Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ3 May 2021 12:10 AM IST
share
ಓ ಮೆಣಸೇ...

ಕೊರೋನ 2ನೇ ಅಲೆಯ ವೇಳೆ ಭಾರತ ವಿರೋಧಿ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು- ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಸಹ ಕಾರ್ಯವಾಹ
ಅದಕ್ಕೇ ಇರಬೇಕು ಪಶ್ಚಿಮ ಬಂಗಾಳದಲ್ಲಿ ಆ ಶಕ್ತಿಗಳನ್ನು ಸೋಲಿಸಿರುವುದು.


ಕೋವಿಡ್ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ 230ಎಕರೆ ಭೂಮಿ ಒದಗಿಸಿ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ - ಆರ್.ಅಶೋಕ್, ಸಚಿವ
ಒಟ್ಟಿನಲ್ಲಿ ಸಾಯುವುದಕ್ಕೆ ಯಾವ ಅಡೆತಡೆಯೂ ಇನ್ನು ಇಲ್ಲ.


ಕೊರೋನ ಸೋಂಕು ಹಳ್ಳಿಗಳಿಗೆ ಹರಡುವುದನ್ನು ಏನಾದರೂ ಮಾಡಿ ತಡೆಯಬೇಕು - ನರೇಂದ್ರ ಮೋದಿ, ಪ್ರಧಾನಿ
ಕುಂಭಮೇಳ, ರಾಜಕೀಯ ರ್ಯಾಲಿಗಳು ನಡೆದಿರುವುದು ಅದರ ಭಾಗವಾಗಿಯೇ ಇರಬೇಕು.


ಕೊರೋನದಿಂದಾಗಿ ರಾಜ್ಯದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ - ಡಾ.ಕೆ.ಸುಧಾಕರ್, ಸಚಿವ
ಹೌದು, ಸರಕಾರದ ವ್ಯವಸ್ಥೆಯ ಜೊತೆಗೆ ಜನಸಾಮಾನ್ಯರ ಯುದ್ಧ.


ಯಡಿಯೂರಪ್ಪನವರೇ ಮದ್ಯ ಅತ್ಯವಶ್ಯಕ ಪಟ್ಟಿಗೆ ಯಾವಾಗ ಸೇರಿತು? - ಅರವಿಂದ ಬೆಲ್ಲದ, ಶಾಸಕ
ಅದು ಸರಕಾರದ ಬೊಕ್ಕಸದ ಪಾಲಿಗೆ ಅತ್ಯವಶ್ಯವಂತೆ.


ಈ ಸಂಕಷ್ಟ ಕಾಲದಲ್ಲಿ ಕೊರೋನ ಲಸಿಕೆಯನ್ನು ಉದ್ಯಮವನ್ನಾಗಿ ಬೆಳೆಯಗೊಟ್ಟಿದ್ದು ಮೋದಿ ಸರಕಾರದ ಅತಿದೊಡ್ಡ ವೈಫಲ್ಯ- ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ
ಲಸಿಕೆ ಉದ್ಯಮವನ್ನು ಲಾಭದಾಯಕವಾಗಿಸುವುದಕ್ಕಾಗಿಯೇ ಕೊರೋನ ಎರಡನೇ ಅಲೆಯನ್ನು ಸೃಷ್ಟಿಸಲು ಅವರು ರ್ಯಾಲಿಗಳನ್ನು ಮಾಡಿರುವುದಂತೆ.


ಕೇಂದ್ರ ಸರಕಾರ ಜನರಿಗೆ ಉಚಿತ ಪಡಿತರ ನೀಡುವುದರಿಂದ ಕಾರ್ಮಿಕರು ಕೆಲಸಕ್ಕೆ ಬರದೆ ಮನೆಯಲ್ಲೇ ಉಳಿಯುತ್ತಾರೆ - ವಿಜಯ ಸಂಕೇಶ್ವರ, ಉದ್ಯಮಿ
ಲಾಕ್‌ಡೌನ್‌ನ ಉದ್ದೇಶವೇ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲೇ ಇರಿ ಎನ್ನುವುದಲ್ಲವೇ?


