Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ...

ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ

'ಗುಜರಾತ್ ಕಾರ್ಪೋರೇಟ್ ಆದ್ಮಿ ಕಾ ವಿಶ್ವಾಸ್'

ವಾರ್ತಾಭಾರತಿವಾರ್ತಾಭಾರತಿ31 May 2021 9:08 PM IST
share
ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ

ಬೆಂಗಳೂರು, ಮೇ 30: `ಬಿಜೆಪಿ ನಾಯಕರು ನಿನ್ನೆಗೆ ಮೋದಿಯವರ ನೇತೃತ್ವದ ಸರಕಾರಕ್ಕೆ ಏಳು ವರ್ಷ ತುಂಬಿತೆಂದು ಖಾಲಿ ಕೊಡ ಹೊತ್ತುಕೊಂಡು ಸಂಭ್ರಮಪಟ್ಟಿದ್ದಾರೆ. ಮಾನವಂತ, ಸೂಕ್ಷ್ಮ ಸಂವೇದನೆಯ ಜನ ಏನೆನ್ನುತ್ತಾರೆಂಬ ಬಗ್ಗೆ ಸಣ್ಣ ಸ್ಪಂದನೆಯೂ ಇಲ್ಲದ ಬಿಜೆಪಿ ನಾಯಕರು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಸಂಭ್ರಮಿಸಿದ್ದಾರೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. 

ಸೋಮವಾರ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ತಮ್ಮ ಏಳು ವರ್ಷಗಳ ಆಳ್ವಿಕೆಯಲ್ಲಿ ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿರುವುದೇ ನರೇಂದ್ರ ಮೋದಿಯವರ ಸಾಧನೆ. ಇಡೀ ದೇಶ ಸೂತಕದ ಮನೆಯಾಗಿದೆ. ಮನೆ ಮನೆಗಳೂ ಕತ್ತಲಾಗಿವೆ. ಪ್ರತಿ ಕಣ್ಣಿನಲ್ಲೂ ಕಣ್ಣೀರಿದೆ. ದೇಶದ ಜನ ಮೋದಿಯವರ ಆಡಳಿತಕ್ಕೆ 7 ವರ್ಷವಾಯಿತೆಂದು ನಿನ್ನೆ ಸಂಭ್ರಮ ಪಟ್ಟಿಲ್ಲ. ಬದಲಾಗಿ ಶ್ರದ್ಧಾಂಜಲಿ ಅರ್ಪಿಸಿದವರಂತೆ ಶೋಕ ಪಟ್ಟಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಪಾಲಿಗೆ ಮೋದಿಯವರ 7 ವರ್ಷಗಳ ಸಾಧನೆ ಎಂದರೆ ಅಸಂಖ್ಯಾತ ವಿಪತ್ತುಗಳ ಅವಧಿಯಾಗಿದೆ. ಪಟ್ಟಿ ಮಾಡಿದರೆ ಬಹುಶಃ ನೂರಾರು, ಸಾವಿರಾರು ಸುಳ್ಳುಗಳಿವೆ. ಬಿಜೆಪಿ ಎಂದರೆ ಸುಳ್ಳನ್ನು ಉತ್ಪಾದಿಸುವ ಜಗತ್ತಿನ ಅತಿದೊಡ್ಡ ಕೈಗಾರಿಕೆ ಇದ್ದಂತೆ. 70 ವರ್ಷಗಳ ಅವಧಿಯಲ್ಲಿ ದೇಶದ ಜನರು ಕಷ್ಟಪಟ್ಟು ಕಟ್ಟಿದ ಅಮೂಲ್ಯವಾದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೇವಲ ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ವೇಗವಾಗಿ ಹಿಂದಕ್ಕೆ ಕುಸಿದು ಹೋಗುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಮೋದಿಯವರ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಎಂಬುದು ಕೇವಲ ಸುಳ್ಳು ಘೋಷಣೆ ಎಂಬುದನ್ನು ಸ್ವತಃ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಾಗಿದ್ದರೆ ಯಾರ ವಿಕಾಸವಾಗಿದೆ? `ಸಬ್ ಕಾ ಸಾಥ್ ಅಂಬಾನಿ ಕಾ ವಿಕಾಸ್, ಅದಾನಿ ಕಾ ವಿಕಾಸ್, ಟೋಟಲಿ ಗುಜರಾತ್ ಕಾರ್ಪೋರೇಟ್ ಆದ್ಮಿ ಕಾ ವಿಶ್ವಾಸ್' ಆಗಿದೆ. ಯಾಕೆಂದರೆ ದೇಶದ ಜನ ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಬೊಗಸೆ ಆಕ್ಸಿಜನ್‍ಗೆ, ಒಂದು ಇಂಜೆಕ್ಷನ್ನಿಗೆ, ಒಂದು ಲಸಿಕೆಗೆ, ಉದ್ಯೋಗಕ್ಕೆ ಪರದಾಡುತ್ತಿದ್ದಾರೆ. ಆದರೆ ಮೋದಿಯವರ ಸರಕಾರದ ತುಘಲಕ್ ಆಡಳಿತ ನೀತಿಯಿಂದಾಗಿ ಈ ಕಾರ್ಪೋರೇಟ್ ಕಂಪೆನಿಗಳು  ಕೊರೋನ ಅವಧಿಯಲ್ಲೂ 12 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಜನರಿಂದ ದೋಚಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.

