Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಿನ ಬೀದಿಗೆ ಬಿದ್ದ ತುಮಕೂರಿನ...

ಮಂಗಳೂರಿನ ಬೀದಿಗೆ ಬಿದ್ದ ತುಮಕೂರಿನ ಕುಟುಂಬಕ್ಕೆ ಆಸರೆ

‘ವಾರ್ತಾಭಾರತಿ’ಯ ವರದಿಗೆ ಸ್ಪಂದನೆ

ವಾರ್ತಾಭಾರತಿವಾರ್ತಾಭಾರತಿ7 Jun 2021 10:14 PM IST
share
ಮಂಗಳೂರಿನ ಬೀದಿಗೆ ಬಿದ್ದ ತುಮಕೂರಿನ ಕುಟುಂಬಕ್ಕೆ ಆಸರೆ

ಮಂಗಳೂರು, ಜೂ.7: ಕೊರೋನ-ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ನಗರದ ಲೇಡಿಗೋಶನ್ ಆಸ್ಪತ್ರೆ ಸಮೀಪ ಬೀದಿಗೆ ಬಿದ್ದಿದ್ದ ತುಮಕೂರಿನ ಕುಟುಂಬವೊಂದಕ್ಕೆ ಮಂಗಳೂರಿನ ‘ಟೀಂ ಬಿ ಹ್ಯೂಮನ್’ ತಂಡವು ಆಸರೆ ನೀಡಿದೆ.

ತುಮಕೂರಿನ ಸುಬ್ರಹ್ಮಣ್ಯ ಎಂಬವರು ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದರು. ಸ್ವಂತ ಮನೆಯೂ ಇರಲಿಲ್ಲ. ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದರು. ಮಂಗಳೂರಿನಲ್ಲೇನಾದರು ಕೆಲಸ ಸಿಕ್ಕೀತೋ ಎಂಬ ಆಸೆಯಲ್ಲಿರುವಾಗಲೇ ಪತ್ನಿಯ ಹೆರಿಗೆಯ ಅವಧಿಯೂ ಸಮೀಪಿಸಿತ್ತು. ಹಾಗೇ ಆ್ಯಂಬುಲೆನ್ಸ್‌ನಲ್ಲಿ ಪತ್ನಿ ಮತ್ತು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದ ಸುಬ್ರಹ್ಮಣ್ಯ ಮಂಗಳೂರು ತಲುಪಿದರು. ಪತ್ನಿಯನ್ನು ನಗರದ ಲೇಡಿಗೋಶನ್ ಆಸ್ಪತ್ರೆಗೂ ದಾಖಲಿಸಿದರು. ಅಲ್ಲಿ ಹೆಣ್ಣು ಮಗುವಿನ ಜನನವೂ ಆಯಿತು.

ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆದ ಬಳಿಕ ಮುಂದೇನು ಮಾಡಬೇಕು ಎಂದು ಸುಬ್ರಹ್ಮಣ್ಯರಿಗೆ ತಿಳಿಯಲಿಲ್ಲ. ಕೆಲಸ ಹುಡುಕಿದರೂ ಸಿಗಲಿಲ್ಲ. ಪತ್ನಿ, ಹಸುಗೂಸು ಮತ್ತು ಒಬ್ಬ ಮಗ, ಒಬ್ಬ ಮಗಳ ಸಹಿತ ಎಲ್ಲರೂ ಬೀದಿಗೆ ಬಿದ್ದರು. ಕನಿಷ್ಟ ಹಸುಗೂಸಿಗೆ ಸ್ನಾನ ಮಾಡಿಸಲು ಸಾಬೂನು ಖರೀದಿಸಲೂ ಕೂಡ ಸುಬ್ರಹ್ಮಣ್ಯರ ಕೈಯಲ್ಲಿ ಕಾಸಿರಲಿಲ್ಲ. ಯಾರೋ ಒಬ್ಬರು ಲಾಡ್ಜ್‌ವೊಂದರಲ್ಲಿ ಸುಬ್ರಹ್ಮಣ್ಯರ ಕುಟುಂಬಕ್ಕೆ ಆಶ್ರಯ ನೀಡುವ ಭರವಸೆ ನೀಡಿದರು. ಅದರಂತೆ ನಾಲ್ಕೈದು ದಿನ ಈ ಕುಟುಂಬ ಲಾಡ್ಜ್‌ನಲ್ಲಿತ್ತು. ಲಾಡ್ಜ್‌ನ ಬಾಡಿಗೆ ಪಾವತಿಸುವುದಾಗಿ ಹೇಳಿ ಹೋದ ವ್ಯಕ್ತಿ ರವಿವಾರವಾದರೂ ಪತ್ತೆಯಾಗದ ಕಾರಣ ಲಾಡ್ಜ್‌ನವರು ಸುಬ್ರಹ್ಮಣ್ಯರ ಕುಟುಂಬವನ್ನು ಸೋಮವಾರ ಬೆಳಗ್ಗೆ ಬೀದಿ ಪಾಲು ಮಾಡಿ ಬಿಟ್ಟಿದ್ದರು.

