ಎಚ್.ಹುಸೇನ್ ಸಾಹೇಬ್

ಬ್ರಹ್ಮಾವರ, ಜೂ.24: ಇಲ್ಲಿಗೆ ಹೊನ್ನಾಳದ ಎಚ್. ಹುಸೇನ್ ಸಾಹೇಬ್ (69) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಬ್ರಹ್ಮಾವರದಲ್ಲಿ 40 ವರ್ಷಗಳಿಂದ ಬ್ರಹ್ಮಾವರದಲ್ಲಿ ಹೊನ್ನಾಳ ಬಸ್ನ ಎಜೆಂಟ್ ಆಗಿ ಅವರು ಸಾರ್ವಜನಿಕವಾಗಿ ಜನಾನುರಾಗಿಯಾಗಿದ್ದರು.
ಇವರ ಸೇವಾ ಮನೋಭಾವವನ್ನು ಗುರುತಿಸಿ ಬ್ರಹ್ಮಾವರ ಶ್ರೀಶಾರದೋತ್ಸವ ಸಮಿತಿ, ಶ್ರೀಗಣೇಶೋತ್ಸವ ಸಮಿತಿ, ರೋಟರಿ- ಲಯನ್ಸ್ ಕ್ಲಬ್ಗಳಿಂದ ಸಾರ್ವಜನಿಕವಾಗಿ ಸನ್ಮಾನಿತರಾಗಿದ್ದರು. ಹುಸೇನ್ ಸಾಹೇಬ್ ಅವರು ಪತ್ನಿ, ಮೂರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story





