ಅಲ್ ಮದೀನ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿಯ ಮಹಾಸಭೆ
ಮಂಗಳೂರು, ಜೂ.29: ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ಝೂಂ ಆ್ಯಪ್ ನಲ್ಲಿ ಆನ್ ಲೈನ್ ಮೂಲಕ ನಡೆಯಿತು. ಅಲ್ ಮದೀನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೈಯದ್ ಇಸ್ಮಾಯೀಲ್ ಅಲ್ ಹಾದಿ ತಂಙಳ್ ಉಜಿರೆ ದುಆ ನೆರವೇರಿಸಿದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಹಾಜಿ ಎನ್.ಎಸ್.ಅಬ್ದುಲ್ಲ (ಗೌರವಾಧ್ಯಕ್ಷರು), ಅಬ್ದುಲ್ ರಹಿಮಾನ್ ಮದನಿ ಉರ್ನಿ- ಪೊಯ್ಯತ್ತಬೈಲ್ (ಅಧ್ಯಕ್ಷರು), ಇಬ್ರಾಹೀಂ ಪಡಿಕ್ಕಲ್ (ಪ್ರ. ಕಾರ್ಯದರ್ಶಿ), ಇಬ್ರಾಹೀಂ ದೀರಃ ( ಆರ್ಥಿಕ ಕಾರ್ಯದರ್ಶಿ), ಕೆ.ಪಿ.ಅಬ್ದುಲ್ಲ ಪುತ್ತುಂಞಿ ಹಾಜಿ, ಸ್ವಾಲಿಹ್ ಬೆಳ್ಳಾರೆ (ಉಪಾಧ್ಯಕ್ಷರು), ಬಶೀರ್ ತೋಟಾಲ್, ಮುಸ್ತಫ ಲತೀಫಿ ( ಜೊತೆ ಕಾರ್ಯದರ್ಶಿಗಳು), ಅಬ್ದುಲ್ಲತೀಫ್ ಬಾಬಾ( ಸಂಘಟನಾ ಕಾರ್ಯದರ್ಶಿ), ಇಕ್ಬಾಲ್ ಮಲ್ಲೂರು, ಮುಹಮ್ಮದ್ ಮಲೆಬೆಟ್ಟು (ಸಲಹೆಗಾರರು).
ಎಂಕೆಎಂ ಮದನಿ ಚುನಾವಣಾಧಿಕಾರಿಯಾಗಿ ಸಹಕರಿಸಿದರು. ಕೇಂದ್ರ ಸಮಿತಿಯ ಕೋಶಾಧಿಕಾರಿ ಮಜೀದ್ ಹಾಜಿ, ಹಾಜಿ ಎನ್. ಎಸ್. ಅಬ್ದುಲ್ ಕರೀಂ, ಹಾಜಿ ಪಿ. ಎಸ್.ಇಸ್ಮಾಯೀಲ್ ಮುಖ್ಯ ಅತಿಥಿಗಳಾಗಿದ್ದರು.
ಹಾಜಿ ಎನ್.ಎಸ್.ಅಬ್ದುಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ಸ್ವಾಗತಿಸಿ ವರದಿ ಮತ್ತು ಲೆಕ್ಕಪತ್ರ ವಾಚಿಸಿದರು.