Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೊಸ ಸೋಂಕು ಪ್ರಕರಣ ಇಳಿಮುಖವಾದರೂ...

ಹೊಸ ಸೋಂಕು ಪ್ರಕರಣ ಇಳಿಮುಖವಾದರೂ ಅಗ್ರಸ್ಥಾನದಲ್ಲೇ ಮುಂದುವರಿದ ಭಾರತ: ವಿಶ್ವ ಆರೋಗ್ಯ ಸಂಸ್ಥೆ

ವಾರ್ತಾಭಾರತಿವಾರ್ತಾಭಾರತಿ19 May 2021 11:21 PM IST
share
ಹೊಸ ಸೋಂಕು ಪ್ರಕರಣ ಇಳಿಮುಖವಾದರೂ ಅಗ್ರಸ್ಥಾನದಲ್ಲೇ ಮುಂದುವರಿದ ಭಾರತ: ವಿಶ್ವ ಆರೋಗ್ಯ ಸಂಸ್ಥೆ

ಹೊಸದಿಲ್ಲಿ, ಮೇ 19: ಭಾರತದಲ್ಲಿ ಕಳೆದ ವಾರ ದೈನಂದಿನ ಕೊರೋನ  ಸೋಂಕು ಪ್ರಕರಣದಲ್ಲಿ 13% ಇಳಿಕೆಯಾಗಿದೆ. ಆದರೆ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಇದು ಅತ್ಯಧಿಕವಾಗಿಯೇ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.

ಜಾಗತಿಕವಾಗಿ ಕಳೆದ ವಾರ ಹೊಸ ಸೋಂಕಿನ ಪ್ರಕರಣ 12%ದಷ್ಟು ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಸುಮಾರು 4.8 ಮಿಲಿಯನ್ನಷ್ಟು ಹೊಸ ಸೋಂಕು ಪ್ರಕರಣ, ಸುಮಾರು 86,000 ಹೊಸ ಸಾವಿನ ಪ್ರಕರಣ ವರದಿಯಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆಯ ವಾರಾಂತ್ಯದ ಸೋಂಕಿನ ಅಂಕಿಅಂಶ ಪರಿಷ್ಕರಣೆಯ ವರದಿ ತಿಳಿಸಿದೆ.

ವಿಶ್ವಮಟ್ಟದಲ್ಲಿ ಅತ್ಯಧಿಕ ಸೋಂಕಿನ ಪ್ರಕರಣ(ಕಳೆದ ವಾರ) ಭಾರತದಲ್ಲಿ ದಾಖಲಾಗಿದೆ(2,387,663 ಹೊಸ ಪ್ರಕರಣ). ಇದು ಕಳೆದ ವಾರಕ್ಕೆ ಹೋಲಿಸಿದರೆ 13% ಕಡಿಮೆಯಾಗಿದೆ. ಬ್ರೆಝಿಲ್ (437,076 ಹೊಸ ಪ್ರಕರಣ, 3% ಏರಿಕೆ), ಅಮೆರಿಕ(235,638 ಹೊಸ ಪ್ರಕರಣ, 21% ಇಳಿಕೆ), ಅರ್ಜೆಂಟೀನಾ(151,332 ಹೊಸ ಪ್ರಕರಣ, 8% ಹೆಚ್ಚಳ), ಕೊಲಂಬಿಯಾ(115,834 ಹೊಸ ಪ್ರಕರಣ, 6% ಏರಿಕೆ) ಆ ಬಳಿಕದ ಸ್ಥಾನದಲ್ಲಿವೆ.

ಇದೇ ಅವಧಿಯಲ್ಲಿ ಅತ್ಯಧಿಕ ಸಾವು ಭಾರತದಲ್ಲಿ ಸಂಭವಿಸಿದೆ(27,992 ಹೊಸ ಸಾವಿನ ಪ್ರಕರಣ, 4% ಏರಿಕೆ). ನೇಪಾಳ(1,224 ಹೊಸ ಸಾವಿನ ಪ್ರಕರಣ, 2.667% ಏರಿಕೆ), ಇಂಡೋನೇಶಿಯಾ(1,125 ಹೊಸ ಸಾವಿನ ಪ್ರಕರಣ, 5% ಇಳಿಕೆ) ಆ ಬಳಿಕದ ಸ್ಥಾನದಲ್ಲಿವೆ.

