Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿದೇಶಿ ಫಂಡ್ ಗಳ ಸ್ತಂಭನ ವರದಿಗಳನ್ನು...

ವಿದೇಶಿ ಫಂಡ್ ಗಳ ಸ್ತಂಭನ ವರದಿಗಳನ್ನು ನಿರಾಕರಿಸಿದ್ದರೂ ಅದಾನಿ ಗ್ರೂಪ್ ನ ಮೂರು ಶೇರುಗಳಲ್ಲಿ ಶೇ.5 ಕುಸಿತ

ವಾರ್ತಾಭಾರತಿವಾರ್ತಾಭಾರತಿ15 Jun 2021 9:40 PM IST
share
ವಿದೇಶಿ ಫಂಡ್ ಗಳ ಸ್ತಂಭನ ವರದಿಗಳನ್ನು ನಿರಾಕರಿಸಿದ್ದರೂ ಅದಾನಿ ಗ್ರೂಪ್ ನ ಮೂರು ಶೇರುಗಳಲ್ಲಿ ಶೇ.5 ಕುಸಿತ

ಹೊಸದಿಲ್ಲಿ,ಜೂ.15: ಅದಾನಿ ಗ್ರೂಪ್ ನ 43,000 ಕೋ.ರೂ.ಗೂ ಹೆಚ್ಚಿನ ಮೌಲ್ಯದ ಶೇರುಗಳನ್ನು ಹೊಂದಿರುವ ಮೂರು ವಿದೇಶಿ ಫಂಡ್ ಗಳ ಖಾತೆಗಳನ್ನು ಸೋಮವಾರ ವರದಿಯಾಗಿದ್ದಂತೆ ಸ್ತಂಭನಗೊಳಿಸಿಲ್ಲ ಮತ್ತು ಅವು ಸಕ್ರಿಯವಾಗಿವೆ ಎಂದು ನ್ಯಾಷನಲ್ ಸೆಕ್ಯೂರಿಟಿಸ್ ಡಿಪೋಸಿಟರಿ ಲಿ.(ಎನ್ಎಸ್ಡಿಎಲ್) ಸ್ಪಷ್ಟೀಕರಣವನ್ನು ನೀಡಿದ್ದರೂ ಮಂಗಳವಾರ ಎರಡು ಶೇರುಗಳನ್ನು ಹೊರತುಪಡಿಸಿ ಗ್ರೂಪ್ ನ ಎಲ್ಲ ಶೇರುಗಳೂ ಬಾಂಬೆ ಶೇರು ವಿನಿಮಯ ಕೇಂದ್ರದಲ್ಲಿ ನಷ್ಟವನ್ನು ಅನುಭವಿಸಿವೆ.

ಮಂಗಳವಾರ ದಿನದ ವಹಿವಾಟು ಅಂತ್ಯಗೊಂಡಾಗ ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಎಂಟರ್ ಪ್ರೈಸಸ್ ನ ಶೇರುಗಳು ಅನುಕ್ರಮವಾಗಿ ಶೇ.2.79 ಮತ್ತು ಶೇ.2.45 ಗಳಿಕೆಯೊಂದಿಗೆ ಮುಕ್ತಾಯಗೊಂಡಿದ್ದರೆ, ಅದಾನಿ ಪೋರ್ಟ್ಸ್ ಶೇರು ಶೇ.0.94 ಕುಸಿತವನ್ನು ದಾಖಲಿಸಿದೆ. ಅದಾನಿ ಪವರ್,ಅದಾನಿ ಟ್ರಾನ್ಸ್‌ಮಿಷನ್ ಮತ್ತು ಅದಾನಿ ಟೋಟಲ್ ಗ್ಯಾಸ್ ನ ಶೇರುಗಳು ಅನುಕ್ರಮವಾಗಿ ಶೇ.4.97, ಶೇ.5 ಮತ್ತು ಶೇ.5ರಷ್ಟು ನಷ್ಟದಲ್ಲಿ ಮುಕ್ತಾಯಗೊಂಡು ಲೋವರ್ ಸರ್ಕ್ಯೂಟ್ ಲಿಮಿಟ್ನಲ್ಲಿ ಲಾಕ್ ಆಗಿವೆ.

