Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ28 Jun 2021 12:10 AM IST
share
ಓ ಮೆಣಸೇ...

ಆರ್ಥಿಕ ಅಪರಾಧ ಎಸಗಿ ದೇಶಬಿಟ್ಟು ಪರಾರಿಯಾಗಿರುವವರನ್ನು ಬೆನ್ನಟ್ಟಲಾಗುತ್ತಿದೆ - ನಿರ್ಮಾಲಾ ಸೀತಾರಾಮನ್, ಕೇಂದ್ರ ಸಚಿವೆ
ನಿಮ್ಮ ಶಕ್ತಿ ಸಾಮರ್ಥ್ಯಗಳೆಲ್ಲ ಸರಕಾರದ ವಿಮರ್ಶಕರನ್ನು ಬೇಟೆಯಾಡುವುದರಲ್ಲಿ ತೊಡಗಿರುವಾಗ ಬೇರೆ ಕೆಲಸಗಳಿಗೆ ಸಮಯವೆಲ್ಲಿದೆ?


ಬಿಜೆಪಿಯಲ್ಲಿ ಮೂಲ, ವಲಸಿಗರೆಂಬುದಿಲ್ಲ, ಒಮ್ಮೆ ಹೊಸಿಲಿಗೆ ಮೊಳೆ ಹೊಡೆದು ಸೊಸೆಯನ್ನು ಒಳ ಕರೆದುಕೊಂಡರೆ ಆಕೆ ಮಗಳಿದ್ದಂತೆ - ಬಿ.ಸಿ.ಪಾಟೀಲ್, ಸಚಿವ
ಎಲ್ಲರೂ ಹೊಲಸಿನಲ್ಲೇ ಮುಳುಗಿರುವಾಗ ಮತ್ತೆ ತಾರತಮ್ಯದ ಅಗತ್ಯವೇ ಏನಿದೆ?


ಮಾಜಿ ಸಚಿವ ಝಮೀರ್ ಅಹಮದ್ ಒಬ್ಬ ಗುಜರಿ ಗಿರಾಕಿ - ಎಂ.ಪಿ.ರೇಣುಕಾಚಾರ್ಯ, ಸಿಎಂ ಕಾರ್ಯದರ್ಶಿ
ನಿಮ್ಮನ್ನು ಖರೀದಿಸಲು ಬಂದಿದ್ದರೇ?


ರಾಹುಲ್ ಗಾಂಧಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಶಕ್ತಿಯನ್ನು ತೋರಿಸಬಲ್ಲ ಧೀಮಂತ ನಾಯಕ - ಅಭಯ್‌ಚಂದ್ರಜೈನ್, ಮಾಜಿ ಸಚಿವ
ಈ ಬಾರಿ ಒಲಿಂಪಿಕ್ಸ್‌ಗೆ ಕಳುಹಿಸೋಣವೇ?


ಬ್ರಹ್ಮ ಬಂದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮಂಥವರು ಹೀಗೆಲ್ಲಾ ಹತಾಶೆಯ ಮಾತುಗಳನ್ನಾಡಿದರೆ ಕಾಂಗ್ರೆಸ್‌ನಲ್ಲಿ ಆಶಾವಾದ ಚಿಗುರದೆ ಇರುತ್ತದೆಯೇ?


ದೇಶದಲ್ಲಿ ಹಲವು ಕಾಂಗ್ರೆಸ್‌ಗಳಿವೆ. ಈ ರಾಜ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯರ ಮತ್ತೆರಡು ಕಾಂಗ್ರೆಸ್ ಹುಟ್ಟಿಕೊಳ್ಳಲಿದೆ - ಆರ್.ಅಶೋಕ್, ಸಚಿವ
ನೀವು ಯಾವ ಕಾಂಗ್ರೆಸ್ ಸೇರಲಿದ್ದೀರಿ?


ನಮ್ಮ ತ್ಯಾಗದಿಂದಲೇ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಚನೆಯಾಗಿರುವುದು - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಈಗ ಆ ಸರಕಾರ ಅಲುಗಾಡುತ್ತಿರುವುದು ನಿಮ್ಮ ಅದೇ ತ್ಯಾಗದಿಂದ ತಾನೇ?


ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಕರ್ನಾಟಕಕ್ಕೆ ಬಂದು ಹೋದದ್ದು ‘ಬಂದ ಪುಟ್ಟಾ - ಹೋದ ಪುಟ್ಟಾ’ ಎಂಬಂತಾಗಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ನಿಮ್ಮನ್ನು ನಿರಾಶೆ ಮಾಡಿ ಹೋದರೇ?


