Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೂರ್ವ ಲಡಾಖ್ ಬಿಕ್ಕಟ್ಟು:...

ಪೂರ್ವ ಲಡಾಖ್ ಬಿಕ್ಕಟ್ಟು: ಫೆಬ್ರವರಿಯಲ್ಲಿ ಭಾರತ-ಚೀನಾ ಸೇನಾ ಠಾಣೆಗಳ ಮಧ್ಯದ ಅಂತರ ಕೇವಲ 150 ಮೀಟರ್ !

ಗೂಗಲ್ ಆರ್ಥ್ ಉಪಗ್ರಹ ಚಿತ್ರಗಳಿಂದ ಬೆಳಕಿಗೆ

ವಾರ್ತಾಭಾರತಿವಾರ್ತಾಭಾರತಿ29 Jun 2021 9:33 PM IST
share
ಪೂರ್ವ ಲಡಾಖ್ ಬಿಕ್ಕಟ್ಟು: ಫೆಬ್ರವರಿಯಲ್ಲಿ ಭಾರತ-ಚೀನಾ ಸೇನಾ ಠಾಣೆಗಳ ಮಧ್ಯದ ಅಂತರ ಕೇವಲ 150 ಮೀಟರ್ !

ಹೊಸದಿಲ್ಲಿ,ಜೂ.29: ಪೂರ್ವ ಲಡಾಖ್ ನ ದಕ್ಷಿಣ ಪ್ಯಾಂಗೊಂಗ್ ಬೆಟ್ಟಗಳಲ್ಲಿ ಬೀಡುಬಿಟ್ಟಿದ್ದ ಭಾರತೀಯ ಹಾಗೂ ಚೀನಿ ಸೈನಿಕರು ಹಿಂದೆ ಸರಿಯಲಾರಂಭಿಸಿದ ಮರು ದಿನ ಅಂದರೆ ಫೆಬ್ರವರಿ 11ರಂದು ತೆಗೆಯಲಾದ ಉಪಗ್ರಹ ಚಿತ್ರಗಳಲ್ಲಿ ಭಾರತೀಯ ಹಾಗೂ ಚೀನಿ ಸೇನಾ ಠಾಣೆಗಳು ಪರಸ್ಪರ ಅಂದಾಜು 150 ಮೀಟರ್ ಅಂತರಲ್ಲಿ ಇರುವುದು ಕಂಡುಬಂದಿದ್ದು, ಸಂಘರ್ಷಾವಸ್ಥೆಯ ಸಂದರ್ಭದಲ್ಲಿ ಎರಡೂ ದೇಶಗಳ ಸೇನಾ ಜಮಾವಣೆಯ ಎಷ್ಟು ದಟ್ಟವಾಗಿತ್ತೆಂಬುದಕ್ಕೆ ಸಾಕ್ಷಿಯಾಗಿದೆ.

     
ದಕ್ಷಿಣ ಪ್ಯಾಂಗೊಂಗ್ನ ರೆಝಾಂಗ್ ಲಾ ಪ್ರದೇಶದಲ್ಲಿ 17 ಸಾವಿರ ಅಡಿ ಎತ್ತರದಲ್ಲಿ ಸೈನಿಕರು ಟೆಂಟ್ಗಳನ್ನು ಹಾಗೂ ವಸತಿಗಳನ್ನು ಸ್ಥಾಪಿಸಿರುವುದನ್ನು ಗೂಗ್ಲ್ ಅರ್ಥ್ ಪ್ರೊನಲ್ಲಿ ಅಪ್ಡೇಟ್ ಮಾಡಲಾದ ಛಾಯಾಚಿತ್ರಗಳು ತೋರಿಸಿವೆ. ಕೆಲವು ಕಡೆಗಳಲ್ಲಿ ಇತ್ತಂಡಗಳ ಸೇನಾ ನೆಲೆಗಳು ಇನ್ನಷ್ಟು ಸಮೀಪದಲ್ಲಿದ್ದವು ಎಂದು ಭಾರತೀಯ ಸೇನಾಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.
   
‘‘ ಕೈಲಾಸ್ ಪರ್ವತದುದ್ದಕ್ಕೂ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಎರಡೂ ಕಡೆಗಳ ಟ್ಯಾಂಕ್‌ಗಳು ಪರಸ್ಪರ 50 ಮೀಟರ್ ದೂರದಲ್ಲಿದ್ದವು’’ ಎಂದು ಸೇನಾಮೂಲವೊಂದು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
     
