ಮಂಗಳೂರು: ಚಿತ್ತಾರ ಬಳಗದಿಂದ ಪೌಷ್ಟಿಕ ಆಹಾರದ ಕಿಟ್ ವಿತರಣೆ
ಮಂಗಳೂರು: ಮುಡಿಪು ಜನಶಿಕ್ಷಣ ಟ್ರಸ್ಟ್ನ ಕೊರೋನಾ ಕೇರ್ ಆಂಡ್ ಕೌನ್ಸಿಲಿಂಗ್ ಸೆಂಟರ್ನಲ್ಲಿ, ಕೋವಿಡ್ ಲಾಕ್ ಡೌನ್ ನಿಂದ ಸಂತ್ರಸ್ತರಾದ 23 ಕುಟುಂಬಗಳಿಗೆ ಪೌಷ್ಠಿಕ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯುತು.
ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನಶೆಟ್ಟಿ ಮಾತನಾಡಿ, ಕಲೆ, ಸಾಹಿತ್ಯ ಮತ್ತು ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಲು ರಚಿಸಿದ ಸಮಾನ ಮನಸ್ಕ ಗೆಳೆಯರು ಸೇರಿ ರೂಪಿಸಿ ದ ಚಿತ್ತಾರ ಬಳಗದ ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಬಾಳೆಪುಣಿ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್ ನಿಯಂತ್ರಣ ಜಾಗ್ರತಿ ಕಾರ್ಯಕ್ರಮಗಳು ದುಶ್ಚಟ ಮುಕ್ತ ಸ್ವಚ್ಛ ಗ್ರಾಮ,ಸ್ವಾವಲಂಬಿ ಗ್ರಾಮದ ಬಗ್ಗೆ ಸಮಾಲೋಚನೆ ನಡೆಯಿತು.ಬಾಳೆ ಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಝಿಯ, ಸದಸ್ಯರಾದ ಸೆಮಿಮಾ,ಜೊಹರ, ಮುಡಿಪು ವೃತ್ತಿ ಕೌಶಲ್ಯ ಕೇಂದದ ಪ್ರಾಂಶುಪಾಲ ಶರತ್ ಕುಮಾರ್ ಬಾಪು ಘನಸಂಪನ್ಮೂಲ ನಿರ್ವಹಣಾ ಘಟಕದ ಅಧ್ಯಕ್ಷ ಇಬ್ರಾಹೀಂ ನಡುಪದವು, ಪತ್ರಕರ್ತರಾದ ಪುಷ್ಪರಾಜ್ ಬಿ.ಎನ್ , ಗುರುವಪ್ಪ ಎನ್ .ಟಿ, ಉಪಸ್ಥಿತರಿದ್ದರು, ಆಕೃತಿ ಪ್ರಕಾಶನದ ಮುಖ್ಯಸ್ಥ ಹಾಗೂ ಚಿತ್ತಾರ ಬಳಗದ ಸದಸ್ಯ ಕಲ್ಲೂರು ನಾಗೇಶ್ ಪ್ರಸ್ತಾವನೆಗೈದರು.
ಸತೀಶ್ ಇರಾ ಆಶಯ ಗೀತೆ ಹಾಡಿದರು, ಚಂದ್ರಶೇಖರ ಪಾತೂರು ಸ್ವಾಗತಿಸಿ ಚಿತ್ತಾರ ಬಳಗದ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ವಂದಿಸಿದರು. ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ಇಸ್ಮಾಯಿಲ್ ,ಪುಜ್ಞಾ ಸಹಕರಿಸಿದರು.