ಅಸಹಾಯಕರಿಗೆ ಆಹಾರ ಸಾಮಗ್ರಿ ವಿತರಣೆ
ಉಡುಪಿ, ಮೇ 17: ದಿವಂಗತ ವಿನಯದಾಸ್ ಅಡ್ಯಂತಾಯರ ಪುಣ್ಯದಿನದ ಪ್ರಯುಕ್ತ ಅವರ ಧರ್ಮಪತ್ನಿ ಅಜ್ಜರಕಾಡು ಆಶಾ ಅಡ್ಯಂತಾಯ ಲಾಕ್ಡೌನ್ ತುರ್ತು ಪರಿಸ್ಥಿತಿಯಿಂದ ಅಸಹಾಯಕರಾಗಿರುವ 25 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಸೋಮವಾರ ಅಂಬಲಪಾಡಿಯಲ್ಲಿ ವಿತರಿಸಿದರು.
ಉದ್ಯೋಗ ಕಳೆದುಕೊಂಡು, ಜೀವನ ನಿರ್ವಹಿಸಲಾಗದೆ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿರುವ 15 ಮಹಿಳೆಯರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ವಿತರಿಸಿದರು. ಈ ಸಂದರ್ಭ ದಲ್ಲಿ ನಿವೃತ್ತ ಸರಕಾರಿ ನೌಕರರ ಎಸ್.ಎಸ್.ತೋನ್ಸೆ ಮೊದಲಾದವರು ಉಪಸ್ಥಿತರಿದ್ದರು.
Next Story