ಎರಡು ಪ್ರಮುಖ ಭಾರತೀಯ ಸೇನಾ ನೆಲೆಗಳಲ್ಲಿ ಡಜನ್‌ಗಳಷ್ಟು ಟೆಂಟ್‌ಗಳು ಎಲ್ಎಸಿ ಸಮೀಪದಲ್ಲಿ ಸ್ಥಾಪನೆಯಾಗಿರುವುದನ್ನು ಗೂಗಲ್ ಅರ್ಥ್ ತೋರಿಸಿದೆ. ಭಾರತೀಯ ಸೈನಿಕರನ್ನು ಕೇವಲ ಭಾರತದ ಭಾಗದ ಗಡಿನಿಯಂತ್ರಣರೇಖೆಯ ವ್ಯಾಪ್ತಿಯೊಳಗೆ ಮಾತ್ರ ನಿಯೋಜಿಸಲಾಗಿದೆಯೆಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಗರಿಷ್ಠ ಸಂಖ್ಯೆಯಲ್ಲಿ ಭಾರತೀಯ ಯೋಧರನ್ನು ನಿಯೋಜಿಸಲಾಗಿರುವ ರೆಝಾಂಗ್ ಲಾ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನೆಲೆಗಳು 15,400-17000 ಅಡಿ ಎತ್ತರಲ್ಲಿ ಸ್ಥಾಪನೆಯಾಗಿದ್ದವು.
  ‌
ಚೀನಿ ಪಡೆಗಳು ಸ್ಪಾಂಗ್ಗೂರ್ ಸರೋವರದ ದಂಡೆಯ 10 ಕಿ.ಮೀ. ಉದ್ದಕ್ಕೂ ಚೀನಿ ಪಡೆಗಳು ಬೀಡುಬಿಟ್ಟಿದ್ದುದನ್ನು ಗೂಗಲ್ ಅರ್ಥ್ನ ಚಿತ್ರಗಳು ತೋರಿಸಿವೆ. ಚೀನಾ ಕೂಡಾ ಫಿರಂಗಿ ನೆಲೆಗಳು ಮತ್ತು ಸೇನಾ ಮೂಲ ಸೌಕರ್ಯಗಳು ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿರುವುದನ್ನು ಕೂಡಾ ನೂತನ ಉಪಗ್ರಹ ಚಿತ್ರಗಳು ತೋರಿಸಿವೆ.
   
ಕಳೆದ ವರ್ಷದ ಆಗಸ್ಟ್ ನಲ್ಲಿ ಚೀನಿ ಪಡೆಗಳು ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿರುವ ತಮ್ಮ ನೆಲೆಗಳನ್ನು ತೆರವುಗೊಳಿಸಲು ನಿರಾಕರಿಸಿದ ಬಳಿಕ ಭಾರತೀಯ ಸೇನೆಯು ಕೈಲಾಸ ಪರ್ವತ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ಬೀಡುಬಿಟ್ಟಿತ್ತೆಂದು ಎನ್ಡಿಟಿವಿ ವರದಿ ತಿಳಿಸಿದೆ. ಭಾರತೀಯ ಸೇನೆಯನ್ನು ತೆರವುಗೆಳಿಸಲು ಚೀನಿ ಸೇನೆಯು ಹಲವು ಬಾರಿ ವಿಫಲ ಪ್ರಯತ್ನ ಮಾಡಿದೆಯಾದರೂ ಭಾರತೀಯ ಸೈನಿಕರು ತಮ್ಮ ನೆಲೆಗಳನ್ನು ಭದ್ರಗೊ ಳಿಸಿದ್ದರೆಂದು ಅದು ಹೇಳಿದೆ. ಎರಡೂ ಸೇನೆಗಳು ಟ್ಯಾಂಕ್‌ಗಳನ್ನು ಹಾಗೂ ಕವಚಾವೃತ ಸೈನಿಕ ಸಾಗಣೆ ವಾಹನಗಳನ್ನು ನಿಯೋಜಿಸಿದ್ದವು ಯಾವುದೇ ಕ್ಷಣದಲ್ಲಿಯೂ ಉದ್ವಿಗ್ನತೆಯ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆಯಿತ್ತೆಂದು ವಿಶ್ಲೇಷಕರು ತಿಳಿಸಿದ್ದಾರೆ.
     
ತರುವಾಯ ನಡೆದ ಉಭಯದೇಶಗಳ ನಡುವೆ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದ ಹೊರತಾಗಿಯೂ ಚೀನಿ ಪಡೆಗಳು ಕಳೆದ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದ ಹಾಟ್‌ಸ್ಪ್ರಿಂಗ್ಸ್, ಗೋಗ್ರಾ ಹಾಗೂ ಡೆಸ್ಪಾಂಗ್ನಲ್ಲಿ ಇನ್ನೂ ಉಳಿದುಕೊಂಡಿವೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ. ಸಂಘರ್ಷಾವಸ್ಥೆಯ ಎಲ್ಲಾ ಸ್ಥಳಗಳಿಂದ ಸೇನಾ ಹಿಂತೆಗೆಯುವುದಕ್ಕಾಗಿ 12ನೇ ಸುತ್ತಿನ ಮಾತುಕತೆಗಳನ್ನು ನಡೆಸಲು ಉಭಯ ತಂಡಗಳು ಒಪ್ಪಿಕೊಂಡಿರುವುದಾಗಿ ಕಳೆದ ವಾರ ಭಾರತದ ವಿದೇಶಾಂಗ ಇಲಾಖೆ ತಿಳಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X