Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಮಾಹಿತಿ - ಮಾರ್ಗದರ್ಶನ
  3. ಮರು ವ್ಯಾಖ್ಯಾನಿಸಬೇಕಾದ ಶಿಕ್ಷಣ,...

ಮರು ವ್ಯಾಖ್ಯಾನಿಸಬೇಕಾದ ಶಿಕ್ಷಣ, ಮೌಲ್ಯಮಾಪನ

ಕಾಮಿಯಾ ಕುಮಾರ್ಕಾಮಿಯಾ ಕುಮಾರ್16 May 2021 10:06 AM IST
share
ಮರು ವ್ಯಾಖ್ಯಾನಿಸಬೇಕಾದ ಶಿಕ್ಷಣ, ಮೌಲ್ಯಮಾಪನ

ಈ ಬಿಕ್ಕಟ್ಟಿನ ಸಮಯ ಅರ್ಥಪೂರ್ಣ ಶಿಕ್ಷಣ ಎಂದರೇನೆಂಬುದನ್ನು ಮರುವ್ಯಾಖ್ಯಾನಿಸಲು ನಮಗೆ ದೊರೆತ ಒಂದು ಅವಕಾಶವಾಗಿದೆ. ಪುಸ್ತಕದ ಬದನೆಕಾಯಿಯನ್ನಷ್ಟೇ ಕಲಿಯುವ, ಉರುಹೊಡೆಯುವ ಮತ್ತು ಆತಂಕದ ಸದ್ಯದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡು ಚಡಪಡಿಸುವುದನ್ನು ತಡೆಯಲು ಒಂದು ಬದಲಾವಣೆ ತುರ್ತಾಗಿ ತರಬೇಕಾಗಿದೆ. ಕೊರೋನ ಸಾಂಕ್ರಾಮಿಕವು ಭಾರೀ ಪ್ರಮಾಣದಲ್ಲಿ ಹರಡುತ್ತಿರುವಾಗಲೂ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಅಥವಾ ಮುಂದೂಡುವ ಕುರಿತು ಚರ್ಚೆಗಳು ನಡೆದವೇ ಹೊರತು, ಈ ಸಮಸ್ಯೆಗಳಿಗೆ ಪರ್ಯಾಯ ಪರಿಹಾರಗಳೇನು? ಬದಲಿ (ಅಲ್ಟರ್ನೆಟಿವ್)ವ್ಯವಸ್ಥೆಯೇನು? ಎಂಬುದರ ಕುರಿತು ಗಂಭೀರ ಚಿಂತನೆ ನಡೆಯಲಿಲ್ಲ. ಪ್ರಪಂಚ ಈ ಹಿಂದಿನಂತೆ ಇರದೆ ಬದಲಾಗುವುದು ಖಂಡಿತ ಎಂದು ಅನ್ನಿಸುತ್ತಿರುವಾಗ ಇಂದಿನ ಅಭೂತಪೂರ್ವ ಪರಿಸ್ಥಿತಿ ಶೈಕ್ಷಣಿಕ ವ್ಯವಸ್ಥೆ ಹಾಗೂ ಮೌಲ್ಯಮಾಪನಗಳನ್ನು ಮರುವ್ಯಾಖ್ಯಾನಿಸಲು ಒಂದು ವಿಶಿಷ್ಟ ಅವಕಾಶವೆಂದು ಸರಕಾರ ತಿಳಿಯಬೇಕಾಗಿತ್ತು. ಇದಕ್ಕೆ ಬದಲಾಗಿ ಸರಕಾರ ವೈಯಕ್ತಿಕವಾಗಿ ಪರೀಕ್ಷೆ ನಡೆಸುವ, ಆ ಮೂಲಕ ನಮಗೆ ಪ್ರೀತಿಪಾತ್ರರಾದವರ ಜೀವಗಳಿಗೆ ಇನ್ನಷ್ಟು ಬೆದರಿಕೆಯೊಡ್ಡುವ ಬಗ್ಗೆ ಯೋಚಿಸುತ್ತಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವೂ ಸೇರಿದಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಭವಿಷ್ಯದ ಬಗ್ಗೆ ಆತಂಕಗಳು ಇದ್ದೇ ಇವೆ. ಆದಾಗ್ಯೂ ಇಂದಿನ ಜಾಗತಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಭಾರತ ಚಿಕ್ಕ ಅಥವಾ ದೊಡ್ಡ ಗುಂಪುಗಳಾಗಿ ಜನರು ನೆರೆಯುವುದಕ್ಕೆ ಅವಕಾಶ ನೀಡುವ ಸ್ಥಿತಿಯಲ್ಲಿಲ್ಲ. ಹೀಗಿರುವಾಗ ವರ್ಚುವಲ್ ಶಿಕ್ಷಣ ಸಮಿತಿಗಳೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಯೋಚಿಸಲು ಯಾಕೆ ಪ್ರಯತ್ನಿಸುತ್ತಿಲ್ಲ? ಉದಾಹರಣೆಗೆ, ಆನ್‌ಲೈನ್ ಪರೀಕ್ಷೆಗಳನ್ನು ನಡೆಸಿದರೆ ವಿದ್ಯಾರ್ಥಿಗಳು ‘ಚೀಟಿಂಗ್’ ಮಾಡುತ್ತಾರೆ ಎಂಬುದು ಈಗ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಎದುರಾಗಿರುವ ಸವಾಲುಗಳಲ್ಲೊಂದು. ಆದರೆ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಸೃಜನಾತ್ಮಕವಾಗಿ, ವಿಮರ್ಶಾತ್ಮಕವಾಗಿ ಯೋಚಿಸಲೇ ಬೇಕಾಗುವ ರೀತಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿನ್ಯಾಸಗೊಳಿಸಿದಲ್ಲಿ ಅವರು ಯಾವುದೇ ಪುಸ್ತಕದಿಂದ ನಕಲು ಹೊಡೆದು ಉತ್ತರಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ.

