ರಾಜ್ಯದಲ್ಲಿಂದು 364 ಕೊರೋನ ಸೋಂಕಿತರು ಮೃತ್ಯು: 16,068 ಪ್ರಕರಣಗಳು ದೃಢ

ಬೆಂಗಳೂರು, ಜೂ.4: ರಾಜ್ಯದಲ್ಲಿ ಶುಕ್ರವಾರ 16,068 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 364 ಜನರು ಸೋಂಕಿಗೆ ಬಲಿಯಾಗಿದ್ದು, 22,316 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 26,69,514ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 30,895ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 280186ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
364 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 206, ಬೀದರ್ 2, ಚಾಮರಾಜನಗರ 4, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 9, ದಾವಣಗೆರೆ 8, ಧಾರವಾಡ 4, ಗದಗ 3, ಹಾಸನ 9, ಹಾವೇರಿ 7, ಕಲಬುರಗಿ 6, ಕೋಲಾರ 10, ಕೊಪ್ಪಳ 6, ಮಂಡ್ಯ 2, ಮೈಸೂರು 18, ರಾಯಚೂರು 4, ರಾಮನಗರ 4, ಶಿವಮೊಗ್ಗ 8, ತುಮಕೂರು 6, ಉಡುಪಿ 3, ಉತ್ತರ ಕನ್ನಡ 9, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 16,068 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 208, ಬಳ್ಳಾರಿ 423, ಬೆಳಗಾವಿ 792, ಬೆಂಗಳೂರು ಗ್ರಾಮಾಂತರ 429, ಬೆಂಗಳೂರು ನಗರ 3,221, ಬೀದರ್ 19, ಚಾಮರಾಜನಗರ 296, ಚಿಕ್ಕಬಳ್ಳಾಪುರ 400, ಚಿಕ್ಕಮಗಳೂರು 595, ಚಿತ್ರದುರ್ಗ 702, ದಕ್ಷಿಣ ಕನ್ನಡ 806, ದಾವಣಗೆರೆ 620, ಧಾರವಾಡ 235, ಗದಗ 194, ಹಾಸನ 974, ಹಾವೇರಿ 100, ಕಲಬುರಗಿ 46, ಕೊಡಗು 388, ಕೋಲಾರ 304, ಕೊಪ್ಪಳ 299, ಮಂಡ್ಯ 526, ಮೈಸೂರು 1,265, ರಾಯಚೂರು 184, ರಾಮನಗರ 146, ಶಿವಮೊಗ್ಗ 636, ತುಮಕೂರು 857, ಉಡುಪಿ 561, ಉತ್ತರ ಕನ್ನಡ 559, ವಿಜಯಪುರ 190, ಯಾದಗಿರಿ ಜಿಲ್ಲೆಯಲ್ಲಿ 93 ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ 206 ಜನರು ಸಾವು
ರಾಜಧಾನಿಯಲ್ಲಿ ಶುಕ್ರವಾರದಂದು 3,221 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 206 ಜನರು ಮೃತಪಟ್ಟಿದ್ದಾರೆ. 6,220 ಸೋಂಕಿತರು ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 11,77,496 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 14,482 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 10,31,834 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.