ಸೋಮವಾರ ಸಂಜೆಯ ವೇಳೆಗೆ ಈ ಕುಟುಂಬವು ‘ವಾರ್ತಾಭಾರತಿ’ಯ ತಂಡದ ಕಣ್ಣಿಗೆ ಬಿತ್ತು. ಸುಬ್ರಹ್ಮಣ್ಯ ತನ್ನ ಸಂಕಷ್ಟವನ್ನು ತೋಡಿ ಕೊಂಡದ್ದನ್ನು ‘ವಾರ್ತಾಭಾರತಿ’ಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು. ಕುಟಂಬದ ಕಣ್ಣೀರ ಕಥೆಯನ್ನು ವೀಕ್ಷಿಸಿದ ‘ವಾರ್ತಾಭಾರತಿ’ಯ ಓದುಗರು, ಸಾಮಾಜಿಕ ಸಂಘಟನೆಗಳ ಮುಖಂಡರು, ಚೈಲ್ಡ್‌ಲೈನ್‌ನ ಕಾರ್ಯಕರ್ತರು ಹೀಗೆ ಹಲವು ಮಂದಿ ತಕ್ಷಣ ನೆರವಿಗಾಗಿ ಧಾವಿಸಿದರು. ಅದರಂತೆ ಸದ್ಯ ಈ ಕುಟುಂಬಕ್ಕೆ ‘ಟೀಂ ಬಿ ಹ್ಯೂಮನ್’ನ ಮುಖ್ಯಸ್ಥ ಆಸೀಫ್ ಡೀಲ್ಸ್ ಆಸರೆ ಒದಗಿಸಿದ್ದಾರೆ. ‘ವಾರ್ತಾಭಾರತಿ’ಯ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

''ವಾರ್ತಾಭಾರತಿಯ ವರದಿಯನ್ನು ಗಮನಿಸಿದ ತಕ್ಷಣ ನಮ್ಮ ತಂಡದ ಸದಸ್ಯರು ಕುಟುಂಬ ಬೀದಿಗೆ ಬಿದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಅವರನ್ನು ಅದೇ ಲಾಡ್ಜ್‌ನಲ್ಲಿ ಉಳಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದೇವೆ. ಊಟ, ತಿಂಡಿ,  ಮತ್ತಿತರ ದಿನಬಳಕೆ ಸಾಮಗ್ರಿ, ವೈದ್ಯಕೀಯ ಇತ್ಯಾದಿ ನೆರವು ನೀಡಿದ್ದೇವೆ. ಒಂದೆರೆಡು ದಿನದಲ್ಲಿ ಈ ಕುಟುಂಬಕ್ಕೆ ಕುಲಶೇಖರದಲ್ಲಿ ವಸತಿ ಕಲ್ಪಿಸುವೆವು. ಅಲ್ಲದೆ ಸುಬ್ರಹ್ಮಣ್ಯರಿಗೆ ಕೆಲಸದ ವ್ಯವಸ್ಥೆಯನ್ನೂ ಮಾಡುವೆವು''.

- ಆಸೀಫ್ ಡೀಲ್ಸ್, ಮುಖ್ಯಸ್ಥರು, ಟೀಂ ಬಿ ಹ್ಯೂಮನ್ ಮಂಗಳೂರು

''ಬೀದಿ ಪಾಲಾದ ಸುಬ್ರಹ್ಮಣ್ಯರ ಕುಟುಂಬಕ್ಕೆ ನೆರವು ನೀಡುವುದಕ್ಕೆ ಸಂಬಂಧಿಸಿ ನಾನು ಟೀಂ ಬಿ ಹ್ಯೂಮನ್‌ನ ಮುಖ್ಯಸ್ಥರ ಜೊತೆ ನಿಕಟ ಸಂಪರ್ಕದಲ್ಲಿರುವೆ. ಸುಬ್ರಹ್ಮಣ್ಯ ಮತ್ತವರ ಪತ್ನಿಗೂ ಕೆಲಸ ಕೊಡಬೇಕಾಗಿದೆ. ಹಸುಗೂಸಿನ ಆರೈಕೆ ಮಾಡಬೇಕಿದೆ. ಇಬ್ಬರು ಮಕ್ಕಳಿಗೆ ಶಾಲಾ ಶಿಕ್ಷಣ ಕೊಡಿಸಬೇಕಿದೆ. ಆ ಕುಟುಂಬಕ್ಕೆ ಎಲ್ಲಾ ರೀತಿಯಲ್ಲೂ ಸಹಾಯ-ಸಹಕಾರ ನೀಡಲು ಟೀಂ ಬಿ ಹ್ಯೂಮನ್ ಜೊತೆ ನಾವು ಸಿದ್ಧರಿದ್ದೇವೆ''.

- ಜೋಸೆಫ್ ಕ್ರಾಸ್ತಾ, ಮುಖ್ಯಸ್ಥರು, ಸ್ನೇಹಾಲಯ ಮಂಜೇಶ್ವರ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X