ಮೇ 26ರಂದು ಮತ್ತೊಂದು ಚಂಡಮಾರುತ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಹೊಸದಿಲ್ಲಿ, ಮೇ 19: ತೌಕ್ತೆ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 26ರ ವೇಳೆಗೆ ಈ ಚಂಡಮಾರುತ ಬಂಗಾಳ, ಒಡಿಶಾ ತೀರಕ್ಕೆ ಅಪ್ಪಳಿಸಲಿದೆ. ಮೇ 25ರ ಸಂಜೆಯ ಬಳಿಕ ಈ ಎರಡೂ ರಾಜ್ಯಗಳ ಕಡಲ ತೀರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಮೇ 22ರಂದು ಅಂಡಮಾನ್ ನ ಬಳಿ ಬಂಗಾಳ ಕೊಲ್ಲಿಯಲ್ಲಿ ಮೂಡುವ ಚಂಡಮಾರುತ 23ರಂದು ಉತ್ತರ ಮತ್ತು ವಾಯವ್ಯದತ್ತ ಮುಂದುವರಿಯಲಿದೆ. ಮೇ 22ರ ಬಳಿಕ ಮೀನುಗಾರರು ಹಾಗೂ ದೋಣಿಗಳು ಕಡಲಿಗೆ ಇಳಿಯದಂತೆ ಎಚ್ಚರಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಸಾಮಾನ್ಯವಾಗಿ ಮುಂಗಾರು ಪೂರ್ವದ ಎಪ್ರಿಲ್-ಮೇ ತಿಂಗಳಿನಲ್ಲಿ ಪೂರ್ವ ಮತ್ತು ಪಶ್ಚಿಮ ತೀರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಉಂಟಾಗುತ್ತದೆ ಎಂದು ಇಲಾಖೆ ಹೇಳಿದೆ.
Next Story