Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 2019-20ರಲ್ಲಿ ಇಲೆಕ್ಟೋರಲ್ ಟ್ರಸ್ಟ್...

2019-20ರಲ್ಲಿ ಇಲೆಕ್ಟೋರಲ್ ಟ್ರಸ್ಟ್ ದೇಣಿಗೆಯಲ್ಲಿ ಬಿಜೆಪಿಗೆ ಸಿಂಹಪಾಲು: 276 ಕೋಟಿ ರೂ. ಸಂಗ್ರಹ

ವಾರ್ತಾಭಾರತಿವಾರ್ತಾಭಾರತಿ9 Jun 2021 1:42 PM IST
share
2019-20ರಲ್ಲಿ ಇಲೆಕ್ಟೋರಲ್ ಟ್ರಸ್ಟ್ ದೇಣಿಗೆಯಲ್ಲಿ ಬಿಜೆಪಿಗೆ ಸಿಂಹಪಾಲು: 276 ಕೋಟಿ ರೂ. ಸಂಗ್ರಹ

ಹೊಸದಿಲ್ಲಿ : ಏರ್‍ಟೆಲ್ ಸಮೂಹ ಮತ್ತು ಡಿಎಲ್‍ಎಫ್ ಲಿಮಿಟೆಡ್ ಸಹಿತ ಪ್ರಮುಖ ದೇಣಿಗೆ ನೀಡುವ ಸಂಸ್ಥೆಗಳಿರುವ ಪ್ರೂಡೆಂಟ್ ಇಲೆಕ್ಟೋರಲ್ ಟ್ರಸ್ಟ್ ಮೂಲಕ 2019-20ರಲ್ಲಿ ಸಂಗ್ರಹಿಸಲಾದ ರೂ 271.5 ಕೋಟಿ ದೇಣಿಗೆಯಲ್ಲಿ ಬಿಜೆಪಿ ಶೇ80ರಷ್ಟು ಸಿಂಹಪಾಲು ಪಡೆದಿದೆ ಎಂದು Timesofindia.com ವರದಿ ಮಾಡಿದೆ.

ವಿವಿಧ ಇಲೆಕ್ಟೋರಲ್ ಟ್ರಸ್ಟ್ ಗಳ ಮೂಲಕ ಆರ್ಥಿಕ ವರ್ಷ 2020ರಲ್ಲಿ  ಸಂಗ್ರಹಿಸಲಾದ ಒಟ್ಟು ದೇಣಿಗೆಯ ಪೈಕಿ ಬಿಜೆಪಿಗೆ ರೂ 276.45 ಕೋಟಿ  ದೊರಕಿದ್ದು ಇದರಲ್ಲಿ ಪ್ರೂಡೆಂಟ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 217.75 ಕೋಟಿ, ಜನಕಲ್ಯಾಣ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 45.95 ಕೋಟಿ ಹಾಗೂ ಬಿ ಬಿ ಜನರಲ್ ಇಲೆಕ್ಟೋರಲ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 9 ಕೋಟಿ ಹಾಗೂ ಸಮಾಜ ಇಲೆಕ್ಟೋರಲ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 3.75 ಕೋಟಿ ದೇಣಿಗೆ  ದೊರಕಿದೆ.

ಕಾಂಗ್ರೆಸ್ ಪಕ್ಷಕ್ಕೆ ದೊರೆತ ಪಾಲು ರೂ 58 ಕೋಟಿ ಆಗಿದ್ದರೆ ಇದರಲ್ಲಿ ಪ್ರೂಡೆಂಟ್ ಇಲೆಕ್ಟೋರಲ್ ಟ್ರಸ್ಟ್ ನ ರೂ 31 ಕೋಟಿ, ಜನಕಲ್ಯಾಣ್ ಟ್ರಸ್ಟ್ ನ ರೂ 25 ಕೋಟಿ ಹಾಗೂ ಸಮಾಜ್ ಟ್ರಸ್ಟ್ ನ ರೂ 2 ಕೋಟಿ ಸೇರಿದೆ.