ಭಾರತದ ಒಟ್ಟು ಸೋಂಕಿತರ ಸಂಖ್ಯೆ 24.68 ಮಿಲಿಯ ಮತ್ತು ಮೃತರಾದವರ ಒಟ್ಟು ಪ್ರಮಾಣ ಸುಮಾರು 2,70,284 ಆಗಿದೆ. ಆಗ್ನೇಯ ಏಶ್ಯಾ ವಲಯದಲ್ಲಿ ಕಳೆದ ವಾರ 2.5 ಮಿಲಿಯನ್ ಹೊಸ ಪ್ರಕರಣ, 30,000ಕ್ಕೂ ಅಧಿಕ ಸಾವಿನ ಪ್ರಕರಣ ಸಂಭವಿಸಿದ್ದು ಇದು ಈಹಿಂದಿನ  ವಾರಕ್ಕೆ ಹೋಲಿಸಿದರೆ ಕ್ರಮವಾಗಿ 12% ಮತ್ತು 7% ಏರಿಕೆಯಾಗಿದೆ. ಸತತ 9 ವಾರಗಳ ಏರಿಕೆಯ ಬಳಿಕ ಹೊಸ ಪ್ರಕರಣಗಳ ಪ್ರಮಾಣ ಇಳಿಕೆಯಾಗಿದೆ. ಆದರೆ ಸಾವಿನ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಈ ವಾರ, ಪಶ್ಚಿಮ ಪೆಸಿಫಿಕ್ ವಲಯ ಹೊರತುಪಡಿಸಿ ಉಳಿದೆಲ್ಲಾ ಸೋಂಕಿನ ಪ್ರಕರಣ ಇಳಿಮುಖವಾಗಿದೆ. ಆದರೆ ಹೊಸ ಸೋಂಕಿನ ವ್ಯಾಪಕತೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಯುರೋಪಿಯನ್ ವಲಯದಲ್ಲಿ ಅತ್ಯಧಿಕ ಇಳಿಕೆ ದಾಖಲಾಗಿದ್ದರೆ, ಆ ಬಳಿಕ ಪೂರ್ವ ಮೆಡಿಟರೇನಿಯನ್ ವಲಯವಿದೆ . ಈ ವಲಯದಲ್ಲಿ ಕಳೆದ ವಾರ ಹೊಸ ಸಾವಿನ ಪ್ರಕರಣದಲ್ಲೂ ಇಳಿಮುಖ ಕಂಡುಬಂದಿದೆ.

ಕಳೆದ ವರ್ಷದ ಆಗಸ್ಟ್ 7ಕ್ಕೆ ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣ 20 ಲಕ್ಷದ ಗಡಿ ದಾಟಿದ್ದರೆ, ಸೆಪ್ಟಂಬರ್ 16ರಂದು 50 ಲಕ್ಷದ ಗಡಿ ದಾಟಿತ್ತು.  ಡಿಸೆಂಬರ್ 10ರಂದು 1 ಕೋಟಿ, ಮೇ 4ರಂದು 2 ಕೋಟಿ ಗಡಿ ದಾಟಿದೆ. ಭಾರತದಲ್ಲಿ ಬುಧವಾರ ಬೆಳಗ್ಗಿನವರೆಗಿನ ಅಂಕಿಅಂಶದಂತೆ 2,67,334 ಹೊಸ ಸೋಂಕಿನ ಪ್ರಕರಣ, 4,529 ಹೊಸ ಸಾವಿನ ಪ್ರಕರಣ ದಾಖಲಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿನ ಪ್ರಕರಣ 2,54,96,330ಕ್ಕೆ ಮತ್ತು ಒಟ್ಟು ಸಾವಿನ ಪ್ರಕರಣ 2,83,248ಕ್ಕೇರಿದೆ ಎಂದು ಕೇಂದ್ರ ಸರಕಾರ  ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X