ಅಮ್ಮನ ಕಳೆದುಹೋದ ಮೊಬೈಲ್ ಗಾಗಿ ಮೊರೆ ಇಟ್ಟ ಬಾಲಕಿ: ಹೊಸ ಮೊಬೈಲ್ ನೀಡಿದ ಯುವ ಕಾಂಗ್ರೆಸ್
ಮಡಿಕೇರಿ, ಮೇ 23: ಕೋವಿಡ್ ನಿಂದ ಅಮ್ಮನನ್ನು ಕಳೆದುಕೊಂಡ ಬಾಲಕಿಯೊಬ್ಬಳು ಕಳೆದು ಹೋದ ಅಮ್ಮನ ಮೊಬೈಲ್ ಫೋನ್ ಗಾಗಿ ಸಾಮಾಜಿಕ ಜಾಲತಾಣದ ಮೂಲಕ ಮೊರೆ ಇಟ್ಟ ಹಿನ್ನೆಲೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಹೊಸ ಮೊಬೈಲ್ ಫೋನ್ವೊಂದನ್ನು ಉಡುಗೊರೆಯಾಗಿ ನೀಡಿದೆ.
ಕುಶಾಲನಗರದ 5ನೇ ತರಗತಿ ವಿದ್ಯಾರ್ಥಿನಿ ಹೃತಿಕ್ಷಾಳಿಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಕೊಡಗು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಪಿ.ಹನೀಫ್ ಸಂಪಾಜೆ ಅವರ ಮೂಲಕ ಹೊಸ ಮೊಬೈಲ್ನ್ನು ಹಸ್ತಾಂತರಿಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಿವು ಕುಶಾಲನಗರ, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಕುಮಾರ್, ಸದಸ್ಯರಾದ ನಝೀರ್, ರಿಯಾಜ್ ಎಸ್.ಎ, ಶಫೀರ್ ಮತ್ತಿತರರು ಉಪಸ್ಥಿತರಿದ್ದರು.
ಹೃತಿಕ್ಷಾಳ ತಾಯಿ ಪ್ರಭಾ ಅವರು ಕೋವಿಡ್ ನಿಂದ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಅವರ ಬಳಿ ಇದ್ದ ಮೊಬೈಲ್ ಫೋನ್ ನಾಪತ್ತೆಯಾಗಿತ್ತು. ಈ ಬಗ್ಗೆ ಹೃತಿಕ್ಷಾ ಬರೆದ ಪತ್ರವೊಂದು ಭಾರೀ ವೈರಲ್ ಆಗಿತ್ತು.
Next Story