ಕೊರೋನ ಬಗ್ಗೆ ವದಂತಿಗಳನ್ನು ಹರಡುವವರ ವಿರುದ್ಧ ಎಸ್‌ಎಸ್‌ಎ ಗೂಂಡಾ ಕಾಯ್ದೆ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಕೊರೋನ ಪಾಸಿಟಿವ್‌ಗಳ ವಿರುದ್ಧವೇ ಗೂಂಡಾ ಕಾಯ್ದೆ ಹಾಕಿದರೆ ಹೇಗೆ?


ಮಮತಾ ಬ್ಯಾನರ್ಜಿಗೆ ರಾಜ್ಯದ ಹಿತಕ್ಕಿಂತ ಅಹಂಕಾರವೇ ಮುಖ್ಯ. ಹಾಗಾಗಿ ಅವರು ಪ್ರಧಾನಿ ಕರೆಯುವ ಯಾವ ಸಭೆಗೂ ಹಾಜರಾಗುವುದಿಲ್ಲ- ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಜನತೆಗೆ ಲಾಭವಾಗುವಂತಹದು ಅಲ್ಲಿ ಏನೂ ಇಲ್ಲ ಎನ್ನುವುದು ಅವರಿಗೆ ಮನವರಿಕೆಯಾಗಿರಬೇಕು.


ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಂದ ಹಣ ವಸೂಲು ಮಾಡುವಂತಹ ಕ್ರೂರ ವರ್ತನೆಯಿಂದ ನನಗೆ ಕೆಟ್ಟ ಬೈಗುಳ, ಕೋಪ ಅನವಶ್ಯಕವಾಗಿ ಬರುತ್ತಿದೆ - ಜಗ್ಗೇಶ್, ನಟ
ಆದರೂ, ಸರಕಾರದ ಋಣ ನಾಲಗೆಯನ್ನು ಕಟ್ಟಿ ಹಾಕಿರಬೇಕು.


ಕೊರೋನ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಗಳನ್ನು ನಡೆಸದಿರಲು ಸರಕಾರ ನಿರ್ಧರಿಸಿದೆ -ಆರ್.ಅಶೋಕ್, ಸಚಿವ
ಕೊರೋನಕ್ಕಾಗಿ ಸರಕಾರ ಮಾಡಿದ ಬಹುದೊಡ್ಡ ತ್ಯಾಗವಿರಬೇಕು ಇದು.


ನರೇಂದ್ರ ಮೋದಿ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ( ಕೊರೋನ ಸಂದರ್ಭದಲ್ಲಿ) ದೇಶದ ಸ್ಥಿತಿ ಇದಕ್ಕಿಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿತ್ತು - ಸಿ.ಟಿ.ರವಿ, ಶಾಸಕ
ಮೋದಿಯ ಜಾಗದಲ್ಲಿ ಕೊರೋನ ಇದ್ದಿದ್ದರೆ ಇಷ್ಟು ಗಂಭೀರ ಸ್ಥಿತಿ ಎದುರಾಗುತ್ತಿರಲಿಲ್ಲ ಎನ್ನುತ್ತಿದ್ದಾರೆ ಕೊರೋನ ಸಂತ್ರಸ್ತರು.


ಕರ್ಫ್ಯೂ ವಿಧಿಸುವುದು ನಮ್ಮ ಸರಕಾರಕ್ಕೆ ಸಂತಸದ ವಿಷಯವಲ್ಲ, ಆದರೆ ಅನಿವಾರ್ಯ - ಲಕ್ಷ್ಮಣ ಸವದಿ, ಡಿಸಿಎಂ
ಕರ್ಫ್ಯೂ ವಿಧಿಸಿದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆಯೇ?