ನಾನು ಬುದ್ಧಿಜೀವಿಗಳನ್ನು ಧ್ವಂಸ ಮಾಡಲೆಂದೇ ಹುಟ್ಟಿದವಳು - ಕಂಗನಾ ರಣಾವತ್, ನಟಿ
ನಿಮ್ಮ ಅಕ್ರಮ ಕಟ್ಟಡ ಧ್ವಂಸ ಮಾಡಿರುವುದು ಬುದ್ಧಿ ಜೀವಿಗಳೇ?


ಪ್ರಧಾನಿ ಮೋದಿ ಪೌರುಷವಿಲ್ಲದ ಉತ್ತರ ಕುಮಾರನಂತೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿZA
ಪ್ರಶ್ನೆಗಳಿಗೆ ಉತ್ತರವೇ ಇಲ್ಲದ ಉತ್ತರ ಕುಮಾರ


ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ - ಝಮೀರ್ ಅಹಮದ್, ಶಾಸಕ
ಕರ್ನಾಟಕಕ್ಕೆ ಯಾರು?


ರಾಮನ ಹೆಸರು ಹೇಳುವವರ ಪಕ್ಷದಲ್ಲಿ ರಾಮಾಯಣ, ಮಹಾಭಾರತ ಎಲ್ಲವೂ ನಡೆಯುತ್ತಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕನಿಷ್ಠ ಆ ಪಕ್ಷ ನಡೆಯುತ್ತಾ ಇದೆ. ನೀವು ಪೂರ್ತಿ ಮಲಗಿದ್ದೀರಲ್ಲ?


ಸುಧಾರಣೆ ಎನ್ನುವುದು ತ್ಯಾಗದಿಂದ ಬರುತ್ತದೆಯೇ ಹೊರತು ಏಕಾಏಕಿ ನಾಯಕತ್ವ ಪ್ರಶ್ನೆಮಾಡುವುದರಿಂದಲ್ಲ - ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ
ತಾವೇಕೆ ಪಕ್ಷವನ್ನು ತ್ಯಾಗ ಮಾಡಿ ನೋಡ ಬಾರದು?


ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವೆಂದು ಬೋರ್ಡ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಮಗೆ ಬಂದಿದೆ - ಜಗದೀಶ್ ಶೆಟ್ಟರ್, ಸಚಿವ
ತಕ್ಷಣ ಸ್ಥಾನವನ್ನು ಖಾಲಿ ಮಾಡಿ ಎಂದು ಕೆಲವರು ಬೋರ್ಡ್ ಹಾಕಿಕೊಂಡು ದಿಲ್ಲಿಯಲ್ಲಿ ಓಡಾಡುತ್ತಿದ್ದಾರಂತೆ.


ಯೋಗದಿಂದ ಜಗತ್ತಿನ ಎಲ್ಲ ದೇಶಗಳು ಒಂದೇ ಕುಟುಂಬ ಆಗುವ ಅವಕಾಶವಿದೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ನಿಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಅದನ್ನು ಸಾಬೀತುಪಡಿಸಬಲ್ಲಿರಾ?


ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಯುವ ಸ್ಥಿತಿ ಇದೆ - ಆರ್.ಅಶೋಕ್, ಸಚಿವ
ನಿಮ್ಮ ಸರಕಾರದ ಮುಖ್ಯಮಂತ್ರಿ ಹುದ್ದೆಗೆ ಅವರ ಅಭ್ಯರ್ಥಿಗಳೂ ಇದ್ದಾರೇನು?


ಸಿಎಂ ಯಡಿಯೂರಪ್ಪ ಸ್ಟಾರ್ ಲೀಡರ್, ಅವರಿಲ್ಲದೆ ಪಕ್ಷ ಮುನ್ನಡೆಸುವುದು ಕಷ್ಟ - ಎಂ.ಪಿ.ಕುಮಾರಸ್ವಾಮಿ, ಶಾಸಕ
ಹೌದು ಕಾರ್ಗತ್ತಲಲ್ಲಿ ಇರುವವರು ಸ್ಟಾರ್‌ಗಳಿಂದಲೇ ಮಾರ್ಗದರ್ಶನ ಪಡೆಯಬೇಕಾಗುತ್ತದೆ.


ಮೋಡ ಸೂರ್ಯನನ್ನು ಮರೆಮಾಚಲು ಸಾಧ್ಯವೇ? ಮರೆ ಮಾಚಿದರೂ ಕೆಲಕಾಲ ಮಾತ್ರ - ಸಿ.ಟಿ.ರವಿ, ಶಾಸಕ
ನಿಮ್ಮನ್ನು ಬಲ್ಲವರೆಲ್ಲ ನಿಮ್ಮನ್ನೇ ಮೋಡಕ್ಕೆ ಹೋಲಿಸಲು ಕಾರಣ?


