ಗೋಳಿಹೊಳೆ: ಸರಕಾರಿ ಜಮೀನು ಅತಿಕ್ರಮಣ ಪತ್ತೆ

ಉಡುಪಿ, ಜೂ. 7: ಬೈಂದೂರು ತಾಲೂಕಿನ ಬೈಂದೂರು- ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ 766-ಸಿ ಗೆ ಹೊಂದಿಕೊಂಡಿರುವ ಗೋಳಿಹೊಳೆ ಗ್ರಾಮದ ಹೆಲಿಪ್ಯಾಡ್ ಪಕ್ಕದಲ್ಲಿರುವ ಸ.ನಂ:310ರಲ್ಲಿ ಸುಮಾರು ಐದು ಎಕರೆ ಸರಕಾರಿ ಜಮೀನು ಅತಿಕ್ರಮಣ ಕೊಳ್ಳಲಾಗಿರುವುದನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಇತ್ತೀಚೆಗೆ ಬೈಂದೂರು ತಾಲೂಕಿಗೆ ಕೋವಿಡ್-19ರ ಸಂಬಂಧ ಭೇಟಿ ವೇಳೆ ಪತ್ತೆ ಹಚ್ಚಿದರು.
ಈ ಐದು ಎಕರೆ ಸರಕಾರಿ ಜಮೀನನ್ನು ಅತಿಕ್ರಮಿಸಿ ಅಲ್ಲಿರುವ ಬೆಲೆಬಾಳುವ ಮರ-ಮಟ್ಟುಗಳನ್ನು ನೆಲಸಮ ಮಾಡಿ, ಜಮೀನನ್ನು ಕಬಳಿಸಿರುವುದು ಕಂಡು ಬಂದಿದೆ. ಈ ಅತಿಕ್ರಮಣವನ್ನು ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೈಂದೂರು ತಹಶೀಲ್ದಾರರಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ
Next Story