ಪ.ಬಂ.ದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ನಿಲ್ಲಿಸಿದ ಬಳಿಕ ಚುನಾವಣಾ ಆಯೋಗ ಸಾರ್ವಜನಿಕ ಸಭೆಯನ್ನು ನಿಷೇಧಿಸಿದೆ - ನುಸ್ರತ್ ಜಹಾನ್, ಟಿಎಂಸಿ ಸಂಸದೆ
ಚುನಾವಣಾ ಫಲಿತಾಂಶ, ಬಂಗಾಳದಲ್ಲಿ ಮೋದಿಯನ್ನೇ ನಿಷೇಧಿಸಿದಂತಿದೆ.


ಬದುಕಿನಲ್ಲಿ ಮದುವೆಯೇ ಎಲ್ಲ ಅಲ್ಲ - ರಮ್ಯ, ನಟಿ
ಹೌದು, ಮದುವೆಯ ಜೊತೆಗೆ ವಿಚ್ಛೇದನ ಸೇರಿದರೆ ಬದುಕು ಪರಿಪೂರ್ಣ.


ಚುನಾವಣಾ ಆಯೋಗವು ಬಿಜೆಪಿಯ ಗಿಳಿ ಹಾಗೂ ಮೈನಾ ಆಗಿದೆ - ಮಮತಾ ಬ್ಯಾನರ್ಜಿ , ಪ.ಬಂ. ಮುಖ್ಯಮಂತ್ರಿ
ಮೋದಿಯವರ ಕೈಯಲ್ಲಿರುವ ನವಿಲು ಎಂದು ಆಯುಕ್ತರು ಬಿಂಕದಿಂದ ಕುಣಿದರಂತೆ.


ಪ್ರತಿಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನು ಅಧಿಕಾರದಲ್ಲಿದ್ದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿ ಸಂಸ್ಕೃತಿ - ಕುಮಾರಸ್ವಾಮಿ , ಮಾಜಿ ಮುಖ್ಯಮಂತ್ರಿ
ಅಧಿಕಾರ ಹಂಚಿಕೊಳ್ಳುವುದಾದರೆ ಬಿಜೆಪಿ ಹೇಳಿದ್ದನ್ನು ಬಹಿರಂಗವಾಗಿ ಮಾಡುವ ನಿಮ್ಮದು ಯಾವ ಸಂಸ್ಕೃತಿ?


ಪ್ರತೀ ಮನೆಗೆ ನಿರಂತರ ಕುಡಿಯುವ ನೀರು ಒದಗಿಸುವ ಪ್ರಧಾನಿ ಮೋದಿ ಕನಸು ಶೀಘ್ರದಲ್ಲಿಯೇ ನನಸಾಗಲಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಬಹುಶಃ ಆಮ್ಲಜನಕ ಇಲ್ಲದೆ ಪ್ರಾಣ ಬಿಡುತ್ತಿರುವವರ ಬಾಯಿಗೆ ಕೊನೆಯ ಬಾರಿಗೆ ಸುರಿಯುವುದಕ್ಕಾಗಿ ಇರಬಹುದು.


ನಮ್ಮ ರಾಜ್ಯದಲ್ಲಿ ಈಗ ಎಲ್ಲವೂ ಹಿಟ್ಲರ್ ಶೈಲಿಯಲ್ಲಿಯೇ ನಡೆಯುತ್ತಿದೆ - ಕೆ.ಆರ್.ರಮೇಶ್ ಕುಮಾರ್, ಮಾಜಿ ಸಚಿವ
ಹೌದು, ಗ್ಯಾಸ್ ಚೇಂಬರ್‌ನಲ್ಲಿ ನಡೆದ ಹತ್ಯಾಕಾಂಡಗಳು ಆಕ್ಸಿಜನ್ ಕೊರತೆಗಳಿಂದ ಆಸ್ಪತ್ರೆ ವಾರ್ಡ್‌ಗಳಲ್ಲಿ ನಡೆಯುತ್ತಿವೆ.


