ಲೈಂಗಿಕ ಕಿರುಕುಳ ಆರೋಪ: ಪ್ರಶಸ್ತಿ ವಾಪಸ್ ನೀಡುವೆ ಎಂದ ತಮಿಳು ಕವಿ ವೈರಮುತ್ತು

photo: facebook
ಹೊಸದಿಲ್ಲಿ: ಹಲವು ಮಹಿಳೆಯರಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ತಮಿಳು ಕವಿ ವೈರಮುತ್ತು ಒಎನ್ವಿ ಸಾಹಿತ್ಯ ಪ್ರಶಸ್ತಿಯನ್ನು ‘ಹಿಂದಿರುಗಿಸಲಿದ್ದೇನೆ’ ಎಂದು ಘೋಷಿಸಿದ್ದಾರೆ.
ಈ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಕವಿ, ದಿವಂಗತ ಒ.ಎನ್.ವಿ. ಕುರುಪ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದೆ. ವೈರಮುತ್ತು ಅವರನ್ನು ಈ ವರ್ಷ ಈ ಪ್ರಶಸ್ತಿಗೆ ಹೆಸರಿಸಲಾಗಿತ್ತು.
ಪ್ರಶಸ್ತಿ ತೀರ್ಪುಗಾರರರು ಮುಜುಗರವನ್ನು ಎದುರಿಸುವುದನ್ನುನಾನು ಬಯಸುವುದಿಲ್ಲ . ಒಎನ್ವಿ ಕಲ್ಚರಲ್ ಅಕಾಡೆಮಿಯು ಪ್ರಶಸ್ತಿಗೆ ತನ್ನ ನಾಮನಿರ್ದೇಶನವನ್ನು ಮರುಪರಿಶೀಲಿಸುವ ನಿರ್ಧಾರಕ್ಕೆ ಬಂದಿರುವುದು ಹಗೆತನವಾಗಿದೆ ಎಂದು ವೈರಮುತ್ತು ಹೇಳಿದ್ದಾರೆ.
Next Story





