ವಿದೇಶದಲ್ಲಿ ವ್ಯಾಸಂಗ ಮಾಡಲು ಶೇ.94ರಷ್ಟು ವಿದ್ಯಾರ್ಥಿಗಳ ಆಸಕ್ತಿ: ಲೇವರೇಜ್ ಎಜು ಸಮೀಕ್ಷೆ
ಬೆಂಗಳೂರು, ಜೂ. 2: ವಿದೇಶದಲ್ಲಿ ವ್ಯಾಸಂಗ ಮಾಡಲು ಶೇಕಡ 94ರಷ್ಟು ಭಾರತೀಯ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ ಎನ್ನುವ ಅಂಶವು ಲೇವರೇಜ್ ಎಜು ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳು ವಿದೇಶಕ್ಕೆ ಪ್ರಯಾಣ ಬೆಳೆಸಲು ತುದಿಗಾಲಿನಲ್ಲಿದ್ದಾರೆ. 5 ತಿಂಗಳ ಅವಧಿಯಲ್ಲಿ ಲೇವರೇಜ್ ಎಜು ವೇದಿಕೆಯಲ್ಲಿ ನೋಂದಾಯಿಸಿದ್ದ ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದರ ಆಧಾರದ ಮೇಲೆ ಈ ಅಂಶವು ಬಹಿರಂಗಗೊಂಡಿದೆ.
ಸಮೀಕ್ಷೆಯ ಪ್ರಕಾರ ಶೇ.75ರಷ್ಟು ವಿದ್ಯಾರ್ಥಿಗಳು ಯುಕೆದಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಲು ಆಸಕ್ತಿ ಹೊಂದಿದ್ದಾರೆ. ಶೇ.13 ರಷ್ಟು ವಿದ್ಯಾರ್ಥಿಗಳು ಕೆನಡಾ ಮತ್ತು ಶೇ.9ರಷ್ಟು ವಿದ್ಯಾರ್ಥಿಗಳು ಯುಎಸ್ಗೆ ಹಾರಲು ಬಯಸುತ್ತಾರೆ. ಈ ದೇಶಗಳನ್ನು ಆಯ್ಕೆ ಮಾಡಲು ಕಾರಣ ವೈದ್ಯಕೀಯ ಸವಲತ್ತುಗಳು ಎಂದು ಗೊತ್ತಾಗಿದೆ.
ಶೇ.60 ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಸಾಲ ಪಡೆದು ವಿದ್ಯಾಭ್ಯಾಸ ಮಾಡಲು ಮುಂದಾಗಿದ್ದಾರೆ. ಶೇ.58ರಷ್ಟು ವಿದ್ಯಾರ್ಥಿಗಳು ಕೇವಲ 3 ತಿಂಗಳಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ನಿರ್ಧಾರ ಕೈಗೊಂಡರೆ ಮತ್ತೆ ಶೇ.36ರಷ್ಟು ವಿದ್ಯಾರ್ಥಿಗಳು ಬಹಳ ಮುಂಚಿತವಾಗಿಯೇ ಇದರ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ಸಮೀಕ್ಷೆಯ ಪ್ರಕಾರ ಶೇ.59ರಷ್ಟು ವಿದ್ಯಾರ್ಥಿಗಳು ತಾವು ಈಗಾಗಲೇ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶ ಬಿಟ್ಟು ಮತ್ತೊಂದು ದೇಶ ಆಯ್ಕೆ ಮಾಡಲು ನಿರಾಕರಿಸಿದರು. ಹಾಗೂ ಶೇ.28ರಷ್ಟು ವಿದ್ಯಾರ್ಥಿಗಳು ಯುಕೆಯನ್ನು ಆಯ್ಕೆ ಮಾಡಿಕೊಂಡರು.
ಎಲ್ಲ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ನಿರ್ಧಾರಕ್ಕೆ ಯುಕೆ ಅನ್ನು ಆಯ್ಕೆ ಮಾಡಿಕೊಂಡ 2/3ನೆ ಭಾಗದಷ್ಟು ವಿದ್ಯಾರ್ಥಿಗಳು ಉಪಯೋಗಕಾರಿ ಎಂದರು. ಶೇ.35 ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್/ಬಿಸಿನೆಸ್ ಅಧ್ಯಯನ ಪದವಿಗಳು ಅಚ್ಚುಮೆಚ್ಚಾದರೆ ಶೇ.18ರಷ್ಟು ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಪದವಿ ಅಚ್ಚುಮೆಚ್ಚಾಗಿದೆ.