ಹನುಮ ಸಂಜೀವಿನಿ ತಂದಂತೆ ಮೋದಿ ಸರಕಾರ ಕೊರೋನ ಲಸಿಕೆ ನೀಡಿದೆ - ಡಾ.ಕೆ.ಸುಧಾಕರ್, ಸಚಿವ
ಹನುಮ ಲಂಕೆಯನ್ನು ಸುಟ್ಟಂತೆ, ಮೋದಿ ಸರಕಾರ ಕೊರೋನವನ್ನು ನಿರ್ವಹಿಸುತ್ತಿದೆ.


ಕೊರೋನ ನಿರ್ವಹಣೆ ನನಗೆ ತೃಪ್ತಿ ತಂದಿಲ್ಲ - ಸಿ.ಟಿ. ರವಿ, ಶಾಸಕ
ಕೊರೋನ ದುಡ್ಡಲ್ಲಿ ತೃಪ್ತಿಯಾಗುವಷ್ಟು ದೋಚುವುದಕ್ಕೆ ಸಾಧ್ಯವಾಗಿಲ್ಲವೋ ಏನೋ?


ಚುನಾವಣಾ ರ್ಯಾಲಿ, ಕುಂಭ ಮೇಳದಿಂದ ಕೊರೋನ ಹೆಚ್ಚಾಗಿಲ್ಲ - ಶೋಭಾ ಕರಂದ್ಲಾಜೆ, ಸಂಸದೆ
ಅವುಗಳು ನಡೆಯದೇ ಇದ್ದಿದ್ದರೆ ಕೊರೋನ ಇನ್ನಷ್ಟು ಹೆಚ್ಚಾಗುತ್ತಿತ್ತು ಎನ್ನುವುದು ಅವರ ವಾದ.


ಕೊರೋನಕ್ಕೆ ಲಸಿಕೆ ನೀಡುವ ಬಗ್ಗೆ ಏನೇ ಕೊರತೆ ಬಂದರೂ ಅದನ್ನು ನೀಗಿಸುವ ಸಾಮರ್ಥ್ಯ ಸರಕಾರಕ್ಕಿದೆ- ಬಿ.ಸಿ.ಪಾಟೀಲ್, ಸಚಿವ
ಕೊರತೆಯ ಕುರಿತಂತೆ ಯಾವ ಮಾಹಿತಿಯೂ ನಿಮಗೆ ಬಂದಿಲ್ಲವೇ?


ಹಿಂದೆಲ್ಲ ನಾವು ರಾಮನಯುಗ, ಕೃಷ್ಣನ ಯುಗ ಎನ್ನ್ನುತ್ತಿದ್ದೆವು, ಈಗ ರೋಗದ ಯುಗ ಎನ್ನುವ ಕಾಲ ಬಂದಿದೆ- ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಸ್ವಾಮೀಜಿಗಳ ಪಾಲಿಗೆ ಭೋಗದ ಯುಗವೂ ಹೌದು.


ಸೋಪು, ಟೀ ಪುಡಿಯಂತೆ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಕಣ್ಣೀರು ಬ್ರಾಂಡ್ - ಆರ್ ಅಶೋಕ್, ಸಚಿವ
ಸೋಪು, ಟೀ ಪುಡಿ ಉಪಯೋಗಕ್ಕೆ ಬರುತ್ತದೆ.


ಕೊರೋನ ಮೊದಲನೇ ಅಲೆ ಗೆದ್ದಿದ್ದೇವೆ, ಎರಡನೇ ಅಲೆಯನ್ನ್ನೂ ಗೆಲ್ಲುತ್ತೇವೆ - ನರೇಂದ್ರ ಮೋದಿ, ಪ್ರಧಾನಿ
ಮೋದಿ ಅಲೆಯನ್ನು ಗೆಲ್ಲದೆ, ಕೊರೋನ ಅಲೆ ಗೆಲ್ಲುವುದು ಕಷ್ಟ ಎನ್ನುತ್ತಿದ್ದಾರೆ ವೈದ್ಯಕೀಯ ತಜ್ಞರು.

share
ಪಿ.ಎ.ರೈ
ಪಿ.ಎ.ರೈ
Next Story
X