ಏಳು ಮಹಾ ವಿಪತ್ತುಗಳು: ನೋಟು ರದ್ದತಿ(ಡಿಮಾನಿಟೈಜೇಷನ್), ಜಿಎಸ್‍ಟಿ ರಾಜ್ಯಗಳ ಶೋಷಣೆ ಎರಡನೇ ದೊಡ್ಡ ವಿಪತ್ತು. ಸ್ವತಃ ಮೋದಿಯವರೆ ಕೊರೋನ ವಿರುದ್ಧ ಗೆದ್ದು ಬಿಟ್ಟಿದ್ದೇವೆಂದು ಹೇಳಿ ಜನ ಮೈಮರೆಯುವಂತೆ ಮಾಡಿ ಎರಡನೆ ಕೋವಿಡ್ ಅಲೆಯನ್ನು ಸೃಷ್ಟಿಸಿದ್ದು. ಜನರ ಸಾವಿರಾರು ಹೆಣಗಳು ನದಿಯಲ್ಲಿ ತೇಲಿ ಬಿಟ್ಟಿದ್ದು ಅಚ್ಚೇದಿನ್, ಆಕ್ಸಿಜನ್, ಔಷಧ ಸಿಗದೆ ಜನ ಮರಣ ಹೊಂದಿದ್ದು ಅಚ್ಚೇದಿನ್, ರೈತ, ಕಾರ್ಮಿಕ, ದೇಶ ವಿರೋಧಿ ಕಾನೂನುಗಳನ್ನು ತಂದಿದ್ದು ನಾಲ್ಕನೇ ವಿಪತ್ತು. ನಿರುದ್ಯೋಗ ಅತಿದೊಡ್ಡ ವಿಪತ್ತು, ದೇಶದ ಅಮೂಲ್ಯ ಆಸ್ತಿಗಳಾದ ಕಲ್ಲಿದ್ದಲು ಗಣಿಗಳು, ಕಾರ್ಖಾನೆಗಳು, ಸಂಸ್ಥೆಗಳು, ವಿಮಾನ ನಿಲ್ದಾಣ, ಬಂದರುಗಳನ್ನು ಖಾಸಗಿ ತಿಮಿಂಗಿಲಗಳಾದ ತಮ್ಮ ದೋಸ್ತರಿಗೆ ಬಿಟ್ಟುಕೊಟ್ಟಿದ್ದು ಮತ್ತು ಬೆಲೆ ಏರಿಕೆ ಭಾರತದ ಚರಿತ್ರೆಯ ಭೀಕರ ವಿಪತ್ತು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