ಅಫ್ಘಾನಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿದೆ - ಎಸ್.ಜೈಶಂಕರ್, ಕೇಂದ್ರ ಸಚಿವ
ಅಲ್ಲೂ ಅವರು ಸಂಸದರಾಗುತ್ತಿದ್ದಾರೆಯೇ?


ಯೋಗದ ಮೂಲ ಭಾರತ ಅಲ್ಲ, ನೇಪಾಳ -ಕೆ.ಪಿ.ಶರ್ಮಾ ಬಲಿ, ನೇಪಾಳದ ಹಂಗಾಮಿ ಪ್ರಧಾನಿ
ನೀವು ಹಾಗೆಲ್ಲ ಹೇಳಿದರೆ, ನೇಪಾಳ ಭಾರತದ ಅವಿಭಾಜ್ಯ ಅಂಗ ಎಂಬ ಅಭಿಯಾನ ಆರಂಭವಾದೀತು.


ಕಾಂಗ್ರೆಸ್‌ನಲ್ಲಿ ಈಗ ಮ್ಯೂಸಿಕಲ್ ಚೇರ್ ಆಟ ಆರಂಭವಾಗಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಆ ವಿಷಯವು ನೀವು ಜಗತ್ತಿಗೆ ತಿಳಿಸಬೇಕಾದಷ್ಟು ಗುಟ್ಟಿನಲ್ಲಿದ್ದರೆ ಅದು ಚಿಂತಾಜನಕ ವಿಷಯವೇನಲ್ಲ.


ಗೋತ್ರಗಳ ಆಧಾರದಲ್ಲಿ ಗೋತಳಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ - ಪ್ರಭು ಚವ್ಹಾಣ್, ಸಚಿವ
ಅಲ್ಲೂ ಕುಲ ಮಹಿಮೆಯ ಚರ್ಚೆ ಆರಂಭಿಸಲಿದ್ದೀರಾ?


ತುಳುವಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆಯನ್ನು ಬೆಂಬಲಿಸುವುದಿಲ್ಲ - ಶೋಭಾ ಕರಂದ್ಲಾಜೆ, ಸಂಸದೆ
ತುಳುವರಿಗೆ ಎಂಆರ್‌ಪಿಎಲ್‌ನಲ್ಲಿ ಉದ್ಯೋಗದ ಬೇಡಿಕೆಯನ್ನಾದರೂ ಬೆಂಬಲಿಸಬಹುದಲ್ಲ?


ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿದ್ದಾರೆ - ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡ
ಕಾಲು ಮಾತ್ರ ಅಲ್ಲ, ಪಂಚೆ, ಚಡ್ಡಿ ಎಲ್ಲ ಎಳೆಯುತ್ತಿರುವ ಸುದ್ದಿಗಳು ಬರುತ್ತಿವೆ.


ಭಾರತ ಟೆಸ್ಟ್ ತಂಡಕ್ಕೆ ಸರಿಯಾದ ಮನಸ್ಥಿತಿಯ ಸರಿಯಾದ ಆಟಗಾರರ ಅಗತ್ಯವಿದೆ - ವಿರಾಟ್‌ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ
ಆಟಗಾರರಿಗೆ ಕ್ರಿಕೆಟ್ ಆಟದ ಬಗ್ಗೆಯೂ ಒಂದಿಷ್ಟು ಜ್ಞಾನ ಇದ್ದರೆ ಒಳ್ಳೆಯದಲ್ಲವೇ?


ಮುಂದಿನ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನು ಅಥವಾ ನನ್ನ ಮಕ್ಕಳೇ ಚುನಾವಣೆಗೆ ಸ್ಪರ್ಧಿಸುತ್ತೇವೆ- ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಇದುವೇ ನಿಮ್ಮ ಸಂಸ್ಕೃತಿಯಾಗಿದ್ದರೆ ಮತ್ತೆ ಚುನಾವಣೆಯೆಲ್ಲಾ ಯಾತಕ್ಕೆ? ನೇರವಾಗಿ ಪಟ್ಟಾಭಿಷೇಕವನ್ನೇ ಏರ್ಪಡಿಸಬಹುದಲ್ಲ?


ನಾನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದೇನೆಯೇ ಎಂಬುದನ್ನು ಸಂದರ್ಭ ಬಂದಾಗ ಹೇಳುತ್ತೇನೆ - ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಮುಖಂಡ
ನೀವು ಸ್ಪರ್ಧೆಯಲ್ಲಿ ಇಲ್ಲ ಎಂದು ಗೊತ್ತಾಗಿ ಬಿಟ್ಟರೆ ರಾಜ್ಯಕ್ಕೇ ಹೃದಯಾಘಾತವಾದೀತು.

share
ಪಿ.ಎ.ರೈ
ಪಿ.ಎ.ರೈ
Next Story
X