ಸೂರಿಂಜೆ ಗದ್ದೆಗಳಲ್ಲಿದ್ದುದು ರಿಫೈನರಿ ತೈಲವಲ್ಲ: ಮಂಡಳಿ
ಮಂಗಳೂರು, ಮೇ 20: ನಗರ ಹೊರವಲಯದ ಸೂರಿಂಜೆ ಪರಿಸರದ ಕೆಲವು ಭತ್ತದ ಗದ್ದೆಗಳಲ್ಲಿ ಪತ್ತೆಯಾಗಿರುವುದು ರಿಫೈನರಿ ತೈಲವಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.
ಈ ಭಾಗದ ಗದ್ದೆಗಳಲ್ಲಿ ತೈಲ ಸೋರಿಕೆಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಎಂಆರ್ಪಿಎಲ್ನ ಪರಿಸರ ಇಂಜಿನಿಯರ್ಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆಗೂಡಿ ಗುರುವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಎಂಆರ್ಪಿಎಲ್ನಿಂದ ತೈಲ ಸೋರಿಕೆ ಆಗಿಲ್ಲ. ಅದು ರಿಫೈನರಿ ತೈಲವಲ್ಲ ಎಂಬುದು ಖಚಿತ ಪಟ್ಟಿದೆ. ಅಲ್ಲಿ ಕಂಡು ಬಂದಿರುವ ತೈಲದ ಅಂಶ ಜೈವಿಕವಾಗಿ ಉತ್ಪತ್ತಿಯಾಗಿದೆ.ಹೆಚ್ಚಿನ ಪರಿಶೀಲನೆಗಾಗಿ ತೈಲದ ಮಾದರಿಯನ್ನು ಸಂಗ್ರಹಿಸಲಾ ಗಿದೆ ಎಂದು ತಿಳಿಸಿದ್ದಾರೆ.
Next Story