2014ರಲ್ಲಿ ದೇಶದ ಎಂಟು ರಾಜ್ಯಗಳು ಮಾತ್ರ ವಿತ್ತೀಯ ಕೊರತೆ, ರಾಜಸ್ವ ಕೊರತೆಯನ್ನು ಎದುರಿಸುತ್ತಿದ್ದವು. ಆದರೆ, ಇಂದು ಎಲ್ಲ ರಾಜ್ಯಗಳೂ ದಿವಾಳಿಯಾಗುತ್ತಿವೆ. ರಾಜ್ಯಗಳು ದುರ್ಬಲವಾದರೆ, ದೇಶವೂ ದುರ್ಬಲವಾಗುತ್ತದೆ. ದೇಶದ ಪ್ರತಿಯೊಂದು ರಂಗವೂ ವಿಫಲವಾಗಿವೆ. ದೇಶದ 4.5 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಿದ್ದೇವೆ ಎಂದು ಪ್ರಧಾನಿಯವರು ಹೇಳಿದ್ದಾರೆ. ಎಲ್ಲಿ ಯಾವ ಊರಿಗೆ ಎಂದು ಬಿಜೆಪಿ ಲೆಕ್ಕ ಕೊಡಬೇಕು. ಅದರಲ್ಲಿ ರಾಜ್ಯಕ್ಕೆ ಎಷ್ಟು ಕೊಡಲಾಗಿದೆ ಎಂದು ಹೇಳಬೇಕು. ಆ ಯೋಜನೆ ಪ್ರಾರಂಭವಾಗಿದ್ದು ಯಾವಾಗ ಎಂದು ಹೇಳಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಘೋಷಣೆಯನ್ನೆ ಸಾಧನೆ ಎಂದು ಹೇಳುವುದಾದರೆ, ಬುಲೆಟ್ ರೈಲು, ಸ್ಮಾರ್ಟ್ ಸಿಟಿ, ಡಬಲ್ ದನ್ ಕಂ, ವರ್ಷಕ್ಕೆ ಎರಡು ಕೋಟಿ ಉದ್ಯೋಗ, 15 ಲಕ್ಷ ಪ್ರತಿಯೊಬ್ಬರ ಖಾತೆಗೆ, ಕಪ್ಪು ಹಣ ಜನರ ಜೇಬಿಗೆ ಇವೆಲ್ಲವುಗಳಿಂದ ಭಾರತ ಸ್ವರ್ಗ ಸಮಾನವಾಗಬೇಕಾಗಿತ್ತು. ಅದಾನಿ, ಅಂಬಾನಿಗಳ ಆದಾಯ ಈ ಮಟ್ಟಿಗೆ ಹೆಚ್ಚಾಗಲು ಕಾರಣ ಮೋದಿ ಸರಕಾರದ ಸೆಲ್ಫ್ ಸೇವೆಯೇ ಕಾರಣ ಎಂದು ದೂರಿದರು.