ಹಾಗೆಯೇ ವಿದ್ಯಾರ್ಥಿಗಳ ಕಲಿಕೆಯ, ಸಾಧನೆಯ ಮೌಲ್ಯಮಾಪನವನ್ನು ಶೈಕ್ಷಣಿಕ ವರ್ಷದ ಉದ್ದಕ್ಕೂ ಮಾಡುವಂತೆ ಶಿಕ್ಷಕರಿಗೆ ಸೂಚಿಸಬಹುದು. ಆಯಾ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಸಾಧನೆಯನ್ನು ಉತ್ಪ್ರೇಕ್ಷಿಸಿ ದತ್ತಾಂಶಗಳನ್ನು ನೀಡುತ್ತಿವೆ ಎಂದಾದಲ್ಲಿ ಶಾಲೆಗಳ ಒಂದು ಗುಂಪನ್ನು ರಚಿಸಿ ಮೌಲ್ಯಮಾಪನವನ್ನು ಪರಸ್ಪರ ವಿನಿಮಯ ಮಾಡಬಹುದು.

ಇಷ್ಟೇ ಅಲ್ಲದೆ ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೆ ಸಿದ್ಧರಾದಾಗ ಆನ್‌ಲೈನ್ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆಹ್ವಾನಿಸಿ ಅವುಗಳ ನೆರವು ಪಡೆಯಬಹುದು. ವಿದ್ಯಾರ್ಥಿಗಳನ್ನು ಸಹ ಮೌಲ್ಯಮಾಪನ ಹಾಗೂ ಸಹಪಾಠಿಗಳ (ಪಿಯರ್) ಮೌಲ್ಯಮಾಪನದಲ್ಲಿ ತೊಡಗಿಸುವುದು ನಮ್ಮ ಅಂತಿಮ ಗುರಿಯಾಗಬೇಕು.