ಆರ್ಥಿಕ ವರ್ಷ 2019-20ಗಾಗಿ ತಮ್ಮ ವಾರ್ಷಿಕ ಆಡಿಟ್  ವರದಿ ಸಲ್ಲಿಸಿದ 35 ಅಧಿಕೃತ ಪಕ್ಷಗಳ ಪೈಕಿ ಟಿಆರ್‍ಎಸ್ ಗರಿಷ್ಠ ಆದಾಯ-ರೂ 130.46 ಕೋಟಿ ಘೋಷಿಸಿದೆ.  ಶಿವ ಸೇನೆ ರೂ 111.4 ಕೋಟಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷ ರೂ 92.7 ಕೋಟಿ, ಬಿಜೆಪಿ ರೂ 90.35 ಕೋಟಿ, ಎಐಎಡಿಎಂಕೆ ರೂ 89.6 ಕೋಟಿ, ಡಿಎಂಕೆ ರೂ 64.90 ಕೋಟಿ ಹಾಗೂ ಎಎಪಿ ರೂ 49.65 ಕೋಟಿ ಆದಾಯ ಘೋಷಿಸಿವೆ. ಆರ್ಥಿಕ ವರ್ಷ 2019-20ರಲ್ಲಿ ಎಲ್ಲಾ ಮೂಲಗಳಿಂದ ಕಾಂಗ್ರೆಸ್ ಗಳಿಸಿದ ಆದಾಯ ರೂ 682 ಕೋಟಿಯಾಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದಾಗ ಶೇ25ರಷ್ಟು ಕಡಿಮೆಯಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಹೊರತುಪಡಿಸಿ ಪ್ರೂಡೆಂಟ್ ಟ್ರಸ್ಟ್ ರೂ 11.26 ಕೋಟಿ ಎಎಪಿ ಗೆ ರೂ 5 ಕೋಟಿ ಶಿವಸೇನೆಗೆ, ತಲಾ ರೂ 2 ಕೋಟಿ ಸಮಾಜವಾದಿ ಪಕ್ಷ  ಹಾಗೂ ಜನನಾಯಕ ಪಕ್ಷಕ್ಕೆ ತಲಾ ರೂ 1 ಕೋಟಿ, ಎಲ್‍ಜೆಪಿ ಹಾಗೂ ಶಿರೋಮಣಿ ಅಕಾಳಿ ದಳಕ್ಕೆ ಹಾಗೂ ರೂ 50 ಲಕ್ಷ ಇಂಡಿಯನ್ ನ್ಯಾಷನಲ್ ಲೋಕ್ ದಳಕ್ಕೆ ನೀಡಿದೆ.

ಪ್ರೊಗ್ರೆಸ್ಸಿವ್ ಇಲೆಕ್ಟೋರಲ್ ಟ್ರಸ್ಟ್‍ನ ವರದಿ ಲಭ್ಯವಿಲ್ಲ. ಜನಕಲ್ಯಾಣ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 70.95 ಕೋಟಿಯಲ್ಲಿ ಹೆಚ್ಚಿನ ದೇಣಿಗೆ ಜೆಎಸ್‍ಡಬ್ಲ್ಯು ಸಮೂಹದ್ದಾಗಿದ್ದು ಬಿಜೆಪಿಗೆ ರೂ 45.95 ಕೋಟಿ ಹಾಗೂ ಕಾಂಗ್ರೆಸ್ ಗೆ ರೂ 25 ಕೋಟಿ ದೇಣಿಗೆ ದೊರಕಿದೆ.

ಸಮಾಜ್ ಎಲೆಕ್ಟೋರಲ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 7.4 ಕೋಟಿಯಲ್ಲಿ ರೂ 3.75 ಕೋಟಿ ಬಿಜೆಪಿಯ ಜಮ್ಮು ಕಾಶ್ಮೀರ ಘಟಕ ಹಾಗೂ ರೂ 2 ಕೋಟಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿದೆ. ಎ ಬಿ ಜನರಲ್ ಟ್ರಸ್ಟ್ ಗೆ ದೇಣಿಗೆ ನೀಡಿದ ಏಕೈಕ ಸಂಸ್ಥೆ ಹಿಂಡಾಲ್ಕೊ ಆಗಿದ್ದು  ಒಟ್ಟು ರೂ 10 ಕೋಟಿ ಪೈಕಿ ರೂ  9 ಕೋಟಿ ಬಿಜೆಪಿಗೆ ಹಾಗೂ ರೂ 1 ಕೋಟಿ ಜಾರ್ಖಂಡ್ ಮುಕ್ತಿ ಮೋರ್ಚಾಗೆ ದೊರಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X