ಬೆಂಗಳೂರು: 12 ವರ್ಷದ ಬಾಲಕ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು, ಜು.1: 12 ವರ್ಷದ ಬಾಲಕನೋರ್ವ ನೇಣು ಬಿಗಿದುಕೊಂಡಿರುವ ಘಟನೆ ಇಲ್ಲಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರ ನಿವಾಸಿ ಆಗಿರುವ ಲಾರಿ ಚಾಲಕ ಸಿದ್ದರಾಜು ಅವರ ಪುತ್ರ ದರ್ಶನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ತಿಳಿದುಬಂದಿದೆ.
ಮನೆ ಕೆಲಸ ಮಾಡಿಕೊಂಡಿದ್ದ ಅಮ್ಮ ಹಾಗೂ ಚಾಲಕನಾಗಿದ್ದ ತಂದೆ ಬುಧವಾರ ಕೆಲಸಕ್ಕೆ ಹೋಗಿದ್ದು ಸಹೋದರ ಹೊರಗಡೆ ಆಟ ವಾಡುತ್ತಿದ್ದಾಗ ಮನೆಗೆ ಬಂದ ದರ್ಶನ್ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ. ಗಾಳಿಪಟ ಹಾರಿಸುವಾಗ ಬೇರೊಬ್ಬ ಬಾಲಕನ ಜೊತೆಗೆ ಮಾಡಿಕೊಂಡ ಜಗಳದಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Next Story





