Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನಿರ್ಗತಿಕರಿಗೆ ನೆರವಾಗುವ ಹಂಝ ಬಸ್ತಿಕೋಡಿ

ನಿರ್ಗತಿಕರಿಗೆ ನೆರವಾಗುವ ಹಂಝ ಬಸ್ತಿಕೋಡಿ

ಕೋವಿಡ್ ಕರ್ಫ್ಯೂ ಆರಂಭದಿಂದ ನಿರಂತರವಾಗಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ ಸಮಾಜ ಸೇವಕ

ಇಮ್ತಿಯಾಝ್ ಶಾ ತುಂಬೆಇಮ್ತಿಯಾಝ್ ಶಾ ತುಂಬೆ15 May 2021 3:50 PM IST
share
ನಿರ್ಗತಿಕರಿಗೆ ನೆರವಾಗುವ ಹಂಝ ಬಸ್ತಿಕೋಡಿ

ಬಂಟ್ವಾಳ : ರಾಜ್ಯದಲ್ಲಿ ತಾಂಡವವಾಡುತ್ತಿರುವ ಕೊರೋನ ಸೋಂಕು ಇನ್ನಷ್ಟು ಹರಡುವುದನ್ನು ನಿಯಂತ್ರಿಸಲು ಸರಕಾರ ಹೇರಿರುವ ಕಠಿಣ ಕರ್ಫ್ಯೂ, ಲಾಕ್ ಡೌನ್ ನಿಂದ ಹಸಿವು ಮತ್ತು ತೀವ್ರ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು, ದಾರಿಹೋಕರಿಗೆ ಪ್ರತಿದಿನ ಒಂದೊತ್ತಿನ ಊಟವನ್ನು ಪೂರೈಸುವ ಮೂಲಕ ಸಮಾಜ ಸೇವಕ ಹಂಝ ಬಸ್ತಿಕೋಡಿ ನೆರವಾಗುತ್ತಿದ್ದಾರೆ. 

ಬಂಟ್ವಾಳ ತಾಲೂಕಿನ ವಾಮದ ಪದವು ಬಸ್ತಿಕೋಡಿ ನಿವಾಸಿ, ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಇರುವ ಹೆಸರಾಂತ ಆನಿಯಾ ದರ್ಬಾರ್ ಹೊಟೇಲ್ ಮಾಲಕರಾದ ಹಂಝ ಬಸ್ತಿಕೋಡಿ ಅವರು ನಿರ್ಗತಿಕರಿಗೆ ಊಟ ತಲುಪಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. 

ಸರಕಾರದ ಕಠಿಣ ಕರ್ಫ್ಯೂ, ಲಾಕ್ ಡೌನ್ ಕ್ರಮಗಳಿಂದ ಹಲವು ಉದ್ಯಮಗಳು ನೆಲಕಚ್ಚಿದೆ. ಉದ್ಯೋಗ ಕಳೆದುಕೊಂಡು ಹಲವರ ಜೀವನ ತತ್ತರಿಸಿ ಹೋಗಿದೆ. ಬಡವರು, ನಿರ್ಗತಿಕರು, ದಾರಿಹೋಕರ ಜೀವನ ನರಕದಂತಾಗಿದೆ. ಅಂಗಡಿ ಹೊಟೇಲುಗಳಿಗೆಲ್ಲಾ ಸಮಯ ನಿಗದಿ ಪಡಿಸಿದ್ದರಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಕರವಾಗಿದೆ.

ಕೊರೋನ ಭಯದಿಂದ ಯಾರೂ ಪರಸ್ಪರ ಹತ್ತಿರ ಸುಳಿಯದ ಈ ಸಮಯದಲ್ಲಿ ಹಂಝ ಅವರು ಬಿ.ಸಿ.ರೋಡ್ ಬಸ್ ನಿಲ್ದಾಣ, ರೈಲು ನಿಲ್ದಾಣ, ಸೇತುವೆಯಡಿ ಸಹಿತ ಬಿ.ಸಿ.ರೋಡ್ ಮತ್ತು ಬಂಟ್ವಾಳ ಪರಿಸರದಲ್ಲಿ ದಿನ ದೂಡುತ್ತಿರುವ ಬಡವರು, ನಿರ್ಗತಿಕರು, ದಾರಿಹೋಕರ ಹಸಿವು ನೀಗಿಸುತ್ತಿದ್ದಾರೆ‌. ಲಾಕ್ ಡೌನ್ ಸಮಯದಲ್ಲಿ ಹೊಟೇಲ್ ತೆರೆಯಲು ಅವಕಾಶ ಇರುವುದರಿಂದ ತನ್ನ ಹೊಟೇಲ್ ನಲ್ಲಿ ಊಟ ತಯಾರಿಸಿ ಸ್ವಂತ ತನ್ನ ಕಾರಿನಲ್ಲಿ ತೆರಳಿ ಊಟ ವಿತರಿಸುತ್ತಿದ್ದಾರೆ.

