ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಮುನ್ಸೂಚನೆ: ವೈ.ಎಸ್.ವಿ.ದತ್ತ

ಬೆಂಗಳೂರು, ಜೂ.29: ಕನ್ನಡ ಕೇಂದ್ರಿತ ರಾಜಕಾರಣ ಎಂದರೆ ಕನ್ನಡ ವಿಚಾರದಲ್ಲಿ ರಾಜಕೀಯವಲ್ಲ. ಬದಲಿಗೆ ಕನ್ನಡದ ಶ್ರೇಯೋಭಿವೃದ್ಧಿಗಾಗಿನ ಹೋರಾಟದ ರಾಜಕಾರಣ. ಈ ವಿಚಾರದಲ್ಲಿ ಎಚ್ಡಿಕೆ ಸ್ಪಷ್ಟ ಹೆಜ್ಜೆ ಇಟ್ಟಿದ್ದಾರೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಆಗುತ್ತಿರುವ ಹಾನಿಯನ್ನು ಚರ್ಚಿಸಲು ಅಧಿವೇಶನ ಕರೆಯಲು ಆಗ್ರಹಿಸಿದ್ದು, ಕೇರಳ ಪ್ರಕರಣ ಅದಕ್ಕೆ ತಾಜಾ ಉದಾಹರಣೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಟ್ವೀಟ್ ಮಾಡಿದ್ದಾರೆ.
ಕಾಸರಗೋಡಿನ ಗ್ರಾಮಗಳ ಹೆಸರಿನ ಮಲಯಾಳೀಕರಣ ಇಲ್ಲ ಎಂದು ಕೇರಳ ಸ್ಪಷ್ಟನೆ ನೀಡಿದೆ. ಮಲಯಾಳಿಕರಣದ ಸಣ್ಣ ಸುಳಿವು ಸಿಗುತ್ತಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಎಚ್.ಡಿ.ಕೆ. ಒತ್ತಡಕ್ಕೆ ಕೇರಳ ಮಣಿದಂತಿದೆ. ಎಚ್.ಡಿ.ಕೆ. ‘ಕನ್ನಡ ಕೇಂದ್ರಿತ’ ರಾಜಕಾರಣ ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ಮೂನ್ಸೂಚನೆ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Next Story