ಯುಕೆ, ಯುಎಸ್ ಮತ್ತು ಇನ್ನಿತರ ಮುಂದುವರಿದ ದೇಶಗಳ ಸರಕಾರ ಪ್ರಯತ್ನ ಇದಾಗಿದೆ. ಉನ್ನತ ಶಿಕ್ಷಣ ಮತ್ತು ವಲಸೆ ನೀತಿಗಳಲ್ಲಿ ಬದಲಾವಣೆ ತಂದು ಇದನ್ನು ದೂರದ ದೇಶಗಳಿಗೆ ಸಂವಹನ ಮಾಡಿರುವುದು ಸ್ವಾಗತಾರ್ಹ. ಆರ್ಥಿಕ ಪ್ರಗತಿ ಬಗ್ಗೆ ಒಂದು ದೇಶದ ಚಿಂತನ ವಿಧಾನವನ್ನೇ ಕೊರೋನ ಕಾಯಿಲೆ ಬದಲಾಯಿಸಿದೆ. ಈ ಹಿಂದೆ ಅಮುಖ್ಯ ಎನ್ನುವ ವಿಷಯಗಳಾದ ಉಸಿರಾಡುವ ಗಾಳಿಯ ಗುಣಮಟ್ಟ, ವೈದ್ಯಕೀಯ ಮೂಲಸೌಕರ್ಯಕ್ಕೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಲೇವರೇಜ್ ಎಜು ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ ಅಕ್ಷಯ್ ಚತುರ್ವೇದಿ ಹೇಳಿದರು.
ನಾನು ಈ ವರ್ಷ ಯುಕೆಗೆ ಹಾರಬಲ್ಲೆ ಮತ್ತು ಯುಕೆ ಆಯ್ಕೆ ಮಾಡಲು ಇದು ನನ್ನ ಮುಖ್ಯ ಕಾರಣವಾಗಿದೆ. ನನ್ನ ಸಂಪರ್ಕತಡೆಯನ್ನು ಸೌಕರ್ಯಗಳಿಗಾಗಿ ನನ್ನ ವಿಶ್ವವಿದ್ಯಾಲಯವು ಪಾವತಿಸುತ್ತಿದೆ. ಎಎಸ್ಎಪಿಯಿಂದ ಹೊರಹೋಗಲು ಮತ್ತು ಕ್ಯಾಂಪಸ್ನಲ್ಲಿ ನನ್ನ ಅಧ್ಯಯನವನ್ನು ಪ್ರಾರಂಭಿಸಲು ನಾನು ಉತ್ಸುಕನಾಗಿದ್ದೇನೆ. ಮುಂಬರುವ ಅಕ್ಟೋಬರ್ನಲ್ಲಿ ಯುಕೆಗೆ ಹೋಗುತ್ತಿರುವ ವಿದ್ಯಾರ್ಥಿ ಅಭಿಜಿತ್ ಹೇಳಿದರು.
ತನ್ನ ನಿರೀಕ್ಷೆಗಳ ಬಗ್ಗೆ ಮಾತನಾಡುವಾಗ ಮತ್ತೊಬ್ಬ ವಿದ್ಯಾರ್ಥಿನಿ ಸುಭೋಶ್ರೀ, ನಾನು ಈ ವರ್ಷ ಮುಂದೆ ಹೆಜ್ಜೆ ಇಡಲು ಮಾನಸಿಕವಾಗಿ ಮತ್ತು ದೈಹಿಕವಾಗಿ ವೈಯಕ್ತಿಕವಾಗಿ ಸಿದ್ಧನಾಗಿದ್ದೇನೆ. ನಾನು ಯುಕೆ ಬಗ್ಗೆ ಸಾಕಷ್ಟು ಸಕಾರಾತ್ಮಕ ಅಂಶಗಳನ್ನು ಕೇಳಿದ್ದೇನೆ. ಇದಲ್ಲದೆ, ನನ್ನ ಎಲ್ಲ ಗೆಳೆಯರಿಗೆ ದೈಹಿಕ ವ್ಯವಸ್ಥೆಯಲ್ಲಿ ಲಸಿಕೆ ನೀಡಲಾಗುವುದು ಮತ್ತು ಅದು ನನಗೆ ಸುರಕ್ಷತೆಯ ಹೆಚ್ಚುವರಿ ಭಾವನೆಯನ್ನು ನೀಡುತ್ತದೆ ಎಂದು ಹೇಳಿದರು.