ಸಂಪೂರ್ಣ ಲಾಕ್ ಡೌನ್ ಗೆ ಮೊದಲು ರಾಜ್ಯ ಸರಕಾರ ಹೇರಿದ್ದ ಕೋವಿಡ್ ಕರ್ಫ್ಯೂ ಆರಂಭದಲ್ಲೇ ಹಂಝ ಅವರು ನಿರ್ಗತಿಕರಿಗೆ ಊಟ ವಿತರಿಸುವ ಕಾರ್ಯವನ್ನು ಆರಂಭಿಸಿದ್ದು ಈಗಲೂ ಮುಂದುವರಿಸಿದ್ದಾರೆ. ಪ್ರತಿದಿನ 25ರಿಂದ 30ರಷ್ಟು ಮಂದಿಗೆ ರಾತ್ರಿಯ ಊಟವನ್ನು ವಿತರಿಸುತ್ತಿದ್ದಾರೆ.

ಸಮಾಜ ಸೇವೆಯಲ್ಲಿ ಮುಂಚೂನಿಯಲ್ಲಿ ಇರುವ ಎಂ.ಫ್ರೆಂಡ್ಸ್ ಸಂಸ್ಥೆಯ ಸದಸ್ಯರೂ ಆಗಿರುವ ಹಂಝ ಬಸ್ತಿಕೋಡಿ ಅವರು ವಿವಿಧ ಸಂಸ್ಥೆಗಳ ಜೊತೆಗೂಡಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಲಾಕ್ ಡೌನ್ ನ ಪರಿಣಾಮ ಊಟ ತಿಂಡಿ ಇಲ್ಲದವರಿಗೆ ಊಟ, ತಿಂಡಿ ನೀಡಿ ನೆರವಾಗುತ್ತಿದ್ದಾರೆ.

ಬಿ.ಸಿ.ರೋಡ್ ಮತ್ತು ಬಂಟ್ವಾಳ ಪರಿಸರದಲ್ಲಿ ಇರುವ ಬಡವರು, ನಿರ್ಗತಿಕರು, ದಾರಿಹೋಕರಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಊಟವನ್ನು ವಿವಿಧ ಸಂಘ ಸಂಸ್ಥೆಗಳು, ಪಕ್ಷಗಳ ವತಿಯಿಂದ ನೀಡಲಾಗುತ್ತಿದೆ. ಆದರೆ ರಾತ್ರಿಯ ಊಟ ಯಾರೂ ಪೂರೈಸುತ್ತಿಲ್ಲ. ಇದನ್ನು ಮನಗಂಡು ಕೋವಿಡ್ ಕರ್ಫ್ಯೂ ಸಮಯದಿಂದ ಆರಂಭಿಸಿ ಇಂದಿನವರೆಗೂ ಪ್ರತಿ ದಿನ ರಾತ್ರಿಯಾಗುತ್ತಿದ್ದಂತೆ ಊಟವನ್ನು ಪ್ಯಾಕ್ ಮಾಡಿ ಹಂಝ ಬಸ್ತಿಕೋಡಿ ಸ್ವಂತ ತಾನೇ ತೆರಳಿ ವಿತರಿಸುತ್ತಿದ್ದಾರೆ‌.

ಹಂಝ ಬಸ್ತಿಕೋಡಿ ಅವರ ಈ ಸಮಾಜ ಸೇವೆ ಮೊದಲ ಬಾರಿಯೇನಲ್ಲ. ಕಳೆದ ವರ್ಷದ ಲಾಕ್ ಡೌನ್ ಸಮಯದಲ್ಲೂ ಪ್ರತಿದಿನ ನಿರ್ಗತಿಕರಿಗೆ ಊಟ ನೀಡುತ್ತಿದ್ದರಲ್ಲದೆ ಹಲವು ಬಡ ಕುಟುಂಬಗಳಿಗೆ ದಿನನಿತ್ಯ ಉಪಯೋಗಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

''ಹಂಝ ಬಸ್ತಿಕೋಡಿ ಅವರ ಜೀವನವೇ ಒಂದು ಸಮಾಜ ಸೇವೆ. ಅದನ್ನು ಅವರು ಅವರ ತಂದೆ ಮತ್ತು ಹಿರಿಯರಿಂದ ಕಲಿತಿದ್ದಾರೆ. ಯಾವುದೇ ಪ್ರಚಾರ, ಪ್ರತಿಫಲ ಬಯಸದೆ ಅವರು ಸಮಾಜ ಸೇವೆಯ ಮುಂಚೂಣಿಯಲ್ಲಿ ಇದ್ದಾರೆ. ಬಿ.ಸಿ.ರೋಡಿನಲ್ಲಿ ಅವರ ಮಾಲಕತ್ವದ ಹೊಟೇಲ್ ನಲ್ಲಿ ಉತ್ತಮ ಆಹಾರವನ್ನು ಮಿತದರದಲ್ಲಿ ಜನರಿಗೆ ನೀಡುತ್ತಿರುವುದು ನಾನು ಕಂಡ ಅವರ ಅತೀ ದೊಡ್ಡ ಸಮಾಜ ಸೇವೆಯಾಗಿದೆ''. 

- ಸದಾಶಿವ ಬಂಗೇರ, ಬೂಡಾ ಮಾಜಿ ಅಧ್ಯಕ್ಷ

share
ಇಮ್ತಿಯಾಝ್ ಶಾ ತುಂಬೆ
ಇಮ್ತಿಯಾಝ್ ಶಾ ತುಂಬೆ
Next Story
X