.

ಸಂಸದರ ವಾರ್‌ರೂಮ್‌ನಲ್ಲಿರುವ ಮೆಡಿಸಿನ್ ವಿಭಾಗದ ಜವಾಬ್ದಾರಿಯನ್ನು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎ.ಕೆ.ಜಮಾಲ್‌ಗೆ ಸಂಸದರು ವಹಿಸಿಕೊಟ್ಟಿದ್ದಾರೆ. ಕಳೆದ ಬಾರಿಯ ಕೊರೋನ-ಲಾಕ್‌ಡೌನ್ ಸಂದರ್ಭವೂ ಅವರಿಗೇ ಈ ಜವಾಬ್ದಾರಿ ವಹಿಸಿಕೊಡಲಾಗಿತ್ತು.

ವಾರ್‌ರೂಮ್ ಸೇವಾವಧಿಯ ಸಂದರ್ಭ ತನಗಾದ ಅನುಭವವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡ ಎ.ಕೆ.ಜಮಾಲ್, ಕಳೆದ ಬಾರಿ ಮೆಡಿಸಿನ್ ವಿಭಾಗಕ್ಕೆ 2,882 ಕರೆ ಬಂದಿತ್ತು. ಈ ಬಾರಿ ಈವರೆಗೆ 143 ಕರೆಗಳು ಬಂದಿವೆ. ಎಲ್ಲಾ ಕರೆಗಳೂ ಮೆಡಿಸಿನ್‌ಗೆ ಸಂಬಂಧಪಟ್ಟು ಮಾತ್ರ ಬಂದದ್ದಲ್ಲ. ಕೆಲವು ಕರೆಗಳಲ್ಲಿ ದುಸ್ತರ ಬದುಕಿನ ಕಥೆಗಳೂ ಇತ್ತು.

ಜಿಲ್ಲೆಯ 8 ವಿಧಾನ ಸಭೆ ಕ್ಷೇತ್ರಗಳಲ್ಲಿ ನಮ್ಮ ಮೊಬೈಲ್ ಬೈಕ್ ಇದೆ. ಬಂದ ಕರೆಗಳಿಗೆ ತಕ್ಷಣ ಸ್ಪಂದಿಸುತ್ತೇವೆ. ಕೆಲವರು ಸಂಸದರ ವಾರ್‌ರೂಮ್ ಸೇವೆಯು ಉಚಿತ ಎಂದು ಭಾವಿಸಿದ್ದಾರೆ. ಆದರೆ, ಈ ವಾರ್‌ರೂಮ್ ಮೂಲಕ ಪೂರೈಕೆಯಾಗುವ ಮೆಡಿಸಿನ್‌ಗೆ ಮೊತ್ತ ಪಾವತಿಸಬೇಕಾಗುತ್ತದೆ. ಹಳೆಯಂಗಡಿಯ ವ್ಯಕ್ತಿಯೊಬ್ಬರು ಕರೆ ಮಾಡಿ ಮೆಡಿಸಿನ್‌ನ ಹೆಸರು ಹೇಳಿದರು. ಅದರ ಮೊತ್ತ ಕೇವಲ 13 ರೂ. ಮಾತ್ರ. ಮಂಗಳೂರಿನಿಂದ ಹಳೆಯಂಗಡಿಗೆ ತೆರಳಿ ಆ ಮೆಡಿಸಿನ್ ಕೊಟ್ಟು ಬಂದೆವು. ಇಲ್ಲಿ ಲಾಭದ ಪ್ರಶ್ನೆ ಅಲ್ಲ, ಸೇವಾತೃಪ್ತಿ ಮುಖ್ಯ ಎಂದು ಭಾವಿಸಿ ನಮ್ಮ ತಂಡ ಕೆಲಸ ಮಾಡುತ್ತದೆ ಎಂದು ಜಮಾಲ್ ಹೇಳಿದರು.

ಈ ಮಧ್ಯೆ ಗಂಜಿಮಠದ ಮಹಿಳೆಯೊಬ್ಬರು ಕರೆ ಮಾಡಿ 1 ತಿಂಗಳ ಮೆಡಿಸಿನ್, ಬಳಿಕ 3 ತಿಂಗಳದ್ದು ಕಳಿಸಿ ಎಂದರು. ಕೊನೆಗೆ 6 ತಿಂಗಳದ್ದು ಬೇಕು ಎಂದರು. ಸುಮಾರು 7,300 ರೂ. ಮೊತ್ತದ ಮೆಡಿಸಿನ್ ಮನೆ ಬಾಗಿಲಿಗೆ ತಲುಪಿಸಿದರೂ ಆ ಮಹಿಳೆ ಹಣ ಕೊಡಲು ನಿರಾಕರಿಸಿದರು. ನಾವು ಉಚಿತ ಎಂದು ಭಾವಿಸಿದ್ದೆವು ಎಂದು ಅವರು ತಿಳಿಸಿರುವುದಾಗಿ ಜಮಾಲ್ ನುಡಿದರು.

ತುಂಬೆಯ ಮಹಿಳೆಯೊಬ್ಬರು ಹಾಲು ಮುಗಿದಿದೆ. ಹೊರಗೆ ಹೋಗಿ ತರಲು ಯಾರೂ ಇಲ್ಲ. ಮಗು ಹಾಲಿಗಾಗಿ ಅಳುತ್ತಿದೆ ಎಂದರು. ನಾವು ಆ ವ್ಯವಸ್ಥೆಯನ್ನೂ ಮಾಡಿದೆವು. ಇನ್ನೊಬ್ಬರು ಕರೆ ಮಾಡಿ ಮನೆಯಲ್ಲಿ ಅಕ್ಕಿ ಸಾಮಗ್ರಿ ಇಲ್ಲ ಎಂದರೆ, ಮೂರು ಮಂದಿ ಕರೆ ಮಾಡಿ ಅಡುಗೆ ಅನಿಲ ಮುಗಿದಿದೆ. ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದರು. ನಾವು ಅದಕ್ಕೂ ಸ್ಪಂದಿಸಿದೆವು. ಮತ್ತೊಬ್ಬರು ಕರೆ ಮಾಡಿ ರೇಶನ್ ತರಲು 3 ಸಾವಿರ ರೂ. ಬೇಕು ಎಂದರು. ನಾವು ಹಣದ ಬದಲು ರೇಶನ್ ಕಿಟ್ ನೀಡಿ ಬಂದೆವು ಎಂದು ಜಮಾಲ್ ಹೇಳಿದರು.

ಎ.26ರಂದು ಫಳ್ನೀರ್‌ನ ಫ್ಲಾಟ್‌ವೊಂದರ 43 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಕೋವಿಡ್ ಭಯದಿಂದ ಅವರ ತಾಯಿ ಕೂಡ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ನಮ್ಮ ತಂಡವು ಅತ್ತಾವರ ನಂದಿಗುಡ್ಡೆಯ ಸ್ಮಶಾನ ಭೂಮಿಯಲ್ಲಿ ಆ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೆರವು ನೀಡಿದೆ ಎಂದು ಜಮಾಲ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X