ಶೇರು ವಿನಿಮಯ ಕೇಂದ್ರಗಳು ಪ್ರತಿ ಶೇರಿನ ಮಾರುಕಟ್ಟೆ ಬೆಲೆಯ ಶೇಕಡಾವಾರು ಪ್ರಮಾಣವನ್ನು ಲೋವರ್ ಮತ್ತು ಅಪ್ಪರ್ ಸರ್ಕ್ಯೂಟ್ ಲಿಮಿಟ್ ಎಂದು ನಿಗದಿಗೊಳಿಸುತ್ತವೆ ಮತ್ತು ದಿನದ ವಹಿವಾಟಿನಲ್ಲಿ ಈ ಶೇರುಗಳ ಬೆಲೆಗಳು ಈ ಮಿತಿಗಳ ನಡುವೆಯೇ ಬದಲಾಗುತ್ತಿರುತ್ತವೆ. ಶೇರಿನ ಬೆಲೆಯು ಯಾವುದೇ ಮಿತಿಯನ್ನು ತಲುಪಿದಾಗ ಸದ್ರಿ ಶೇರಿನಲ್ಲಿ ವಹಿವಾಟನ್ನು ನಿಗದಿತ ಸಮಯಕ್ಕೆ ಅಥವಾ ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗುತ್ತದೆ.
 
ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್ ಇವುಗಳ ಖಾತೆಗಳನ್ನು ಎನ್ಎಸ್ಡಿಎಲ್ ಸ್ಥಗಿತಗೊಳಿಸಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದ ಬಳಿಕ ಸೋಮವಾರ ಅದಾನಿ ಸಮೂಹದ ಶೇರುಗಳ ಬೆಲೆಗಳು ತೀವ್ರವಾಗಿ ಕುಸಿದಿದ್ದವು. ಈ ಮೂರೂ ವಿದೇಶಿ ಫಂಡ್ಗಳು ಅದಾನಿ ಗ್ರೂಪ್ನ ನಾಲ್ಕು ಕಂಪನಿಗಳ ಒಟ್ಟು 43,000 ಕೋ.ರೂ.ಮೌಲ್ಯದ ಶೇರುಗಳನ್ನು ಹೊಂದಿವೆ. ಖಾತೆಯನ್ನು ಸ್ತಂಭನಗೊಳಿಸಿದಾಗ ಫಂಡ್ಗಳಿಗೆ ಹಾಲಿ ತಮ್ಮ ಬಳಿಯಿರುವ ಶೇರುಗಳನ್ನು ಮಾರಾಟ ಮಾಡಲು ಅಥವಾ ಹೊಸ ಶೇರುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

ಸೋಮವಾರ ಅದಾನಿ ಗ್ರೂಪ್ ಕೂಡ ಸ್ಪಷ್ಟೀಕರಣ ನೀಡಿ ವರದಿಗಳು ತಪ್ಪು ಮಾಹಿತಿಗಳಿಂದ ಕೂಡಿವೆ ಎಂದು ತಿಳಿಸಿತ್ತಾದರೂ ಅದು ಸುಮಾರು 44,000 ಕೋ.ರೂ.ಗಳಷ್ಟು ಮಾರುಕಟ್ಟೆ ಬಂಡವಾಳೀಕರಣವನ್ನು ಕಳೆದುಕೊಂಡಿತ್ತು. ದಿನದ ವಹಿವಾಟಿನಲ್ಲಿ ದಶಕದಲ್ಲಿಯೇ ಅತ್ಯಂತ ಹೆಚ್ಚಿನ,ಶೇ.25ರಷ್ಟು ಕುಸಿತವನ್ನು ಕಂಡಿದ್ದ ಗ್ರೂಪ್ ನ ಮುಂಚೂಣಿ ಕಂಪನಿ ಅದಾನಿ ಎಂಟರ್ಪ್ರೈಸಸ್ ಶೇರುಗಳು ಬಳಿಕ ಚೇತರಿಸಿಕೊಂಡು ಶೆ.6.3ರಷ್ಟು ನಷ್ಟದೊಡನೆ ಅಂತ್ಯಗೊಂಡಿದ್ದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X