ಅಕಡಮಿಕ್ ಸಾಧನೆಯೊಂದೇ ವಿದ್ಯಾರ್ಥಿಯ ಬೆಳವಣಿಗೆಯ ಮಾನದಂಡವಾಗಬೇಕೇ ಅಥವಾ ಸಾಮಾಜಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ನೆಲೆಗಳನ್ನು ಆಧರಿಸಿ ವಿದ್ಯಾರ್ಥಿಯ ಯಶಸ್ಸನ್ನು ಮರು ವ್ಯಾಖ್ಯಾನಿಸಲು ಸಾಧ್ಯವೇ ಎಂಬುದು ನಾವು ಪರಿಗಣಿಸಬೇಕಾದ ಪ್ರಶ್ನೆ.

ಈ ಬಿಕ್ಕಟ್ಟಿನ ಸಮಯ ಅರ್ಥಪೂರ್ಣ ಶಿಕ್ಷಣ ಎಂದರೇನೆಂಬುದನ್ನು ಮರುವ್ಯಾಖ್ಯಾನಿಸಲು ನಮಗೆ ದೊರೆತ ಒಂದು ಅವಕಾಶವಾಗಿದೆ. ಪುಸ್ತಕದ ಬದನೆಕಾಯಿಯನ್ನಷ್ಟೇ ಕಲಿಯುವ, ಉರುಹೊಡೆಯುವ ಮತ್ತು ಆತಂಕದ ಸದ್ಯದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡು ಚಡಪಡಿಸುವುದನ್ನು ತಡೆಯಲು ಒಂದು ಬದಲಾವಣೆ ತುರ್ತಾಗಿ ತರಬೇಕಾಗಿದೆ. ಇಂತಹ ಬದಲಾವಣೆಯ ಅವಶ್ಯಕತೆಯನ್ನು ಕೊರೋನ ಬಿಕ್ಕಟ್ಟು ಸೂಚಿಸುತ್ತಿದೆ. ಈ ಬದಲಾವಣೆಯನ್ನು ಪ್ರತಿಪಾದಿಸಿ, ಸಂಘಟಿಸಿ ಅನುಷ್ಠಾನಗೊಳಿಸಲು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು, ವಿದ್ವಾಂಸರು ಹಾಗೂ ಸಂಶೋಧಕರನ್ನು ಒಳಗೊಂಡ ಶೈಕ್ಷಣಿಕ ಸಮಿತಿಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು. ಉನ್ನತ ಶಿಕ್ಷಣ ಸಂಸ್ಥೆಗಳು ನಡೆಸುವ ಮೌಲ್ಯಮಾಪನಗಳ ಮೂಲಕ ಮೌಲ್ಯಮಾಪನದ ಗುಣಮಟ್ಟವನ್ನು ಹೆಚ್ಚಿಸಿದಾಗ ನಮ್ಮ ಯುವಜನತೆ ಅಂತರ್ ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು. ಈ ಮೂಲಕ ಯುವ ಜನತೆಯನ್ನು ದೇಶಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸುವ ಕೆಲಸದಲ್ಲಿ ತೊಡಗಿಸಿ ಬಹುತ್ವದ ಹಾಗೂ ಶ್ರೇಣೀಕೃತವಲ್ಲದ ಒಂದು ಭಾರತದ ನಿರ್ಮಾಣವನ್ನು ಸಾಕಾರಗೊಳಿಸಬಹುದು.

ಕೃಪೆ: TheHindu

(ಲೇಖಕರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿ ಹಾಗೂ ಬ್ಲೂಬೆಲ್ ಸ್ಕೂಲ್ ಇಂಟರ್ ನ್ಯಾಶನಲ್‌ನಲ್ಲಿ ಶಿಕ್ಷಕರಾಗಿದ್ದಾರೆ)

share
ಕಾಮಿಯಾ ಕುಮಾರ್
ಕಾಮಿಯಾ ಕುಮಾರ್
Next Story
X