ಸರಕಾರ ಅವರಿಗೆ ಲೂಟಿ ಮಾಡಲು ಅವಕಾಶ ನೀಡಿದೆ. ತೊಗರಿ ಬೇಳೆ ವ್ಯಾಪಾರದಲ್ಲಿ ಅದಾನಿ ಕಂಪೆನಿಯ ಪಾಲು ದೊಡ್ಡದು. ಭಾರತದಲ್ಲಿ ಸುಮಾರು 50 ಮಿಲಿಯನ್ ಟನ್ ತೊಗರಿ ಬೇಳೆಯನ್ನು ಬಳಕೆ ಮಾಡುತ್ತಾರೆ. ಸರಾಸರಿ 30 ರೂ.ಹೆಚ್ಚಾದರೆ ದೊಡ್ಡ ಬಂಡವಾಳಿಗರಿಗೆ 1.5ಲಕ್ಷ ಕೋಟಿ ರೂ.ಲಾಭ ಬರುತ್ತದೆ. ಅಂಥದ್ದರಲ್ಲಿ ಕಳೆದ ಒಂದು ವರ್ಷದಿಂದೀಚೆಗೆ ಒಂದು ಕೆ.ಜಿ ತೊಗರಿ ಬೇಳೆಯ ಮೇಲೆ ಸರಾಸರಿ 100 ರೂ.ಗಳಷ್ಟು ಬೆಲೆ ಹೆಚ್ಚಾಗಿದೆ. ಆದರೆ, ಕಳೆದ ವರ್ಷ ಶೇ.16ರಷ್ಟು ಹೆಚ್ಚು ಉತ್ಪಾದನೆ ಆಗಿದೆ ಎಂದು ಸರಕಾರಗಳೇ ಹೇಳಿವೆ. ಹಾಗಾಗಿ ರೈತರಿಗೆ 5,500-6 ಸಾವಿರ ರೂ.ಮಾತ್ರ ಪ್ರತಿ ಕ್ವಿಂಟಾಲಿಗೆ ಸಿಕ್ಕಿದೆ. ಹಾಗಿದ್ದರೆ ರೈತರು ಬೆಳೆದು ಅಗ್ಗದ ದರಕ್ಕೆ ಮಾರಿದ ತೊಗರಿ ಬೇಳೆ, ಕಾಳುಗಳು, ಎಣ್ಣೆ ಬೀಜಗಳು ಎಲ್ಲಿ ಹೋದವು. ಇದೆಲ್ಲ ನೇರವಾಗಿ ಅದಾನಿ, ಅಂಬಾನಿಗಳ ಖಜಾನೆ ಸೇರುತ್ತಿವೆ ಎಂದು ವಿವರಿಸಿದರು. 
ಇದು ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ ಆದ ಅನಾಹುತ. ಅಡುಗೆ ಎಣ್ಣೆಯ ಬೆಲೆ 200ರೂ.ಮುಟ್ಟಿದೆ. 

2019ರಲ್ಲಿ ಸಣ್ಣ ಕುಟುಂಬವೊಂದು ಸರಾಸರಿ 5ಸಾವಿರ ರೂ.ಖರ್ಚು ಮಾಡುತ್ತಿದ್ದರೆ ಈ ವರ್ಷ 11ಸಾವಿರ ರೂ.ನಷ್ಟು ಖರ್ಚು ಮಾಡಬೇಕಾಗಿದೆ. ಅನೇಕ ಮನೆಗಳಲ್ಲಿ ಹೆಣ್ಣು ಮಕ್ಕಳು ತವರು ಮನೆಯವರು ಕೊಟ್ಟ ಸಣ್ಣಪುಟ್ಟ ವಡವೆಗಳನ್ನು ಮಾರಾಟ ಮಾಡಿ ಸಂಸಾರ ನಡೆಸುವಂಥ ಪರಿಸ್ಥಿತಿ ಬಂದಿದೆ. ದುಡಿಮೆ ಇಲ್ಲ. ಕೈಯಲ್ಲಿ ಕಾಸಿಲ್ಲ. ಬೆಲೆಗಳು ಆಕಾಶ ಮುಟ್ಟಿವೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

`ಜನರು ದುಡಿದ ಒಂದೊಂದು ರೂಪಾಯಿಯೂ ಅದಾನಿ, ಅಂಬಾನಿಗಳಿಗೆ ಸೇರುತ್ತಿದೆ. ದೇಶ ಹೇಗೆ ಅಭಿವೃದ್ಧಿ ಆಗುತ್ತದೆ? ಜನ ಹೇಗೆ ನೆಮ್ಮದಿಯಿಂದಿರಲು ಸಾಧ್ಯ? ಅದಕ್ಕೆ ಬಿಜೆಪಿಯವರ ಸಂಭ್ರಮ ದೇಶದ ಜನರದ್ದಲ್ಲ. ಅದು ಅದಾನಿ, ಅಂಬಾನಿಗಳದ್ದು. ಇನ್ನು ಸುಳ್ಳು ಹೇಳುವುದರಲ್ಲಿ ಟ್ರಂಪ್‍ನನ್ನೂ ಮೀರಿಸಿದ ಖ್ಯಾತಿ ನರೇಂದ್ರ ಮೋದಿಯವರಿಗಿದೆ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X